ಶ್ರೀಲಂಕಾದಲ್ಲಿ ಏನಾದರೂ ಮರೆಯಲಾರದ ಘಟನೆ ನಡೆಯಿತಾ?
ಶ್ರೀಲಂಕಾಕ್ಕಿಂತ ಚೆನ್ನೈನಲ್ಲಿ ಶೂಟಿಂಗ್ ಆಯ್ತು. ಅದನ್ನು ಮಾತ್ರ ಮರೆಯೋಕೆ ಆಗೋದಿಲ್ಲ. ಚೆನ್ನೈನಲ್ಲಿ ಬಿಸಿಲು, ಅಲ್ಲಿ ಚಪ್ಪಲಿ ಇಲ್ಲದೆ ಓಡಾಡಬೇಕು. ಅಲ್ಲಿ ಒಣ ಮೀನು ಇಟ್ಟಿದ್ದರು. ನಾನು ಸಸ್ಯಾಹಾರಿ ಆಗಿದ್ದಕ್ಕೆ ಆ ವಾಸನೆ ತಡೆದುಕೊಳ್ಳಲಾಗಲಿಲ್ಲ. ಸಿದ್ದೇಗೌಡ್ರು-ಭಾವನಾ ಮಾತ್ರ ಸಖತ್ ಆರಾಮಾಗಿ ಶೂಟಿಂಗ್ ಮಾಡಿದ್ದಾರೆ. ಆದರೆ ನಾವು ಶ್ರೀಲಂಕಾದಲ್ಲಿ ಬೆಟ್ಟದ ಮೇಲೆ ಶೂಟಿಂಗ್ ಮಾಡಿದ್ದು, ಬೇರೆ ಎಲ್ಲಿಯೂ ಹೋಗೋಕಾಗಲಿಲ್ಲ.
ಜಯಂತ್ನನ್ನು ಜಾಹ್ನವಿ ಸಾಯಿಸುವ ದೃಶ್ಯವನ್ನು ನೋಡೋಕೆ ಆಗಲಿಲ್ಲ.
ಎಲ್ಲ ವಿಷಯ ಜಾಹ್ನವಿಗೆ ಗೊತ್ತಾಗುತ್ತದೆ. ಇಷ್ಟುದಿನ ನಟನೆಗೆ ಒತ್ತು ಕೊಡುವ ದೃಶ್ಯವನ್ನು ಜಯಂತ್ಗೆ ಕೊಡಲಾಗ್ತಿತ್ತು. ಈಗ ನನಗೆ ಸಿಕ್ಕಿತ್ತು. ಜಯಂತ್ನನ್ನು ನಾನು ವಿರೋಧಿಸುವ ದೃಶ್ಯ ಬಂದಾಗ ವೀಕ್ಷಕರು ಇಷ್ಟಪಟ್ಟಿದ್ದರು. ಸಮುದ್ರದ ಮಧ್ಯೆ ತೆಗೆದ ಶೂಟ್ನ್ನು ಒನ್ ಟೇಕ್ನಲ್ಲಿ ಮಾಡಿದ್ದೆ. ಬಹುತೇಕ ಎಲ್ಲರೂ ಈ ಸೀನ್ ನೋಡಿ ಇಷ್ಟಪಟ್ಟರು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಡ್ನಲ್ಲಿ ಹೋಗುವಾಗ ಸಿಕ್ಕಿದ ಕೆಲ ವೀಕ್ಷಕರು, ಮನೆಯಲ್ಲಿ ಎಲ್ಲರೂ ಹೊಗಳಿದ್ರು.