ಆಸ್ಪತ್ರೆ ಸೇರಿದ್ರೂ ನೀಚ ಬುದ್ದಿ ಬಿಡದ ವಿಲನ್ ಜೈದೇವ್…ನಾಯಿ ಬಾಲ ಡೊಂಕು ಅನ್ನೋದು ಇದಕ್ಕೇನಾ?

First Published Oct 9, 2024, 3:55 PM IST

ಅಮೃತಧಾರೆ ಧಾರಾವಾಹಿಯಲ್ಲಿ ವಿಲ್ಲನ್ ಜೈದೇವ್ ಮುಖವಾಡ ಎಲ್ಲರೆದುರು ಕಳಚಿ ಬಿದ್ದರೂ, ಮನೆಯಿಂದ ಹೊರ ಹಾಕಲ್ಪಟ್ಟು ಇದೀಗ ಆಸ್ಪತ್ರೆಗೆ ದಾಖಲಾಗಿದ್ರೂ ನಾಯಿ ಬಾಲ ಡೊಂಕು ಎನ್ನುವಂತೆ ಇನ್ನೂ ಬದಲಾಗಿಲ್ಲ ಜೈದೇವ್. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadare) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದ್ದು, ಒಂದು ಕಡೆ ಜೈದೇವ್ ಎಲ್ಲಾ ಕರ್ಮಕಾಂಡಗಳು ಮನೆಯವರೆದುರು ಒಂದೊಂದಾಗಿ ಬಿಚ್ಚಿಕೊಂಡಿವೆ. ಭೂಮಿಕಾ ಕಿಡ್ನಾಪ್, ಪಾರ್ಥ ಮತ್ತು ಅಪೇಕ್ಷಾರ ಕೊಲೆ ಪ್ರಯತ್ನ, ಆನಂದ್ ಆಕ್ಸಿಡೆಂಟ್, ಮಲ್ಲಿ ಕೊಲೆ ಪ್ರಯತ್ನ ಎಲ್ಲವನ್ನೂ ಪ್ಲ್ಯಾನ್ ಮಾಡಿದ್ದು ಜೈ ದೇವ್ ಅನ್ನೋದು ಸಾಕ್ಷಿ ಸಮೇತ ರಿವೀಲ್ ಆಗಿದೆ. 
 

ತನ್ನ ತಮ್ಮ ಪಾರ್ಥನನ್ನೇ ಜೈದೇವ್ ಕೊಲ್ಲೋದಕ್ಕೆ ಪ್ಲ್ಯಾನ್ ಮಾಡಿರೋದನ್ನ ಕೇಳಿ ಶಾಕುಂತಲ ಶಾಕ್ ಆಗಿದ್ದು, ಇಷ್ಟೆಲ್ಲಾ ಮಾಡಿದಮೇಲೆ ನೀನು ಈ ಮನೇಲಿ ಇರೋದೆ ಬೇಡ ಎನ್ನುತ್ತಾ, ಜೈದೇವ್ ನನ್ನೆ ಮನೆಯಿಂದ ಹೊರ ಹಾಕ್ತಾಳೆ ಶಾಕುಂತಲಾ. ಜೈದೇವ್ ಎಷ್ಟೇ ಕೇಳಿಕೊಂಡರೂ ಒಳಗೆ ಬರೋದಕ್ಕೆ ಬಿಡೋದಿಲ್ಲ. 
 

Latest Videos


ಇನ್ನು ನನ್ನ ಬಟ್ಟೆ ಬರೆಗಳನ್ನು ಮನೆಯಿಂದ ತೆಗೊಂಡೋಗ್ತೀನಿ ಅಂತ ಒಳಗೆ ಬಂದ ಜೈದೇವ್ ಚಾಕುವಿನಿಂದ ತನ್ನ ಹೊಟ್ಟೆ ಚುಚ್ಚಿ, ಯಾರಿಗೂ ಬೇಡವಾಗಿ ನಾನು ಬದುಕೋದು ಬೇಡ ಅಂತಾನೆ. ಒಂದು ಕಡೆ ಜೈದೇವ್ ಆಸ್ಪತ್ರೆಗೆ ದಾಖಲಾದರೆ, ಇನ್ನೊಂದು ಕಡೆ ಶಾಕುಂತಲ ಬಿಪಿ ಹೆಚ್ಚಾಗಿ ಮನೆಯಲ್ಲಿ ಚಿಕಿತ್ಸೆ ಪಡಿತಿದ್ದಾರೆ. 
 

ಇನ್ನು ಎಚ್ಚರವಾದ ಶಾಕುಂತಲಾ, ಇನ್ನು ಏನೇ ಆದ್ರೂ ಜೈ ಈ ಮನೆಯೊಳಗೆ ಕಾಲಿಡೋದಕ್ಕೆ ನಾನು ಒಪ್ಪೋದೆ ಇಲ್ಲ ಎಂದು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ತಾಳೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಜೈದೇವ್ ಸಾವು ಬದುಕಿನ ನಡುವೆ ಹೋರಾಡ್ತಿದ್ದಾನೆ ಅಂತ ಎಲ್ಲರೂ ಅಂದುಕೊಂಡು, ಟೆನ್ಶನ್ ನಿಂದ ಓಡ್ತಾಡ್ತಿದ್ರೆ ಅಲ್ಲೂ ಜೈದೇವ್ ಹೈಡ್ರಾಮ ಮಾಡ್ತಿದ್ದಾನೆ. 
 

ಜೈದೇವ್ ನನ್ನು ನೋಡೋದಕ್ಕೆ ಆಸ್ಪತ್ರೆಗೆ ಬಂದ ಶಾಕುಂತಲಾ ಅಣ್ಣ , ಜೈ ದೇವ್ ಸ್ಥಿತಿ ನೋಡಿ ಕಣ್ಣೀರಿಡುತ್ತಾ, ನಾನು ಅನಾಥ ಆಗ್ಬಿಟ್ಟೆ ಅಂತಿದ್ದಂಗೆ, ಆಕ್ಸಿಜನ್ ಮಾಸ್ಕ್ ತೆಗೆದು ಮಾತನಾಡುವ ಜೈ ದೇವ್, ಮಾಮ್ಸ್ ನನಗೆ ಆವಾಗ್ಲೇ ಪ್ರಜ್ಞೆ ಬಂದಿದೆ, ಬಂದ್ರೂ ಬಾರದೇ ಇರೋ ಥರ ನಾಟಕ ಮಾಡ್ತಿದ್ದಾನೆ ಅಂತಾನೆ. 
 

ಇನ್ನು ಮನೆಗೆ ಹೋಗಿ ಅಮ್ಮನ ಮುಂದೆ ನಾಟಕ ಮಾಡಬೇಕು. ಕತ್ತು ಹಿಡಿದು ನನ್ನನ್ನು ಮನೆಯಿಂದ ಆಚೆಗೆ ಹಾಕಿದ ನನ್ನ ಅಮ್ಮನೇ ನನ್ನನ್ನು ವಾಪಾಸ್ ಕರೆಯಿಸಬೇಕು. ಅಂತ ನಾಟಕ ಆಡೋದಕ್ಕೆ ಸ್ಟೇಜ್ ರೆಡಿ ಮಾಡಬೇಕು ಎಂದು ನಾಯಿ ಬಾಲ ಯಾವತ್ತಿದ್ರೂ ಡೊಂಕು ಅನ್ನೋದನ್ನ ಸಾಬೀತು ಪಡಿಸಿಯೇ ಬಿಟ್ಟಿದ್ದಾನೆ ಜೈ ದೇವ್. 
 

ಇಷ್ಟೆಲ್ಲಾ ಆದ್ರೂ ತನ್ನ ನೀಚ ಬುದ್ದಿ ಬಿಡದ ಜೈದೇವ್ ನಟನೆ ನೋಡಿ, ಹೆಚ್ಚಿನ ಅಭಿಮಾನಿಗಳು ಜೈಕಾರ ಹಾಕಿ, ಈ ಸಲದ ಬೆಸ್ಟ್ ವಿಲನ್ ಅವಾರ್ಡ್ ಇವರಿಗೆ ಕೊಡ್ಬೇಕು ಅಂತಿದ್ದಾರೆ. ಅಲ್ಲದೇ ಹುಟ್ಟು ಗುಣ ಸತ್ರು ಹೋಗಲ್ಲ ಅನ್ನೋದು ಇದಕ್ಕೇನಾ ಅಂತಾನೂ ಕೇಳಿದ್ದಾರೆ. ಜೈ ದೇವ್ ನಿನಗೆ ಪಾಪ ಅನ್ನೋದು ಹೆಣಕ್ಕೆ ಶೃಂಗಾರ ಮಾಡೋದು ಎರಡು ಒಂದೇ, ನಾಯಿ ಬಾಲನಾದ್ರೂ ಸರಿ ಮಾಡಬಹುದು, ಆದ್ರೆ ಜೈದೇವ್ ನನ್ನು ತಿದ್ದೋದು ಸಾಧ್ಯಾನೆ ಇಲ್ಲ ಅಂತಿದ್ದಾರೆ ವೀಕ್ಷಕರು. 
 

click me!