'ಎದೆ ತುಂಬಿ ಹಾಡುವೆನು' ಸಂಗೀತ ರಿಯಾಲಿಟಿ ಶೋಗೆ 'ನಮ್ಮನೆ ಯುವರಾಣಿ' ನಟಿಯೇ ಆ್ಯಂಕರ್!

First Published Aug 14, 2021, 5:13 PM IST

ಮೊದಲ ಬಾರಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ನಮ್ಮನೆ ಯುವರಾಣಿಯ ನಾಯಕ ನಟಿ. ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ಹರಿಕೃಷ್ಣ ಮತ್ತು ಚರಣ್ ಬಾಲಸುಬ್ರಹ್ಮಣ್ಯಂ ತೀರ್ಪುಗಾರರು. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ 'ಎದೆ ತುಂಬಿ ಹಾಡುವೇನು' ಸಂಗೀತ ರಿಯಾಲಿಟಿ ಶೋ.
undefined
ನಮ್ಮನೆ ಯುವರಾಣಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮೀರಾ ಅಲಿಯಾಸ್ ಅಂಕಿತಾ ಅಮರ್ ನಿರೂಪಣೆ ಮಾಡುತ್ತಿದ್ದಾರೆ.
undefined
ಹಂಸಲೇಖ, ರಾಜೇಶ್ ಕೃಷ್ಣನ್, ಎಸ್‌ಪಿಬಿ ಪುತ್ರ ಚರಣ್, ರಘು ದೀಕ್ಷಿತ್ ಹಾಗೂ ಹರಿಕೃಷ್ಣ ತೀರ್ಪುಗಾರರಾಗಿ ಇರಲಿದ್ದಾರೆ.
undefined
Ankita Amar 'ಸಂಗೀತ ಮತ್ತು ನೃತ್ಯದಲ್ಲಿ ನನಗೆ ಆಸಕ್ತಿ ಜಾಸ್ತಿ. ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ,' ಎನ್ನುತ್ತಾರೆ ಅಂಕಿತಾ.
undefined
'ನನ್ನ ಭಾವನೆಗಳು ವ್ಯಕ್ತ ಪಡಿಸುವುದಕ್ಕೆ ನೃತ್ಯ ಸಹಾಯ ಮಾಡಿದೆ, ಸಂಗೀತ ನನ್ನ ಡೈಲಾಗ್ ಹೇಳುವುದಕ್ಕೆ ಸಹಾಯ ಮಾಡುತ್ತಿದೆ,' ಎನ್ನುವ ಅಂಕಿತಾ, ನಿರೂಪಣೆಯಲ್ಲಿಯೂ ತಮ್ಮದೇ ಛಾಪು ಮೂಡಿಸುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.
undefined
ಪ್ರತಿ ಶನಿವಾರ ಮತ್ತು ಭಾನವಾರ ರಾತ್ರಿ 9 ಗಂಟೆಗೆ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳು ವೈರಲ್ ಆಗುತ್ತಿದೆ. ಶ್ರೀ ಸಾಮನ್ಯರು ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದು, ಅದ್ಭುತ ಗಾಯಕರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
undefined
click me!