ಬ್ರಹ್ಮಗಂಟು ಸೀರಿಯಲ್‌ಗೆ 2ನೇ ನಾಯಕಿಯಾದ ಸೀತಾ ವಲ್ಲಭ ಖ್ಯಾತಿಯ ಕಾವ್ಯ ರಮೇಶ್

First Published Jun 14, 2024, 4:27 PM IST

ಝೀ ಕನ್ನಡದಲ್ಲಿ ಹೊಸದಾಗಿ ಆರಂಭವಾಗಲಿರುವ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಟಿ ಕಾವ್ಯ ರಮೇಶ್ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ. 
 

ಸೀತಾ ವಲ್ಲಭ, ಗೌರಿ ಶಂಕರ (Gouri Shankara) ಧಾರಾವಾಹಿಯಲ್ಲಿ ತಂಗಿಯಾಗಿ ನಟಿಸಿ ಗಮನ ಸೆಳೆದಿದ್ದ ಕಾವ್ಯ ರಮೇಶ್ ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಸೀರಿಯಲ್ ಬ್ರಹ್ಮಗಂಟುವಿನಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 
 

ಹಳೆಯ ಸೀರಿಯಲ್ ಹೆಸರಿನಲ್ಲಿ ಪ್ರಸಾರವಾಗಲಿರುವ ಈ ಹೊಸ ಧಾರಾವಾಹಿ ಬ್ರಹ್ಮಗಂಟು (Bramhagantu) ಅಕ್ಕ ತಂಗಿಯರ ಕಥೆ. ಅಕ್ಕನಿಗಾಗಿ ಜೀವನವನ್ನೆ ಮುಡಿಪಾಗಿಟ್ಟ ತಂಗಿ, ತಂಗಿ ಇಷ್ಟಪಟ್ಟಿದ್ದನ್ನೆಲ್ಲಾ ತಾನೆ ಕಿತ್ತುಕೊಳ್ಳುವ ಅಕ್ಕತಂಗಿಯರ ಕಥೆ ಇದು.
 

ಧಾರಾವಾಹಿಯಲ್ಲಿ ನಾಯಕನಾಗಿ ಪುಣ್ಯವತಿ ಸೀರಿಯಲ್ ನಾಯಕ ಭುವನ್ ಸತ್ಯ ನಟಿಸಿದ್ರೆ, ನಾಯಕಿಯಾಗಿ ದಿಯಾ ಪಳಿಕಲ್‌ ನಟಿಸುತ್ತಿದ್ದಾರೆ. ನಾಯಕಿಯ ಅಕ್ಕ , ಅಂದರೆ ಎರಡನೇ ನಾಯಕಿಯಾಗಿ ಕಾವ್ಯ ರಮೇಶ್ (Kavya Ramesh) ನಟಿಸುತ್ತಿದ್ದಾರೆ. ಕಾವ್ಯ ಪಾತ್ರ ಹೇಗಿರುತ್ತೆ ಅನ್ನೋದು ಈಗಾಗಲೆ ಪ್ರೋಮೋ ಮೂಲಕ ತಿಳಿದು ಬಂದಿದೆ.
 

ಬಾಲ್ಯದಲ್ಲೇ ನಟನೆ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಕಾವ್ಯ, ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವಿದ್ಯಾಭ್ಯಾಸದ ಬಳಿಕ ನಟನೆಯಲ್ಲಿಯೇ ತೊಡಗಿಸಿಕೊಳ್ಳುವ ಸಲುವಾಗಿ, ಆಡಿಶನ್ ಕೊಡಲು ಆರಂಭಿಸಿದರು. ಮೊದಲ ಆಡಿಶನ್ ನಲ್ಲೇ ಆಯ್ಕೆಯಾಗಿ ಸೀತಾವಲ್ಲಭ (Seetha Vallabha)  ಧಾರಾವಾಹಿಯಲ್ಲಿ ಅದಿತಿ ಪಾತ್ರ ಸಿಕ್ಕಿತು. 
 

ಸೀತಾವಲ್ಲಭ ಧಾರಾವಾಹಿಯಲ್ಲಿ ಆರ್ಯನ‌ ತಂಗಿ ಅದಿತಿಯಾಗಿ ಅಮೋಘ ಅಭಿನಯ ನೀಡಿದ್ದರು. ಈ ಪಾತ್ರವನ್ನು ವೀಕ್ಷಕರು ತುಂಬಾ ಇಷ್ಟಪಟ್ಟಿದ್ದರು. ಈ ಸೀರಿಯಲ್ ಬಳಿಕ ಕಾವ್ಯ ಹಿರಿತೆರೆಗೆ ಎಂಟ್ರಿ ಕೊಟ್ಟರು. 
 

ಸ್ಯಾಂಡಲ್‌ವುಡ್‌ನಲ್ಲಿ ನಟಿ ಔಕಾಬಾರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದರು.‌‌ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾದರು. ಮೂಲತಃ ನಮ್ಮವರೇ, ನೋಟದ ಪುಟಗಳು (Notada Putagalu) ಎನ್ನುವ ಸಿನಿಮಾಗಳಲ್ಲಿ ಇವರು ನಟಿಸಿದ್ದರು. ಕಾವ್ಯ‌ ರಮೇಶ್ ಕೇವಲ‌ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡರು. ತೆಲುಗಿನ ನಚ್ಚಿನಾವುಡು, ಆರ್.ಸಿ.ಎಂ‌.ಪುರಂ ಸಿನಿಮಾಗಳಲ್ಲಿ ನಟಿಸುವ‌ ಮೂಲಕ‌ ತೆಲುಗು ಪ್ರೇಕ್ಷಕರಿಗೂ ಇಷ್ಟವಾಗಿದ್ದರು. 
 

ಎಷ್ಟೋ ವರ್ಷಗಳ ಬಳಿಕ ಇದೀಗ ಕಾವ್ಯ ಮತ್ತೆ ಕಿರುತೆರೆಗೆ ಕಂ‌ಬ್ಯಾಕ್ ಮಾಡಿದ್ದಾರೆ. ಗೌರಿ ಶಂಕರ ಧಾರಾವಾಹಿಯಲ್ಲಿ ಗೌರಿಯ ತಂಗಿಯಾಗಿ ನಟಿಸಿದ್ದ ನಟಿ, ಇದೀಗ ಇನ್ನೇನು ಶುರುವಾಗಲಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.
 

Latest Videos

click me!