
ಭುಬನೇಶ್ವರ(ಜ.19): ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸೋಲಿಲ್ಲದ ಸರದಾನಾಗಿ ಭಾರತದ ಓಟ ಮುಂದುವರಿದಿದೆ. ಇಂದು ವೇಲ್ಸ್ ವಿರುದ್ದ ನಡೆದ ಮಹತ್ವದ ಪಂದ್ಯದಲ್ಲಿ ಭಾರತ 4-2 ಅಂತರದ ಗೋಲುಗಳಿಂದ ಗೆಲವು ದಾಖಲಿಸಿತು. ಇದರೊದಿಗೆ ಡಿ ಗುಂಪಿನಿಂದ 2ನೇ ಸ್ಥಾನ ಅಲಂಕರಿಸಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ನ್ಯೂಜಿಲೆಂಡ್ ವಿರುದ್ದ ಕ್ರಾಸ್ಓವರ್ ಪಂದ್ಯ ಆಡಬೇಕಿದೆ.
ಪಂದ್ಯ ಆರಂಭದಲ್ಲೇ ಭಾರತ ಆತಂಕ ಎದುರಿಸಿತು ಅಕ್ಷದೀಪ್ ಎದುರಾಳಿಗಳ ಸರ್ಕಲ್ನಲ್ಲಿ ಜಾರಿ ಬೀದ್ದರು. ಆದರೆ ಯಾವುದೇ ಫೌಲ್ ಆಗಲಿಲ್ಲ. ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಲಿಲ್ಲ. 22ನೇ ನಿಮಿಷಕ್ಕೆ ಹರ್ಮನ್ಪ್ರೀತ್ ಸಿಂಗ್ ಶಾಟ್ ಬ್ಲಾಕ್ ಮಾಡಲಾಯಿತು. ಆದರೆ ಸಂಶೇರ್ ಸಿಂಗ್ ರಿಬಾಂಡ್ ಮೂಲಕ ಗೋಲು ಸಿಡಿಸಿ ಭಾರತಕ್ಕೆ ಅತೀ ದೊಡ್ಡ ಮುನ್ನಡೆ ತಂದುಕೊಟ್ಟರು.
32ನೇ ನಿಮಿಷದಲ್ಲಿ ಸಂದರ್ಭವನ್ನು ಸೂಕ್ತವಾಗಿ ಭಾರತ ಬಳಸಿಕೊಂಡಿತು. ಮನ್ದೀಪ್ ಸಿಂಗ್ ನೆರವಿನೊಂದಿಗೆ ಅಕ್ಷದೀಪ್ ಅದ್ಭುತ ಗೋಲು ಸಿಡಿಸಿದರು. ಈ ಮೂಲಕ ಭಾರತ 2-0 ಮುನ್ನಡೆ ಪಡೆಯಿತು. ಆದರೆ 43ನೇ ನಿಮಿಷದಲ್ಲಿ ವೇಲ್ಸ್ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್ ಬಳಸಿ ಮೊದಲ ಗೋಲು ಸಿಡಿಸಿತು. 44ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ವೇಲ್ಸ್ ಗೋಲಾಗಿ ಪರಿವರ್ತಿಸಿ. ಈ ಮೂಲಕ 2-2 ಅಂತರದಲ್ಲಿ ಸಮಬಲಗೊಂಡಿತು. ಭಾರತ ಆತಂಕ ಹೆಚ್ಚಾಯಿತು.
ನಾಲ್ಕನೇ ಕ್ವಾರ್ಟರ್ ವೇಳೆ ಅಕ್ಷದೀಪ್ ಸಿಡಿಸಿದ ಗೋಲು ಭಾರತಕ್ಕೆ ವರವಾಯಿತು. ಭಾರತ 3-2 ಅಂತರದ ಮುನ್ನಡೆ ಪಡೆದುಕೊಂಡಿತು. ಅಂತಿಮ ಹಂತದಲ್ಲಿ ವೇಲ್ಸ್ ತಿರುಗೇಟು ನೀಡುವ ಪ್ರಯತ್ನ ನಡೆಸಿತು. ಆದರೆ ಭಾರತ ಅವಕಾಶ ನೀಡಲಿಲ್ಲ. ಕೊನೆಯ ಹಂತದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಬಳಸಿಕೊಂಡಿತು. ಡ್ರ್ಯಾಗ್ ಫ್ಲಿಕ್ ಮೂಲಕ ಹರ್ಮನ್ಪ್ರೀತ್ ಗೋಲು ಸಿಡಿಸಿದರು. ಈ ಮೂಲಕ ಭಾರತ 4-2ಅಂತರದ ಗೆಲುವು ದಾಖಲಿಸಿತು.
ಇದೀಗ ಭಾರತ ಕ್ವಾರ್ಟರ್ ಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧ ಕ್ರಾಸ್ಓವರ್ ಪಂದ್ಯ ಆಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.