ಸಿಹಿ ಅಸ್ಥಿ‌ ವಿಸರ್ಜನೆಗೆ ಮುಂದಾದ ಅಶೋಕ್... ಮೋಕ್ಷ ಸಿಕ್ಕಿಲ್ಲಾಂದ್ರೂ ಪರ್ವಾಗಿಲ್ಲ ಸಿಹಿ-ಸುಬ್ಬಿ ಜೊತೆಗಿರ್ಬೇಕು!

Published : Apr 18, 2025, 04:22 PM ISTUpdated : Apr 18, 2025, 05:01 PM IST

ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಅಶೋಕ್ ಗೆ ಸಿಹಿಯ ಅಸ್ಥಿ ಸಿಕ್ಕಿದ್ದು, ಅದನ್ನು ಹೇಗಾದ್ರು ಮಾಡಿ ವಿಸರ್ಜನೆ ಮಾಡಲು ಅಶೋಕ್ ಸಿದ್ಧತೆ ನಡೆಸ್ತಿದ್ದಾರೆ, ಆದರೆ ವೀಕ್ಷಕರು ಇದನ್ನ ಮಾಡ್ಬೇಡಿ ಅಂತ ಬೇಡಿಕೊಳ್ಳುತ್ತಿದ್ದಾರೆ.   

PREV
16
ಸಿಹಿ ಅಸ್ಥಿ‌ ವಿಸರ್ಜನೆಗೆ ಮುಂದಾದ ಅಶೋಕ್... ಮೋಕ್ಷ ಸಿಕ್ಕಿಲ್ಲಾಂದ್ರೂ ಪರ್ವಾಗಿಲ್ಲ ಸಿಹಿ-ಸುಬ್ಬಿ ಜೊತೆಗಿರ್ಬೇಕು!

ಸೀತಾ ರಾಮ ಧಾರಾವಾಹಿಯಲ್ಲಿ (Seetha Rama Serial) ಕಳೆದ ಕೆಲವು ದಿನಗಳಿಂದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಒಂದು ಕಡೆ ಸುಬ್ಬಿ ಕೂಡ ಸೀತಾ ಮಗಳೇ ಅನ್ನೋದು ಗೊತ್ತಾಗಿದೆ. ಮತ್ತೊಂದು ಕಡೆ ಸುಬ್ಬಿ ರಾಮನನ್ನು ಅಪ್ಪ ಎಂದು ಒಪ್ಪಿಕೊಂಡಿದ್ದಾಳೆ. 
 

26

ಸುಬ್ಬಿಯನ್ನು ಸಾಕಿದ ತಾತ, ಆಕೆಯನ್ನು ಸೀತಾ ಆಸ್ಪತ್ರೆಯಲ್ಲಿ ಇರುವಾಗ ಎತ್ತಿಕೊಂಡು ಬಂದಿದ್ದು, ನೀನು ಸೀತಾ ಮಗಳೇ ಎಂದಿದ್ದಾನೆ, ಸುಬ್ಬಿ ಕೂಡ, ಇನ್ನು ಮುಂದೆ ನೀನು ನನ್ನನ್ನು ನೋಡೋದಕ್ಕೂ ಬರಬೇಡ ಅಂತ ಹೇಳಿದ್ದಾಳೆ. ಅಲ್ಲಿಗೆ ಸುಬ್ಬಿ ಸೀತಾ- ರಾಮರನ್ನು ಬಿಟ್ಟು ಎಲ್ಲೂ ಹೋಗಲ್ಲ ಅನ್ನೋದನ್ನು ಖಚಿತವಾಯ್ತು. 
 

36

ಆದರೆ ಇದೀಗ ಅಶೋಕ್ ಗೆ ಸುಬ್ಬಿಯ ಮನೆಯಲ್ಲಿ ಅಸ್ಥಿ ಸಿಕ್ಕಿದ್ದು, ಅದು ಅವತ್ತು ಕಾಣೆಯಾಗಿದ್ದ ಸಿಹಿಯ ಅಸ್ಥಿ ಅನ್ನೋದು ಗೊತ್ತಾಗಿದೆ. ಇದನ್ನೀಗ ರಾಮನಿಗೆ ಕೊಟ್ರೆ ಅವನಿಗೆ ಮತ್ತೆ ಬೇಜಾರಾಗಬಹುದು. ಇದನ್ನ ವಿಸರ್ಜನೆ ಮಾಡದೇ ಇದ್ರೆ ಸಿಹಿಗೆ ಮೋಕ್ಷ ಸಿಗೋದಕ್ಕೆ ಸಾಧ್ಯಾನೆ ಇಲ್ಲ ಎನ್ನುವ ಕಾರಣಕ್ಕೆ ತಾನೇ ವಿಸರ್ಜನೆ ಮಾಡಲು ತಯಾರಿ ನಡೆಸಿದ್ದಾನೆ ಅಶೋಕ್. 
 

46

ಆದರೆ ವೀಕ್ಷಕರು ಇದನ್ನು ನೋಡಿ ಬೇಸರಗೊಂಡಿದ್ದು, ತರಹೇವಾರಿ ಕಾಮೆಂಟ್ ಗಳ ಮೂಲಕ ಅಶೋಕ್ ಗೆ ಸಿಹಿಯ ಅಸ್ಥಿ ವಿಸರ್ಜನೆ ಮಾಡದಂತೆ ಬೇಡಿಕೊಳ್ಳುತ್ತಿದ್ದಾರೆ. ಕಾಮೆಂಟ್ ಗಳನ್ನು ನೋಡುವುದಾದರೆ ಸಿಹಿ ಸುಬ್ಬಿ ನಾ ಬಿಟ್ಟು ಹೋಗಬಾರದು, ಸಿಹಿ ನೀನು ಯಾವಾಗಲೂ ಜೊತೆಯಲ್ಲೇ ಇರಬೇಕು,, ವಿಸರ್ಜನೆ ಆಗದಿದ್ರು ಪರವಾಗಿಲ್ಲ, ಅಸ್ತಿ ನಾ ವಿಸರ್ಜನೆ ಮಾಡಬೇಡ ಮೋಕ್ಷ ಸಿಗದಿದ್ದರೂ ಪರವಾಗಿಲ್ಲ ಸುಬ್ಬಿಗೆ ಸಹಾಯ ಮಾಡಬೇಕು ಎಂದು ಬರೆದುಕೊಂಡಿದ್ದಾರೆ. 
 

56

ಅಷ್ಟೇ ಅಲ್ಲ ಭಾರ್ಗವಿ ಸತ್ಯ ಹೊರ ಬರೋವರ್ಗು ಸಿಹಿ ಸಹಾಯ ರಾಮ ಸೀತಾ ಸುಬ್ಬಿ ಗೆ ಬೇಕು... ಸಿಹಿ ಸುಬ್ಬಿಗೆ ಕಾಣ್ಸೊ ವಿಷ್ಯ ಭಾರ್ಗಾವಿಗಿಂತ ಮುಂಚೆ ಅಶೋಕ್ ಗೆ ತಿಳಿಬೇಕು...ಅವಾಗ ಭಾರ್ಗವಿ ನಾ ಮಟ್ಟ ಹಾಕೋದು ಸುಲಭ ಆಗುತ್ತೆ..ಪ್ಲೀಸ್ ಅಶೋಕ ಅಸ್ತಿ ವಿಸರ್ಜನೆ ಮಾಡಬೇಡಿ ಮಾಡಿದರೆ ಸಿಹಿ ಸುಬ್ಬಿಗೆ ಹೇಳ್ಕೊಡೋರು ಯಾರು ಇಲ್ಲ ಪ್ಲೀಸ್ ಮಾಡಬೇಡಿ. ಸಿಹಿನ ಸೀರಿಯಲ್ ನಿಂದ ತೆಗೆಯಬೇಡಿ ಎಂದು ಕೂಡ ಹೇಳುತ್ತಿದ್ದಾರೆ. 
 

66

ಇದರ ಜೊತೆಗೆ ಸಿಹಿ ಆದಷ್ಟು ಬೇಗ ಅಶೋಕ ಕಣ್ಣಿಗ್ ಕಾಣಬೇಕು, ಸಿಹಿ ಸುಬ್ಬಿ ಕಣ್ಣಿಗೆ ಕಾಣೊ ತರ ಅಶೋಕಗೂ ಕಾಣಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅದು ನಿಜಾನೆ, ಸಿಹಿ ಅಶೋಕ್ ಕಣ್ಣಿಗೆ ಕಾಣಿಸಿಕೊಂಡ್ರೆ ಮಾತ್ರ ಸಿಹಿ ಉಳಿಯೋಕೆ ಸಾಧ್ಯ ಆಗುತ್ತೆ. ಇನ್ನು ಕಥೆ ಹೇಗೆ ಹೋಗುತ್ತೋ? ಅಶೋಕ ಅಸ್ಥಿಯನ್ನು ವಿಸರ್ಜಿಸುತ್ತಾನೋ? ಇಲ್ಲವೋ ಎಲ್ಲವನ್ನೂ ಕಾದು ನೋಡಬೇಕು. 
 

Read more Photos on
click me!

Recommended Stories