ವೈಷ್ಣವ್​ಗೆ ಅವನ ಪ್ರೀತಿ ಅರ್ಥ ಮಾಡಿಸಿದ ಕುಸುಮಾ, ಕಾವೇರಿ Moye Moye ಅಂದ್ರು ಜನ

First Published Jul 5, 2024, 5:53 PM IST

ದೊಡ್ಡಮ್ಮ ಕುಸುಮಾ ತನ್ನ ಮಾತಿನಾ ಬಾಣಗಳನ್ನು ಬಿಡುವ ಮೂಲಕವೇ ವೈಷ್ಣವ್ ಗೆ ಅವನ ಪ್ರೀತಿಯನ್ನು ಅರ್ಥ ಮಾಡಿಸಿದ್ದು, ಕಾವೇರಿ ಸ್ಥಿತಿ ಇಂಗು ತಿಂದ ಮಂಗನಂತಾಗಿದೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಸದ್ಯದ ಕಥೆ ಎಲ್ಲರಿಗೂ ಗೊತ್ತಿದೆ. ಲಕ್ಷ್ಮೀ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಕಾವೇರಿ ಸೊಸೆ ಸಾವನ್ನಪ್ಪಲಿ ಎಂದು ಕಾಯುತ್ತಿದ್ರೆ, ವೈಷ್ಣವ್ ಹೆಂಡ್ತಿಯ ಪ್ರಾಣ ಉಳಿಸೋದಕ್ಕೆ ವೃತಗಳನ್ನೆಲ್ಲಾ ಮಾಡ್ತಿದ್ದಾನೆ. 
 

ಆಸ್ಪತ್ರೆಗೆ ಬಂದ ದೊಡ್ಡಮ್ಮ ಕುಸುಮಾ, ಒಂದು ಕಡೆ ಸೊಸೆಯನ್ನು ಸರಿಯಾಗಿ ನೋಡಿಕೊಳ್ಳದ ಕಾವೇರಿಗೆ ಬಯ್ಯುತ್ತಿದ್ದರೆ, ಇನ್ನೊಂದು ಕಡೆ ಲಕ್ಷ್ಮೀ ಮೇಲೆ ಇರುವ ಪ್ರೀತಿಯನ್ನೂ ಇನ್ನೂ ಅರ್ಥ ಮಾಡಿಕೊಳ್ಳದೇ ಹೆಂಡ್ತಿ ಹುಷಾರಾಗಿ ಬರ್ಲಿ ಅಂತ ವೃತ ಮಾಡುತ್ತಿರುವ ವೈಷ್ಣವ್ ಗೆ ಬೆಂಡೆತ್ತುತ್ತಿದ್ದಾರೆ ಕುಸುಮಾ. 
 


ನಿನ್ನಿಂದಾಗಿಯೇ ಲಕ್ಷ್ಮೀ ಈ ಸ್ಥಿತಿಗೆ ಬಂದ್ಲು ಎನ್ನುವ ಕುಸುಮಾ, ನೀವು ಲಕ್ಷ್ಮೀನ ಅರ್ಥ ಮಾಡಿಕೊಳ್ಳದ್ದಕ್ಕೆ ಅವಳು ಈ ಪರಿಸ್ಥಿತಿಗೆ ಬಂದ್ದದ್ದು. ನೀವು ಅವಳನ್ನ ಅರ್ಥ ಮಾಡ್ಕೊಳಿಲ್ಲ ಅಂದ್ರೆ, ನೀನು ವೃತ ಅಲ್ಲ ಸಾವಿತ್ರಿ ಥರ ಯಮನ ಹಿಂದೆ ಹೋದ್ರೂ ಅವಳು ಎಚ್ಚರ ಆಗಲ್ಲ ಎನ್ನುತ್ತಾರೆ ಕುಸುಮಾ. ದೊಡ್ಡಮ್ಮ ಏನು ಹೇಳ್ತಿದ್ದಾರೆ ಅನ್ನೋದೆ ತಿಳಿಯದೆ ಫುಲ್ ಕನ್ ಫ್ಯೂಸ್ ಆದ ವೈಷ್ಣವ್ ದೊಡ್ಡಮ್ಮ ನಾನು ಲಕ್ಷ್ಮಿಗೋಸ್ಕರ ಏನ್ ಬೇಕಾದ್ರೂ ಮಾಡೋಕೆ ಸಿದ್ದ ಎನ್ನುತ್ತಾನೆ. 
 

ಲಕ್ಷ್ಮೀಯನ್ನು ನನ್ನ ಹೆಂಡ್ತಿ ನನ್ನ ಜವಾಬ್ಧಾರಿ ಅಂತ ಹೇಳ್ಕೊಂಡು ವೃತ, ಪೂಜೆ, ಇದನ್ನೆಲ್ಲಾ ಯಾಕೆ ಮಾಡೋದು, ಇಷ್ಟೊಂದು ಪರಿತಪಿಸೋದು ಯಾಕೆ? ಅವಳಿಗೆ ಏನಾದ್ರೂ ಆದ್ರೆ ಆಗ್ಲಿ, ಸತ್ರೆ ಸಾಯ್ಲಿ ಅಂತ ಬಿಟ್ಟು ಬಿಡು, ಬಲವಂತದ ಜವಾಬ್ಧಾರಿಯಾದ್ರೂ ಕಳೆದುಹೋಗುತ್ತೆ ಎಂದು ಕುಸುಮಾ ಹೇಳುವಾಗ ವೈಷ್ಣವೆಚ್ಚೆತ್ತುಕೊಳ್ತಾರೆ, ಲಕ್ಷ್ಮೀ ನನ್ನ ಜವಾಬ್ಧಾರಿ ಮಾತ್ರ ಅಲ್ಲ ನನ್ನ ಜೀವನ ಅವಳು ಅಂತಾನೆ. 
 

ಲಕ್ಷ್ಮೀನ ಸಾಯ್ಲಿ ಅಂತ ಹೇಗೆ ಬಿಡ್ಲಿ,  ಜೀವ ಕೊಟ್ಟಾದ್ರೂ ಅವಳನ್ನ ಉಳಿಸಿಕೊಳ್ತೀನಿ ಎಂದು ವೈಷ್ಣವ್ ಮತ್ತೆ ಒತ್ತಿ ಹೇಳ್ತಾನೆ, ಆವಾಗ ಕುಸುಮ ಅದೇ ಯಾಕೆ ಎನ್ನುವಾಗ್ಲೆ ಇಲ್ಲಿವರೆಗೆ ವೈಷ್ಣವ್ ಮನಸಲ್ಲಿ ಉಳಿದಿದ್ದ ಪ್ರೀತಿ ಹೊರಗೆ ಬರುತ್ತೆ, ಮಹಾಲಕ್ಷ್ಮೀ ನನ್ನ ಜೀವನ ಅಂತ ನಂಗೆ ಗೊತ್ತಾಗಿದೆ, ಐ ಲವ್ ಹರ್ ಎನ್ನುತ್ತಾರೆ ವೈಷ್ಣವ್. ಇದನ್ನ ಕೇಳಿ ಮನೆಯವರೆಲ್ಲರೂ ಖುಷೀಯಾದರೆ, ಕಾವೇರಿ ಮುಖ ಮಾತ್ರ ಇಂಗು ತಿಂದ ಮಂಗನಂತಾಗಿ ಶಾಕ್ ನಿಂದ ಮಗನನ್ನ ನೋಡ್ತಾಳೆ. 
 

ಸದ್ಯ ಈ ಪ್ರೋಮೋ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಕೊನೆಗೂ ವೈಷ್ಣವ್ ಗೆ ತನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ಕುಸುಮಾಂಬೆಯೇ ಬರಬೇಕಿತ್ತು ಎನ್ನುತ್ತಿದ್ದಾರೆ ಜನ. ಅಷ್ಟೇ ಅಲ್ಲ ಕುಸುಮಾ ಸೂಪರ್, ಕಾವೇರಿ ಮೋಯೆ ಮೋಯೆ ಅಂತಿದ್ದಾರೆ. ಕಾವೇರಿಗೆ ಕಾವೇರಿ ನದಿಗೆ ಗತಿ ಅಂತಾನು ಹೇಳ್ತಿದ್ದಾರೆ. ಕುಸುಮ ಅಮ್ಮ ಅಂದ್ರೆ ಸುಮ್ನೆನಾ..? ಎಂಥಾ ಟ್ವಿಸ್ಟ್ ಕೊಟ್ರು ಕುಸುಮಮ್ಮ ಎಂದು ಜನ ಕುಸುಮಾರನ್ನ ಹೊಗಳ್ತಿದ್ದಾರೆ. 
 

ಮತ್ತೊಂದೆಡೆ ವೀಕ್ಷಕರು ವೈಷ್ಣವ ಮತ್ತೆ ಲಕ್ಷ್ಮಿ ಒಂದಾಗೋದು ಖುಷಿನೇ ಆದರೆ ಪಾಪ ಕೀರ್ತಿ ಏನು ತಪ್ಪೇ ಮಾಡದೆ ವೈಷ್ಣವ್ ಗೆ ಒಳ್ಳೇದು ಆಗ್ಲಿ ಅಂದಕೊಂಡು ಮೋಸ ಹೋದಳು ಎಂದು ಹೇಳ್ತಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ವೈಷ್ಣವ್ -ಲಕ್ಷ್ಮೀ ಮತ್ತು ವೈಷ್ಣವ್ -ಕೀರ್ತಿ ಪರ ವಿರೋಧ ಶುರುವಾಗಿದೆ. ಇನ್ನು ಯಾವುದಕ್ಕೂ ಕೀರ್ತಿ ಬಂದ ಮೇಲೆ ಕತೆ ಏನಾಗುತ್ತೆ, ಎಲ್ಲೆಲ್ಲಿ ಹೋಗುತ್ತೆ ಅನ್ನೋದನ್ನ ನೋಡಬೇಕು. 
 

click me!