ಒಗ್ಗರಣೆಗೆ ಕರಿಬೇವು ಇದ್ದರೇನೇ ಸೊಗಸು. ಅದಕ್ಕಾಗಿಯೇ ಅದನ್ನು ಒಗ್ಗರಣೆ ಸೊಪ್ಪು ಎಂದೂ ಕರೆಯುತ್ತಾರೆ. ಹಾಗೆಂದು ಕರಿಬೇವು ಕೇವಲ ಒಗ್ಗರಣೆಗೆ ಮಾತ್ರವಲ್ಲ, ಇದು ದಿವ್ಯ ಔಷಧವೂ ಹೌದು. ಹಲವು ಸಮಸ್ಯೆಗಳಿಗೆ ರಾಮಬಾಣ. ಅದರಲ್ಲಿಯೂ ಕೂದಲು ಉದುರುವ ಸಮಸ್ಯೆಗೆ ಇದು ಉತ್ತಮ ಔಷಧವೂ ಹೌದು. ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಕರಿಬೇವು ವಾಸ್ತು ದೋಷಕ್ಕೂ ಇದು ಉತ್ತಮವಾಗಿದೆ.