'ಕೆಟ್ಟ ಚಾಳಿ'  ಗಾಳಿ ವಿಷವಾಗಿದ್ದರೂ ಮತ್ತೆ ಪಟಾಕಿ ಸುಡುವರಿಗೆ ಏನ್ ಹೇಳ್ಬೇಕು?

Published : Nov 15, 2020, 10:00 PM IST
'ಕೆಟ್ಟ ಚಾಳಿ'  ಗಾಳಿ ವಿಷವಾಗಿದ್ದರೂ ಮತ್ತೆ ಪಟಾಕಿ ಸುಡುವರಿಗೆ ಏನ್ ಹೇಳ್ಬೇಕು?

ಸಾರಾಂಶ

ಕೊರೋನಾ ನಡುವೆಯೇ ದೀಪಾವಳಿ/ ಸರ್ಕಾರ ಏನೋ ಪಟಾಕಿ ಬ್ಯಾನ್ ಎಂದಿದೆ/ ಪಟಾಕಿ ಸಿಡಿತಕ್ಕೆ ಕೊನೆಯೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡ ನಾಗರಿಕರು

ನವದೆಹಲಿ(ನ. 15)  ದೀಪಾವಳಿ ಹಬ್ಬದ ಸಡಗರ ಎಲ್ಲ ಕಡೆ ಮನೆ ಮಾಡಿದೆ. ಈ ಬಾರಿ ಕೊರೋನಾ ಕಾರಣಕ್ಕೆ ಉಸಿರಾಟದ ಮೇಲೆ ಮತ್ತಷ್ಟು ತೊಂದರೆ ಮಾಡುವ ಪಟಾಕಿ ಬೇಡ  ಎಂದು ಸರ್ಕಾರವೇ ನಿಷೇಧ ಹೇರಿತ್ತು.  ಆದರೆ ಜನ ಮಾತ್ರ ಮಾತು ಕೇಳಿಲ್ಲ.  ಸಂಜೆಯಾಗುತ್ತಲೇ ಪಟಾಕಿ ಸದ್ದು ಕೇಳುತ್ತಲೇ ಇದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೊದಲೆ ಗಾಳಿ ವಿಷವಾಗಿದೆ. ಅದರ ನಡುವೆ ಈಗ ಪಟಾಕಿಯ ಅಬ್ಬರ. ನಾಗರಿಕರು ಸೋಶಿಯಲ್ ಮೀಡಿಯಾದಲ್ಲಿ ಪಟಾಕಿ ಸಿಡಿತದ ಬಗ್ಗೆ ತಮ್ಮ ಅಭಿಪ್ರಾಯ ಮುಕ್ತವಾಗಿ ಬರೆದಿದ್ದಾರೆ.

ಪಟಾಕಿ ಸೇಲ್; ರಿಯಾಲಿಟಿ ಚೆಕ್

ಗಾಳಿಯ ಗುಣಮಟ್ಟವನ್ನು ವಿವಿಧ ಹೆಸರಿನಲ್ಲಿ ಅಳೆಯಲಾಗುತ್ತದೆ. ಒಳ್ಳೆಯ, ತೃಪ್ತಿದಾಯಕ, ಮಾಡಿರೇಟ್, ಪೂವರ್, ವೆರಿ ಪೂವರ್ ಮತ್ತು ತೀವ್ರ. ದೆಹಲಿ ಈಗಾಗಲೇ ತೀವ್ರ ಮಟ್ಟಕ್ಕೆ ತಲುಪಿದ್ದು ಈ ನಡುವೆ ಪಟಾಕಿ ಅಬ್ಬರ ಬೇರೆ ಆತಂಕ ತಂದೊಡ್ಡಿದೆ. 

ತಮ್ಮ ಸುತ್ತಮುತ್ತಲೂ ಪಟಾಕಿ ಸಿಡಿಸುವುದನ್ನು ವಿಡಿಯೋ ಮಾಡಿರುವ ನಾಗರಿಕರು ಶೇರ್ ಮಾಡಿಕೊಂಡಿದ್ದು ಎಲ್ಲಿದೆ ಕಾನೂನು? ಎಲ್ಲಿದೆ ನಿಯಮಾವಳಿ ಎಂದು ಪ್ರಶ್ನೆ ಮಾಡಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India news live: ಸೌದಿ ಅರೇಬಿಯಾಗೆ ಪಾಕಿಸ್ತಾನದಿಂದ 13,000 ಸೈನಿಕರು, 18 ಜೆಟ್ ರವಾನೆ
Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರ: ಹೊರಗಿನ ಖಜಾನೆ ಲೆಕ್ಕ ಮುಗೀತು, ಈಗ ಒಳಗಿನ ಸರದಿ!