
ಬೆಂಗಳೂರು(ಜು.07) ಕೊರೋನಾ ಕಾರಣಕ್ಕೆ ಒಬ್ಬೊಬ್ಬರು ಒಂದೊಂದು ಜನ ಮೆಚ್ಚುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಇಲ್ಲೊಬ್ಬರು ಸಂಗೀತ ನಿರ್ದೇಶಕ ಮತ್ತೆ ತಮ್ಮ ವೈದ್ಯ ಕೆಲಸಕ್ಕೆ ಮರಳಿದ್ದಾರೆ.
ಉಪೇಂದ್ರ ಮತ್ತು ರಚಿತಾ ರಾಮ್ ಕಾಣಿಸಿಕೊಂಡಿದ್ದ ಐ ಲವ್ ಯು ಚಿತ್ರಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ಕಿರಣ್ ಮೂಲತಃ ವೈದ್ಯರು. ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸಗೈಯುತ್ತಿರುವುದರಿಂದ ಕಿರಣ್ ತೋಟಂಬೈಲು ಇದೀಗ ಕೊರೋನಾ ವಾರಿಯರ್ ಆಗಿ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಮುರುಕಲು ಸೇತುವೆ ಮೇಲೆ ಆಶಾ ಕಾರ್ಯಕರ್ತೆಯರ ನಡಿಗೆ
ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ಕೊವಿಡ್ ಕ್ಲಿನಿಕ್ ಅಲ್ಲಿ ಡಾಕ್ಟರ್ ಕಿರಣ್ ಕಾರ್ಯನಿರತರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಮನೆಯಲ್ಲಿ ಬಿಟ್ಟು ಕೋವಿಡ್ ವಾರಿಯರ್ ಆಗಿದ್ದಾರೆ ಎಂಬಿಬಿಎಸ್ ಡಾಕ್ಟರ್. ಡಾ. ಕಿರಣ್ ಅವರಿಗೊಂದು ಅಭಿನಂದನೇ ಹೇಳೋಣ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.