ಹಾವೇರಿಯ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಬೆಂಕಿ; ಸುಟ್ಟು ಭಸ್ಮವಾದ ನೂರಾರು ಎಕರೆ ಅರಣ್ಯ!

Published : Mar 21, 2026, 09:18 PM IST
Haveri Forest Fire

ಸಾರಾಂಶ

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಪ್ರಸಿದ್ಧ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಈ ದುರ್ಘಟನೆಯಿಂದ ಅಪರೂಪದ ಸಸ್ಯ ಸಂಪತ್ತು ನಾಶವಾಗಿದ್ದು, ಕೃಷ್ಣಮೃಗ ಸೇರಿದಂತೆ ಅನೇಕ ವನ್ಯಜೀವಿಗಳು ಪ್ರಾಣಭಯದಲ್ಲಿವೆ. 

ಹಾವೇರಿ (ಮಾ.21): ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಅರಣ್ಯ ಪ್ರದೇಶವಾದ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ರಾಣೇಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರ ಹಾಗೂ ಐರಣಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೇಸಿಗೆಯ ಬಿಸಿಲಿಗೆ ಒಣಗಿದ್ದ ಗಿಡಗಂಟೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಅರಣ್ಯಧಾಮವನ್ನು ಆವರಿಸಿದೆ. ಈ ಗುಡ್ಡವು ಅಪರೂಪದ ವನಸ್ಪತಿ ಗಿಡಮೂಲಿಕೆಗಳಿಂದ ಸಂಪದ್ಭರಿತವಾಗಿದ್ದು, ಬೆಂಕಿಯ ಅಬ್ಬರಕ್ಕೆ ಅಮೂಲ್ಯ ಸಸ್ಯಸಂಪತ್ತು ನಾಶವಾಗಿದೆ.

ವನ್ಯಜೀವಿಗಳಿಗೆ ಆಪತ್ತು

ಈ ಭಾಗವು ಕೃಷ್ಣಮೃಗಗಳು ಸೇರಿದಂತೆ ಹತ್ತಾರು ಪ್ರಾಣಿ-ಪಕ್ಷಿಗಳ ವಾಸಸ್ಥಾನವಾಗಿರುವ ಅಭಯಾರಣ್ಯವಾಗಿದೆ. ಧಗಧಗನೆ ಉರಿಯುತ್ತಿರುವ ಬೆಂಕಿಯಿಂದಾಗಿ ವನ್ಯಜೀವಿಗಳು ಪ್ರಾಣಭಯದಲ್ಲಿ ದಿಕ್ಕಾಪಾಲಾಗಿ ಓಡುತ್ತಿವೆ. ವಿಶೇಷವೆಂದರೆ, ಸರ್ಕಾರವು ಇತ್ತೀಚೆಗಷ್ಟೇ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿತ್ತು. ಆದರೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಪರಿಸರ ಪ್ರೇಮಿಗಳಲ್ಲಿ ಆಕ್ರೋಶ ಮೂಡಿದೆ.

ಪ್ರಸ್ತುತ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

 

PREV
Read more Articles on
click me!

Recommended Stories

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ದರದಲ್ಲಿ ಅಚ್ಚರಿ ಬದಲಾವಣೆ ; ಮುಂದುವರಿದ ಬೇಡಿಕೆ