ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!

First Published Feb 20, 2020, 12:31 PM IST

ಒಂದೂವರೆ ವರ್ಷದವಳಾಗಿದ್ದಾಗಲೇ 50 ರಾಗಗಳ ಗುರುತಿಸುತ್ತಿದ್ದ ಅಸಾಮಾನ್ಯ ಪ್ರತಿಭೆ ವಾರಿಜಾಶ್ರೀ ವೇಣುಗೋಪಾಲ್. ನಾಲ್ಕು ವರ್ಷದವಳಿದ್ದಾಗಲೇ 200 ರಾಗಗಳಿಗೆ ತಾಳ ಹಾಕುತ್ತಿದ್ದರು. ಇದೀಗ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ತೀರ್ಪುಗಾರರಲ್ಲಿ ಒಬ್ಬರು. ಅದ್ಭುತವಾದ ಕಂಠದೊಂದಿಗೆ, ಕೊಳಲು ವಾದಕಿಯೂ ಆಗಿರುವ ವಾರಿಜಾ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ...

ವಾರಿಜಾಶ್ರೀ ಹುಟ್ಟಿ, ಬೆಳೆದಿದ್ದು ಮೈಸೂರಲ್ಲಿ. ತಂದೆ-ತಾಯಿ ಇಬ್ಬರೂ ಸಂಗೀತಗಾರರು.
undefined
ನಾಲ್ಕು ವರ್ಷದವಳಾದಾಗ 200 ರಾಗಗಳು ವಾರಿಜಾಗೆ ಕರಗತವಾಗಿದ್ದವು.
undefined
ಪ್ರಾಥಮಿಕ ಸಂಗೀತವನ್ನು ತಂದೆ ವೇಣುಗೋಪಾಲ್‌ ಅವರಿಂದಲೇ ಕಲಿತರು.
undefined
'ಹೆಳವನಕಟ್ಟೆ ಗಿರಿಯಮ್' ಧಾರಾವಾಹಿಯಲ್ಲಿ ದಾಸರ ಪದಗಳನ್ನು ಹಾಡಿ, ಮನೆ ಮಾತಾದರು.
undefined
'Quartet' ಸಂಗೀತ ಗುಂಪಿನ ಬ್ರ್ಯಾಂಡ್‌ ರಾಯಭಾರಿ ಇವರು.
undefined
'ಪರ್ಲ್‌ ಆಫ್‌ ಬೆಂಗಳೂರು', 'ಕೆಂಪೇಗೌಡ ರಾಜ್ಯ ಪ್ರಶಸ್ತಿ' ಇವರ ಮುಡಿಗೇರಿದೆ.
undefined
ಹಾಡು ಮತ್ತು ಕೊಳಲು ಎರಡರ ಸಂಗಮದ `ಬಿದಿರು' ಆಲ್ಬಂ ಇವರದ್ದು.
undefined
ದಾಸ ಸಾಹಿತ್ಯವನ್ನು ಆಧುನಿಕ ಸಂಗೀತಕ್ಕೆ ಅಳವಡಿಸಿದ್ದಾರೆ ವಾರಿಜಾ.
undefined
'ಅರ್ಪಣ', 'ಉಪಾಸನಾ', 'ಮೇಳ ರಾಗ ಮಾಲಿಕಾ', 'ಕಾಯೋ ಎನ್ನ ಗೋಪಾಲ' ಇವರ ಇತರೆ ಆಲ್ಬಂಗಳು.
undefined
ಇತ್ತೀಚಿಗೆ 'ತುರ್ತು ನಿರ್ಗಮನ' ಚಿತ್ರದಲ್ಲಿ 'ಜೋರು ಜೋರಾಗಿ' ಹಾಡು ಹಾಡಿದ್ದಾರೆ.
undefined
click me!