ಸಿದ್ಧಾರ್ಥ್ ಶುಕ್ಲಾ ಅವರ ನಿಧನದ ನಂತರದ ತನ್ನ ಲವ್‌ಲೈಫ್‌ ಬಗ್ಗೆ ಮಾತನಾಡಿದ ಶೆಹನಾಜ್ ಗಿಲ್

First Published Feb 21, 2023, 5:27 PM IST

ನಟಿ ಶೆಹನಾಜ್ ಗಿಲ್ ತನ್ನ ರಿಲೆಷನ್‌ಶಿಪ್‌ ಮತ್ತು ಮದುವೆಯ ಯೋಜನೆಗಳ ಬಗ್ಗೆ ಗೆಳೆಯ ಸಿದ್ಧಾರ್ಥ್ ಶುಕ್ಲಾ ಅವರ ಮರಣದ ನಂತರ ಎರಡು ವರ್ಷಗಳ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಗೊತ್ತಾ ಶೆಹನಾಜ್‌ ಗಿಲ್‌ ?

ಸಿದ್ಧಾರ್ಥ್ ಶುಕ್ಲಾ ಅವರ ನಿಧನದ ನಂತರದ ತನ್ನ ಪ್ರೇಮ ಜೀವನದ ಬಗ್ಗೆ ಮಾತನಾಡಿದ ಶೆಹನಾಜ್ ಗಿಲ್ 'ಎಂದಿಗೂ ಮದುವೆಯಾಗುವುದಿಲ್ಲ' ಎಂದು ಹೇಳಿದ್ದಾರೆ.
 

ಶೆಹನಾಜ್ ಗಿಲ್ ಅವರು ತಮ್ಮ ಚಾಟ್ ಪ್ರೋಗ್ರಾಂ ದೇಸಿ ವೈಬ್ಸ್ ಅನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ  ಪ್ರಸಿದ್ಧ ಸೆಲೆಬ್ರಿಟಿಗಳು ಭಾಗವಹಿಸಿ  ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡುತ್ತಾರೆ.
 

ಪಂಜಾಬಿ ಗಾಯಕಿ ಶೆಹನಾಜ್‌ ಇತ್ತೀಚೆಗೆ ಯೂಟ್ಯೂಬರ್ ಭುವನ್ ಬಾಮ್ ಅವರೊಂದಿಗೆ ಈ ಶೋನಲ್ಲಿ ಮಾತನಾಡಿದ್ದಾರೆ. ಈ  ಸಮಯದಲ್ಲಿ ಶೆಹನಾಜ್ ತನ್ನ ಪ್ರೀತಿಯ ಸ್ಥಿತಿ ಮತ್ತು ಮದುವೆಯ ಉದ್ದೇಶಗಳನ್ನು ಬಹಿರಂಗಪಡಿಸಿದರು.

ಶೆಹನಾಜ್ ತನ್ನ ಒಡನಾಡಿ ಸಿದ್ಧಾರ್ಥ್ ಶುಕ್ಲಾ ಅವರ ಸಾವಿನ ನಂತರ ಆಘಾತ ಮತ್ತು ದುಃಖವನ್ನು ಅನುಭವಿಸಿದರು. ಇಬ್ಬರೂ ಟಿವಿ ಶೋ ಬಿಗ್ ಬಾಸ್‌ನಲ್ಲಿ ಭೇಟಿಯಾದರು ಮತ್ತು ಅವರ ಸಂಬಂಧವು ವಿಶ್ವಾದ್ಯಂತ ಮೆಚ್ಚುಗೆ ಗಳಿಸಿತು. ರಿಯಾಲಿಟಿ ಶೋ ನಂತರ, ಅವರು ಉತ್ತಮ ಸಂಬಂಧವನ್ನು ಹೊಂದಿದ್ದರು. 

2021 ರಲ್ಲಿ ಸಿದ್ಧಾರ್ಥ್ ಶುಕ್ಲಾ ಅವರ ಹಠಾತ್ ಸಾವಿನಿಂದ ಶೆಹನಾಜ್‌ ಸಂಪೂರ್ಣ ಛಿದ್ರಗೊಂಡರು. ಈ ನಷ್ಟದಿಂದ ಚೇತರಿಸಿಕೊಳ್ಳಲು ಗಿಲ್‌ ಸಾಕಷ್ಟು ಸಮಯ ತೆಗದುಕೊಂಡರು., ಆದರೆ ಅವರು  ಮದುವೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರಂತೆ.

ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಚಾಟ್ ಮಾಡುವಾಗ ಶೆಹನಾಜ್ ತನ್ನ ಸಂಬಂಧದ ಸ್ಥಿತಿಯನ್ನು ಬಹಿರಂಗಪಡಿಸಿದರು. ಜಾಸ್ಸಿ ಗಿಲ್‌ ಜೊತೆ ತನ್ನ ಹೆಸರು ಲಿಂಕ್‌ ಆಗಿದ್ದರೂ ತಾನು ಈಗ ಒಬ್ಬಂಟಿಯಾಗಿದ್ದೇನೆ ಮತ್ತು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಶೆಹನಾಜ್‌  ಹೇಳಿಕೊಂಡರು.

ಇನ್ನು ಮದುವೆಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಭುವನ್ ಬಾಮ್‌ಗೆ ಶೆಹನಾಜ್ ಹೇಳಿದ್ದಾರೆ. ಭವಿಷ್ಯದಲ್ಲಿ ಏನಾಗಬಹುದು ಎಂದು ನಿಮಗೆ ತಿಳಿದಿಲ್ಲವಾದ್ದರಿಂದ ನೀವು ಯಾವುದಕ್ಕೂ ಸಿದ್ಧರಾಗಿರಬೇಕು. ಕೆಲಸವಿಲ್ಲದೆ ಉಳಿದಾಗ ಸಾಕಷ್ಟು ಉಳಿತಾಯವನ್ನು ಹೊಂದಿರಬೇಕು.ಆದ್ದರಿಂದ ಅವರು ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ಆರ್ಥಿಕವಾಗಿ ಸ್ಥಿರವಾಗಿರಲು ಬಯಸುತ್ತಾರೆ  ಎಂದು ಅವರು ಹೇಳುತ್ತಾರೆ.

 ಚಿಕ್ಕವಯಸ್ಸಿನಲ್ಲೇ ಮದುವೆಯಾಗಿ ಒಳ್ಳೆಯ ಜೀವನ ನಡೆಸಿ ನೆಲಸಬೇಕೆಂದು ಬಯಸಿದ್ದ ಶೆಹನಾಜ್ ಅವರು ಹಣವನ್ನು ಉಳಿಸಲು ಬಯಸುತ್ತಾರಂತೆ. ಆದ್ದರಿಂದ  ಜೀವನದಲ್ಲಿ ನಂತರ ಹಣಕ್ಕಾಗಿ ಭಿಕ್ಷೆ ಬೇಡಬೇಕಾಗುವ ಪರಿಸ್ಥಿತಿ ಬರೋಲ್ಲ ಎನ್ನುತ್ತಾರೆ. 

ಶೆಹನಾಜ್ ಅವರು ಪಂಜಾಬಿ ಕಲಾವಿದ ಗುರು ರಾಂಧವಾ ಅವರೊಂದಿಗೆ ಮೂನ್ ರೈಸಿಂಗ್ ಹಾಡಿನ ವೀಡಿಯೊದಲ್ಲಿ ಕಾಣಿಸಿಕೊಂಡರು. ಅವರ ಪ್ರಸ್ತುತ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.  

2023 ರಂದು ಈದ್ ರಜೆಯಲ್ಲಿ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದನ್ನು ಹೊರತುಪಡಿಸಿ, ಅನಿಲ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ಥ್ಯಾಂಕ್ಯೂ ಫಾರ್‌ ಕಮಿಂಗ್‌ ಆಗೈನ್‌ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ.

click me!