ಪ್ಯಾರಾಗ್ಲೈಡಿಂಗ್ ವೇಳೆ ಕೆಳಗೆ ಬಿದ್ದು 26 ವರ್ಷದ ಹೈದರಾಬಾದ್ ಯುವತಿ ಸಾವು

Published : Feb 12, 2024, 12:54 PM IST
ಪ್ಯಾರಾಗ್ಲೈಡಿಂಗ್ ವೇಳೆ ಕೆಳಗೆ ಬಿದ್ದು 26 ವರ್ಷದ ಹೈದರಾಬಾದ್ ಯುವತಿ ಸಾವು

ಸಾರಾಂಶ

ಪ್ಯಾರಾಗ್ಲೈಡಿಂಗ್ ವೇಳೆ  ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ. ಮೃತ ಯುವತಿ ತೆಲಂಗಾಣದ ಹೈದರಾಬಾದ್‌ನವರಾಗಿದ್ದು, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ತೆರಳಿದ್ದರು.

ಹೈದರಾಬಾದ್:/ ಶಿಮ್ಲಾ: ಪ್ಯಾರಾಗ್ಲೈಡಿಂಗ್ ವೇಳೆ  ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ. ಮೃತ ಯುವತಿ ತೆಲಂಗಾಣದ ಹೈದರಾಬಾದ್‌ನವರಾಗಿದ್ದು, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ತೆರಳಿದ್ದರು. ಈ ವೇಳೆ ಪ್ಯಾರಾಗ್ಲೈಡಿಂಗ್‌ ಸಾಹಸದಲ್ಲಿ ಭಾಗವಹಿಸಿದ ವೇಳೆ ಈ ದುರಂತ ಸಂಭವಿಸಿದೆ. ಮನಾಲಿಯ ಕುಲುನಲ್ಲಿ ಈ ದುರಂತ ಸಂಭವಿಸಿದ್ದು, ಪ್ಯಾರಾಗ್ಲೈಡಿಂಗ್ ಸಂಸ್ಥೆ ಹಾಗೂ ಆಕೆಯನ್ನು ಪ್ಯಾರಾಗ್ಲೈಡಿಂಗ್ ಕರೆದೊಯ್ದ ಪೈಲಟ್ ವಿರುದ್ಧ ಪ್ರಕರಣ ದಾಖಲಾಗಿದೆ. 

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್‌ನ ನವ್ಯಾ ಸಾವನ್ನಪ್ಪಿದ ಯುವತಿ. ಮಧ್ಯ ಆಕಾಶದಲ್ಲಿ ಪ್ಯಾರಾಗ್ಲೈಡಿಂಗ್‌ನಲ್ಲಿ ಹಾರಾಡುತ್ತಿದ್ದ ವೇಳೆ ಹಿಡಿತ ತಪ್ಪಿ ಆಕೆ ಎತ್ತರದಿಂದ ಆರ್‌ಸಿಸಿ ಕಟ್ಟಡವೊಂದರ ಮಹಡಿ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪೈಲಟ್‌ನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಪ್ಯಾರಾಗ್ಲೈಡಿಂಗ್‌ಗೆ ಸಂಬಂಧಿಸಿದಂತೆ ಬಳಸಿದ ಉಪಕರಣ ಪರಿಶೀಲಿಸಲಾಗಿದ್ದು,  ಅದು ಸರಿಯಾಗಿಯೇ ಇದು ಅವುಗಳನ್ನು ನೋಂದಾಯಿಸಿ ಅನುಮೋದಿಸಲಾಗಿತ್ತು. ಮಾನವ ಲೋಪದಿಂದ ಈ ಅನಾಹುತ ಸಂಭವಿಸಿದೆ ಎಂದು  ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸುನೈನಾ ಶರ್ಮಾ ಹೇಳಿದ್ದಾರೆ. 

ಹಿಮಪಾತದ ಮಧ್ಯೆಯೂ ಎರಡು ದಿನ ಪ್ರೀತಿ ಪಾತ್ರರ ಶವ ಕಾದ ನಾಯಿ!

ಘಟನೆಗೆ ಸಂಬಂಧಿಸಿದಂತೆ  ಕುಲು ಜಿಲ್ಲಾಧಿಕಾರಿ ತೋರುಲ್ ಎಸ್ ರವೀಶ್ ತನಿಖೆಗೆ ಆದೇಶಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ಹಾಗೂ 334ರಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆಯ ನಂತರ ಜಿಲ್ಲೆಯ ದೋಭಿ ಗ್ರಾಮದಲ್ಲಿ ಪ್ಯಾರಾಗ್ಲೈಡಿಂಗ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. 

Paragliding in India: ಸಾಹಸ ಮಾಡಲು ನೀವು ರೆಡಿ ಇದ್ರೆ ಈ ತಾಣಗಳಿಗೆ ಭೇಟಿ ನೀಡಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ