ಇಲ್ಲ ಅಂದರೆ. ಕೆಲವರು ಹೇಳುತ್ತಿರುವಂತೆ ಅದು 'ಕರ್ಮ ಫಲ' ಇರಬಹುದು. ಅಥವಾ, ಆ ಕ್ಷಣದ ಆಕಸ್ಮಿಕ ನಿರ್ಧಾರವೂ ಆಗಿರಬಹುದು. ಆದರೆ, ಹೋಗಿರುವ ಜೀವ ಮತ್ತೆ ಮರಳಿ ಬರಲಂತೂ ಸಾಧ್ಯವಿಲ್ಲ. ಸಾವಿನ ಜೊತೆಗೆ ಕಾರಣ ಕೂಡ ಮಣ್ಣಾಗಿ ಹೋದರೂ ಅಚ್ಚರಿಯೇನಿಲ್ಲ. ಆದರೆ, ರಿಯಲ್ ಎಸ್ಟೇಟ್ ಮೂಲಕ ಅಷ್ಟೊಂದು ಹಣ ಗಳಿಸಿ, ಎಲ್ಲೆಲ್ಲೋ ಹೂಡಿಕೆ ಮಾಡಿ, ಸಾಕಷ್ಟು ಬಿಸಿನೆಸ್ಗಳಿಗೆ ಬಂಡವಾಳ ಹಾಕಿ ನಡೆಸುತ್ತ, ಹಲವು ಸಿನಿಮಾ-ಕಿರುತೆರೆ ಶೋಗಳಿಗೆ ಪ್ರಾಯೋಜಕತ್ವ ಮಾಡುತ್ತ ಬಾಳಿ ಬದುಕಿದವರು ಇದ್ದಕ್ಕಿದ್ದಂತೆ ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಾರೆ ಎಂದರೆ ಶಾಕಿಂಗ್ ಸಂಗತಿಯೇ ಸರಿ. ಆದರೆ, ಸದ್ಯಕ್ಕಂತೂ ಸಿಜೆ ರಾಯ್ ಅವರ ಸಾವು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.