Vastu tips: ಈ 6 ವಸ್ತುಗಳನ್ನು ಮನೆಗೆ ತನ್ನಿ.. ಮತ್ತೆಂದೂ ಹಣದ ಸಮಸ್ಯೆ ಇರೋಲ್ಲ!

Published : Sep 10, 2022, 12:59 PM IST

ವಾಸ್ತು ಶಾಸ್ತ್ರದಲ್ಲಿ, ಮನೆಯ ದಿಕ್ಕಿನಿಂದ ಸಮಸ್ಯೆಯಾಗುತ್ತಿದ್ದರೆ ಕೆಲ ವಸ್ತುಗಳ ಮೂಲಕ ವಾಸ್ತು ದೋಷ ಸರಿಪಡಿಸಬಹುದು. ವಾಸ್ತು ದೋಷ ಸರಿಪಡಿಸಿ ಆರ್ಥಿಕ ಲಾಭ ತರುವ 6 ವಸ್ತುಗಳು ಯಾವುವು ನೋಡೋಣ.

PREV
17
Vastu tips: ಈ 6 ವಸ್ತುಗಳನ್ನು ಮನೆಗೆ ತನ್ನಿ.. ಮತ್ತೆಂದೂ ಹಣದ ಸಮಸ್ಯೆ ಇರೋಲ್ಲ!

ವಾಸ್ತು ಶಾಸ್ತ್ರವು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಆಧರಿಸಿದೆ. ಧನಾತ್ಮಕ ಶಕ್ತಿಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಆದರೆ ನಕಾರಾತ್ಮಕ ಶಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೂ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ವಾಸ್ತುವಿನಲ್ಲಿ, ಮಲಗುವ ಕೋಣೆ, ಅಡುಗೆಮನೆ, ಸ್ನಾನಗೃಹ, ಮೆಟ್ಟಿಲುಗಳು ಮತ್ತು ಮನೆಯ ಕಿಟಕಿಗಳಿಗೆ ನಿರ್ದಿಷ್ಟ ನಿರ್ದೇಶನವನ್ನು ನೀಡಲಾಗಿದೆ. ಯಾವುದನ್ನಾದರೂ ತಪ್ಪು ದಿಕ್ಕಿನಲ್ಲಿ ಮಾಡಿದರೆ, ಅದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಒಂದು ವೇಳೆ ನಿಮ್ಮ ಮನೆಯ ದಿಕ್ಕು ಅಥವಾ ಮನೆಯೊಳಗಿನ ಕೋಣೆಯ ದಿಕ್ಕು ವಾಸ್ತು ಪ್ರಕಾರ ಇರಲಿಲ್ಲವೆಂದಾಗ ಸಮಸ್ಯೆಗಳು ಹೆಚ್ಚುತ್ತವೆ. ಹಾಗಂಥ ಹೆದರಬೇಕಿಲ್ಲ. ವಾಸ್ತುವಿನಲ್ಲಿ ಮನೆಯ ದಿಕ್ಕನ್ನು ಸರಿಪಡಿಸಲು ಕೆಲವು ವಿಶೇಷ ವಿಷಯಗಳನ್ನು ಹೇಳಲಾಗುತ್ತದೆ. ನೀವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಈ ವಸ್ತುಗಳು ಮನೆಯಲ್ಲಿ ವಾಸ್ತು ದೋಷ ನಿವಾರಿಸಿ ಧನಾತ್ಮಕ ಶಕ್ತಿಯನ್ನು ತರುತ್ತವೆ ಮತ್ತು ನಿಮ್ಮನ್ನು ಆರ್ಥಿಕವಾಗಿ ಸದೃಢಗೊಳಿಸುತ್ತವೆ.
 

27

ಸ್ಪಟಿಕದ ಚೆಂಡು
ವಾಸ್ತು ಸ್ಫಟಿಕ ಚೆಂಡು(Crystal balls)ಗಳನ್ನು ಸ್ಪಷ್ಟ ಸ್ಫಟಿಕ ಶಿಲೆಯಿಂದ ತಯಾರಿಸಲಾಗುತ್ತದೆ. ಅವನ್ನು ಮನೆ ಅಥವಾ ಕಚೇರಿಯಲ್ಲಿ ಇರಿಸಿದಾಗ ಬಹಳ ಆಕರ್ಷಕವಾಗಿ ಕಾಣುತ್ತವೆ. ಇವು ನಿರ್ದಿಷ್ಟ ಶಕ್ತಿ, ಆಲೋಚನೆ ಅಥವಾ ಉದ್ದೇಶವನ್ನು ವರ್ಧಿಸುವ ಮೂಲಕ ಸಹಾಯ ಮಾಡುತ್ತವೆ. ಈ ಹರಳುಗಳು ಯಾವುದೇ ರೀತಿಯ ಶಕ್ತಿಯನ್ನು ಹೀರಿಕೊಳ್ಳುವುದರಿಂದ, ಅದನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯ. ಅದೃಷ್ಟಕ್ಕಾಗಿ ಕೆಂಪು, ಸಂಬಂಧಗಳಿಗೆ ಗುಲಾಬಿ, ಹಣಕ್ಕಾಗಿ ಕಿತ್ತಳೆ ಹೀಗೆ ವಿವಿಧ ಬಣ್ಣದ ಹರಳುಗಳಿವೆ.
 

37

ಮನೆಯಲ್ಲಿ ಪಿರಮಿಡ್ ಇರಿಸಿ
ವಾಸ್ತು ಶಾಸ್ತ್ರದಲ್ಲಿ ಪಿರಮಿಡ್‌(Pyramid)ಗಳಿಗೆ ವಿಶೇಷ ಮಹತ್ವವಿದೆ. ವಾಸ್ತು ದೋಷವಿರುವ ಮನೆಯ ದಿಕ್ಕಿಗೆ ಪಿರಮಿಡ್ ಇಡುವುದರಿಂದ ವಾಸ್ತು ಸುಧಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದ ಪಿರಮಿಡ್ ಆರ್ಥಿಕ ನಿರ್ಬಂಧಗಳನ್ನು ಜಯಿಸಲು ಸಹಾಯ ಮಾಡುತ್ತದೆ. ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತುಕೊಳ್ಳುವಂತಹ ಸ್ಥಳದಲ್ಲಿ ಪಿರಮಿಡ್ ಇರಿಸಿ.

47

ಹನುಮಾನ್ ಪ್ರತಿಮೆ
ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಆರ್ಥಿಕ ಸ್ಥಿತಿಯನ್ನು ಸದೃಢವಾಗಿಡಲು, ಮನೆಯಲ್ಲಿ ಪಂಚಮುಖಿ ಹನುಮಾನ್(Hanuman) ವಿಗ್ರಹ ಅಥವಾ ಫೋಟೋವನ್ನು ಇರಿಸಿ. ಇದನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಸ್ಥಾಪಿಸಿ ಮತ್ತು ಪ್ರತಿದಿನ ಪೂಜಿಸಿ.

57

ಆಮೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಆಮೆ(tortoise)ಯನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು. ಮರದ ಆಮೆಯನ್ನು ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇರಿಸುವುದರಿಂದ ನಿಮ್ಮ ಮನೆಯಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೀವನವನ್ನು ಸಂತೋಷ, ಉತ್ತಮ ಕರ್ಮ ಮತ್ತು ಸಾಧನೆಯಿಂದ ತುಂಬುತ್ತದೆ.

67

ಲಕ್ಷ್ಮಿ-ಕುಬೇರ್ ಅವರ ಫೋಟೋ
ನಿಮ್ಮ ಮನೆಯ ಪೂಜಾ ಸ್ಥಳದಲ್ಲಿ ತಾಯಿ ಲಕ್ಷ್ಮಿಯ ಪದ್ಮ ಮತ್ತು ಕುಬೇರನ ಚಿತ್ರವನ್ನು ಇರಿಸಿ. ಲಕ್ಷ್ಮಿಯು ಸಂಪತ್ತಿನ ದೇವತೆ ಮತ್ತು ಕುಬೇರನು ಸಂಪತ್ತು ಮತ್ತು ಸಮೃದ್ಧಿಯ ದೇವರು. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರದಲ್ಲಿ ಲಕ್ಷ್ಮಿ-ಕುಬೇರರ ಚಿತ್ರವಿರಬೇಕು. ಇದಲ್ಲದೇ ಮನೆಯಲ್ಲಿ ವಾಸ್ತು ದೇವತೆಯ ವಿಗ್ರಹವನ್ನು ಇಡುವುದರಿಂದ ಹಣದ ಕೊರತೆಯೂ ದೂರವಾಗುತ್ತದೆ.

77

ಒಂದು ಜಗ್ ತುಂಬ ನೀರು ಇಟ್ಟುಕೊಳ್ಳಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರು ತುಂಬಿದ ಜಗ್ ಇಡಬೇಕು. ಇದನ್ನು ಮನೆಯ ಉತ್ತರ(north) ದಿಕ್ಕಿನಲ್ಲಿ ಇಡಬೇಕು. ನೀವು ಜಗ್ ಬದಲಿಗೆ ಸಣ್ಣ ಹೂಜಿ ಸಹ ಇರಿಸಬಹುದು. ಈ ಹೂಜಿಯನ್ನು ನೀರಿನಿಂದ ತುಂಬಿಸಿ. 

Read more Photos on
click me!

Recommended Stories