
ಅಡಿಲೇಡ್(ನ.27): ಆಕಾಶ್ದೀಪ್ ಸಿಂಗ್ರ ಹ್ಯಾಟ್ರಿಕ್ ಗೋಲಿನ ಹೊರತಾಗಿಯೂ ಆಸ್ಪ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಕಿ ತಂಡ 4-5 ಗೋಲುಗಳ ಸೋಲು ಅನುಭವಿಸಿತು. ಆಕಾಶ್ದೀಪ್ 10, 27 ಹಾಗೂ 59ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಮತ್ತೊಂದು ಗೋಲನ್ನು 31ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಮೂಲಕ ನಾಯಕ ಹರ್ಮನ್ಪ್ರೀತ್ ಸಿಂಗ್ ಗಳಿಸಿದರು. ಸರಣಿಯ 2ನೇ ಪಂದ್ಯ ಭಾನುವಾರ ನಡೆಯಲಿದೆ.
ವಿಶ್ವ ಕಿರಿಯರ ಬಾಕ್ಸಿಂಗ್: ಭಾರತದ ಮೂವರಿಗೆ ಚಿನ್ನ
ನವದೆಹಲಿ: ಭಾರತದ ಬಾಕ್ಸರ್ಗಳಾದ ವಿಶ್ವನಾಥ್ ಸುರೇಶ್, ವನ್ಶರಾಜ್ ಹಾಗೂ ದೇವಿಕಾ ಘೋರ್ಪಡೆ ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ವಿಶ್ವ ಕಿರಿಯರ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಜಯಿಸಿದರು. ಫೈನಲ್ಗೇರಿದ್ದ ಇನ್ನು ನಾಲ್ವರು ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಒಟ್ಟು 11 ಪದಕಗಳೊಂದಿಗೆ ಕೂಟದಲ್ಲಿ ಅತಿಹೆಚ್ಚು ಪದಕ ಗಳಿಸಿದ ರಾಷ್ಟ್ರ ಎನಿಸಿತು. ಉಜ್ಬೇಕಿಸ್ತಾನ 10 ಪದಕಗಳೊಂದಿಗೆ 2ನೇ ಸ್ಥಾನ ಪಡೆಯಿತು.
FIFA World Cup ಡೆನಾರ್ಕ್ ಮಣಿಸಿ ನಾಕೌಟ್ಗೆ ಲಗ್ಗೆಯಿಟ್ಟ ಫ್ರಾನ್ಸ್..!
ವಿಶ್ವ ಚೆಸ್: ಭಾರತದ ಕೈತಪ್ಪಿದ ಕಂಚಿನ ಪದಕ
ಜೆರುಸೆಲೆಮ್: ವಿಶ್ವ ತಂಡಗಳ ಚೆಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಶುಕ್ರವಾರ ಕಂಚಿನ ಪದಕಕ್ಕಾಗಿ ಸ್ಪೇನ್ ವಿರುದ್ಧ ನಡೆದ ಎರಡು ಸುತ್ತುಗಳ ಪಂದ್ಯದಲ್ಲಿ ಭಾರತ 1-3ರ ಅಂತರದಲ್ಲಿ ಸೋಲುಂಡಿತು. ಎರಡು ಸುತ್ತುಗಳ ಬಳಿಕ ಉಭಯ ತಂಡಗಳು 2-2ರಲ್ಲಿ ಡ್ರಾ ಸಾಧಿಸಿದವು. ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆ ಹೋಗಲಾಯಿತು. ಟೈ ಬ್ರೇಕರ್ನಲ್ಲಿ ವಿದಿತ್, ನಿಹಾಲ್ ಸೋತರೆ, ನಾರಾಯಣನ್ ಹಾಗೂ ಅಭಿಜಿತ್ ಡ್ರಾಗೆ ತೃಪ್ತಿಪಟ್ಟರು. ಇದೇ ವೇಳೆ ಫೈನಲಲ್ಲಿ ಉಜ್ಬೇಕಿಸ್ತಾನ ವಿರುದ್ಧ ಚೀನಾ 4-0ಯಲ್ಲಿ ಗೆದ್ದು ಚಿನ್ನದ ಪದಕ ಜಯಿಸಿತು.
ಐಎಸ್ಎಲ್: ಗೋವಾ ವಿರುದ್ಧ ಗೆದ್ದ ಬಿಎಫ್ಸಿ
ಗೋವಾ: 9ನೇ ಆವೃತ್ತಿಯ ಐಎಸ್ಎಲ್ ಟೂರ್ನಿಯಲ್ಲಿ ಸತತ 4 ಸೋಲು ಕಂಡು ಕಂಗೆಟ್ಟಿದ್ದ ಬೆಂಗಳೂರು ಎಫ್ಸಿ, ಕೊನೆಗೂ ಜಯದ ಹಳಿಗೆ ಮರಳಿದೆ. ಶನಿವಾರ ನಡೆದ ಎಫ್ಸಿ ಗೋವಾ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಜಯ ಸಾಧಿಸಿತು. ಬಿಎಫ್ಸಿ ಪರ ಜಾವಿ (27ನೇ ನಿ., 57ನೇ ನಿ.,) ಗೋಲು ಬಾರಿಸಿದರು. ಬಿಎಫ್ಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.
ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್ಗೆ ಸತತ 5ನೇ ಜಯ
ಹೈದರಾಬಾದ್: 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್ ಭರ್ಜರಿ ಜಯ ಮುಂದುವರೆಸಿದ್ದು, ಸತತ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಶನಿವಾರ ನಡೆದ ತೆಲುಗು ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ 38-25ರ ಅಂತರದಲ್ಲಿ ಪುಣೇರಿ ಪಲ್ಟಾನ್ ಸುಲಭ ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ದ ಯು ಮುಂಬಾ ತಂಡವು 49-41ರಲ್ಲಿ ಜಯಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.