ಕಥೆಗೆ ಸಡನ್ ಆಗಿ ಯಾರು ಅಂದುಕೊಳ್ಳದ ಟ್ವಿಸ್ಟ್ ಬರೋದಕ್ಕೆ ಕಾರಣ ಟಿಆರ್’ಪಿ., ಪ್ರತಿ ಬಾರಿ ಟಿಆರ್ಪಿ ಬಿದ್ದಾಗ ಜನಪ್ರಿಯ ನಿರ್ಮಾಪಕಿ ಏಕ್ತಾ ಕಪೂರ್ 'ಯಾರನ್ನಾದರೂ ಸಾಯಿಸಿ’ (kill someone) ಎಂದು ಹೇಳುತ್ತಿದ್ದರು. ಪ್ರತಿ ಬಾರಿ ಟಿಆರ್ಪಿ 32 ಕ್ಕಿಂತ ಕಡಿಮೆ ಇದ್ದಾಗ, ಏಕ್ತಾ 'ಟಿಆರ್ಪಿ ಗಿರ್ಗಯಿ ಕಿಸಿ ಕೋ ಮಾರೋ' ಎಂದು ಹೇಳುತ್ತಿದ್ದರಂತೆ ಅಂದ್ರೆ ಸಡನ್ ಆಗಿ ಸೀರಿಯಲ್ ನ ಒಂದು ಪಾತ್ರವನ್ನು ಸಾಯಿಸೋದರಿಂದ ಜನರಿಗೆ ಕುತೂಹಲ ಹೆಚ್ಚಾಗುತ್ತೆ, ಯಾಕೆ ಇವನ ಕೊಲೆ ಆಯ್ತು ಎಂದು, ಅದಕ್ಕಾಗಿಯಾದ್ರೂ ಹೆಚ್ಚಿನ ಜನ ಸೀರಿಯಲ್ ನೋಡೋ ಆಸಕ್ತಿ ಉಳಿಸಿಕೊಂಡಿರ್ತಾರೆ, ಇದರಿಂದ ಟಿಆರ್’ಪಿ ಕೂಡ ಹೆಚ್ಚುತ್ತದೆ ಎನ್ನುವ ನಂಬಿಕೆ ನಿರ್ಮಾಪಕರದ್ದು.