₹ 200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ

Kannadaprabha News   | Kannada Prabha
Published : Sep 19, 2025, 06:47 AM IST
VK Sashikala

ಸಾರಾಂಶ

ಕೆನರಾ ಬ್ಯಾಂಕ್‌ಗೆ 200 ಕೋಟಿ ರು. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಮಾಜಿ ಸಿಎಂ ದಿ। ಜಯಲಲಿತಾರ ಆಪ್ತೆ ಶಶಿಕಲಾ ಅವರಿಗೆ ಸೇರಿದ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಸುಮಾರು ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ದಾಳಿ ನಡೆಸಿದೆ.

 ಚೆನ್ನೈ: ಕೆನರಾ ಬ್ಯಾಂಕ್‌ಗೆ 200 ಕೋಟಿ ರು. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಮಾಜಿ ಸಿಎಂ ದಿ। ಜಯಲಲಿತಾರ ಆಪ್ತೆ ಶಶಿಕಲಾ ಅವರಿಗೆ ಸೇರಿದ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಸುಮಾರು ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ದಾಳಿ ನಡೆಸಿದೆ.

ಶಶಿಕಲಾ ಅವರಿಗೆ ಸೇರಿದ 10 ಆಸ್ತಿಗಳಿಗೆ ಮಾರ್ಗ್‌ ಗ್ರೂಪ್‌ನ ಜಿಆರ್‌ಕೆ ರೆಡ್ಡಿ ಎಂಬುವವರು ಬೇನಾಮಿ ಆಗಿದ್ದರು ಎಂಬ ಆರೋಪವಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಶೋಧ ಕೈಗೊಂಡಿದೆ. ಈ ಮೊದಲು, ರೆಡ್ಡಿ ಶಶಿಕಲಾರ ಬೇನಾಮಿಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆದೇಶಿಸಿತ್ತು.

ಇದೀಗ 200 ಕೋಟಿ ರು. ಬ್ಯಾಂಕ್‌ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಆದರೆ ಇದರಲ್ಲಿ ಶಶಿಕಲಾರ ಹೆಸರನ್ನು ಉಲ್ಲೇಖಿಸಿರಲಿಲ್ಲ ಎಂಬುದು ಗಮನಾರ್ಹ.

ಪ್ರಭಾವಿ ನಾಯಕನನ್ನು ಭೇಟಿಯಾದ ಶಶಿಕಲಾ, ಟಿಟಿವಿ ದಿನಕರನ್, ತಲೆಕೆಡಿಸಿಕೊಂಡ ಎಡಪ್ಪಾಡಿ

ಶಶಿಕಲಾ, ಟಿಟಿವಿ ವೈತಿಲಿಂಗಂ ಭೇಟಿ: ಎಐಡಿಎಂಕೆ ಮಾಜಿ ಸಚಿವರು ಮತ್ತು ಒ.ಪನ್ನೀರ್‌ಸೆಲ್ವಂ ಅವರ ಬೆಂಬಲಿಗ ವೈತಿಲಿಂಗಂ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಒರತ್ತನಾಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೈತಿಲಿಂಗಂ ಅವರನ್ನು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಮಾ.10 ರಂದು ಭೇಟಿಯಾದರು.

ನಂತರ ವಿ.ಕೆ. ಶಶಿಕಲಾ, ಅವರ ಸಹೋದರ ದಿವಾಕರನ್ ಕೂಡ ವೈತಿಲಿಂಗಂ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಶಶಿಕಲಾ ಹೇಳಿದ ವಿಷಯಗಳು ಈಗ ಎಡಪ್ಪಾಡಿ ಪಳನಿಸ್ವಾಮಿಯ ನಿದ್ದೆಗೆಡಿಸಿವೆ.

ಶಶಿಕಲಾ ಮಾಧ್ಯಮದವರೊಂದಿಗೆ ಮಾತನಾಡಿ, “ನಮ್ಮ ಈ ಭೇಟಿ ಎಲ್ಲವೂ ಸೇರಿದಂತಿದೆ. ಎಐಡಿಎಂಕೆ ಎಂಬ ಚಳುವಳಿಯನ್ನು ನಾಯಕರು ಜನರಿಗಾಗಿ ಪ್ರಾರಂಭಿಸಿದರು. ಡಿಎಂಕೆ ತರಹ ಅಲ್ಲ. 2026ರಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ಅದು ಪ್ರಜಾಪ್ರಭುತ್ವವಾಗಿರಲಿದೆ.

ಹೊರಗಿನ ಕೆಲವರು ಎಐಡಿಎಂಕೆ ಪಕ್ಷವನ್ನು ಪುಡಿಗಟ್ಟಬಹುದು ಎಂದು ಅಂದುಕೊಂಡಿರಬಹುದು. ಅದು ಹೇಗೆಂದರೆ, ಸಮುದ್ರದಲ್ಲಿರುವ ನೀರನ್ನು ಬಕೆಟ್‌ನಲ್ಲಿ ತೆಗೆದು ಹೊರಹಾಕುತ್ತೇನೆ ಎನ್ನುವಂತೆ. ಎಐಡಿಎಂಕೆ ಸಾರ್ವಜನಿಕರು ಮತ್ತು ಬಡವರಿಗಾಗಿ ರಚಿಸಲಾದ ಪಕ್ಷ.

2026ರಲ್ಲಿ ಎಲ್ಲರೂ ಒಗ್ಗೂಡಿ ಉತ್ತಮವಾಗಿ ಆಡಳಿತ ನಡೆಸಿ, ಅದು ನಾಯಕರು ಅಮ್ಮನ ದಾರಿಯಲ್ಲಿ ಜನರಿಗೆ ಇಷ್ಟವಾಗುವ ಆಡಳಿತ ನೀಡುತ್ತೇವೆ. ಎಲ್ಲರೂ ಒಂದಾಗಲು ಸಾಧ್ಯವಿಲ್ಲ ಎಂದು ಯಾರೊಬ್ಬರೂ ನಿರ್ಧರಿಸುವ ವಿಷಯವಲ್ಲ. ಎಐಡಿಎಂಕೆ ಕಾನೂನುಗಳ ಪ್ರಕಾರ, ನಮ್ಮ ಕಾರ್ಯಕರ್ತರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಪಕ್ಷದ ಕಾನೂನಿನ ಪ್ರಕಾರ ನಡೆಯುತ್ತದೆ. ಅದನ್ನು ನಾವು ಉತ್ತಮವಾಗಿ ಮಾಡುತ್ತೇವೆ” ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ