Bigg Boss Season 11 ಇನ್ನೂ ಶುರುವಾಗೇ ಇಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ ಅರ್ಹ ಸ್ಪರ್ಧಿಯನ್ನು ಗೆಲ್ಲಿಸೋ ಚರ್ಚೆ

Published : Sep 09, 2024, 03:08 PM ISTUpdated : Sep 09, 2024, 03:21 PM IST

ಬಿಗ್ ಬಾಸ್ ಸೀಸನ್ 11 ಕ್ಕೆ ಜನರು ಕಾತುರದಿಂದ ಕಾಯುತ್ತಿರುವ ಹೊತ್ತಿಗೆ, ಸಿಂಪಥಿ ಮೇಲೆ ವೋಟ್ ಮಾಡ್ಬೇಡಿ, ಸ್ಟ್ರಾಂಗ್ ಕಂಟೆಸ್ಟಂಟ್, ಜನಮೆಚ್ಚಿದ ಸ್ಪರ್ಧಿಯನ್ನು ಗೆಲ್ಲಿಸಿ ಅಂತಿದ್ದಾರೆ ಫ್ಯಾನ್ಸ್.   

PREV
17
Bigg Boss Season 11 ಇನ್ನೂ ಶುರುವಾಗೇ ಇಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ ಅರ್ಹ ಸ್ಪರ್ಧಿಯನ್ನು ಗೆಲ್ಲಿಸೋ ಚರ್ಚೆ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Season 11) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೆ ಬಿಗ್ ಬಾಸ್ ಪ್ರೊಮೋ ಕೂಡ ಬಿಡುಗಡೆಯಾಗಿದೆ. ಯಾವಾಗ ಬಿಗ್ ಬಾಸ್ ಪ್ರಸಾರ ಆರಂಭವಾಗಲಿದೆ ಅಂತ ಕಾಯ್ತಿದ್ದಾರೆ ವೀಕ್ಷಕರು. 
 

27

ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಗೆ ಸುದೀಪ್ ನಿರೂಪಣೆ ಮಾಡೋದಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು, ರಿಷಭ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಬಿಗ್ ಬಾಸ್ ನಡೆಸಿಕೊಡ್ತಾರೆ ಅಂತಾನೂ ಹೇಳಲಾಗುತ್ತಿತ್ತು. ಆಮೇಲೆ ಸುದೀಪ್ ಅವರೇ ಈ ಸೀಸನ್ ನಡೆಸಿ ಕೊಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪಟ್ಟು ಹಿಡಿದು ಕುಳಿತಿದ್ದರು, ಇದೀಗ ಸುದೀಪ್ ಅವರೇ ಬಿಗ್ ಬಾಸ್ ಸೀಸನ್ 11 ನಡೆಸಿಕೊಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ನಿಜವಾಗಿಯೂ ಸುದೀಪ್  (Kiccha Sudeep) ನಡೆಸಿಕೊಡುತ್ತಾರೆಯೇ ಅನ್ನೋದನ್ನ ಕಾದು ನೋಡಬೇಕು. 
 

37

ಇನ್ನೊಂದೆಡೆ ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಹೆಸರಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವರುಣ್ ಆರಾಧ್ಯ ಬರ್ತಿದ್ದಾರೆ, ತರುಣ್ ಚಂದ್ರ, ಮೋಕ್ಷಿತಾ ಪೈ, ಶರ್ಮಿತಾ ಗೌಡ, ಅಶ್ವಿನಿ ಗೌಡ ಮೊದಲಾದವರ ಹೆಸರು ಕೇಳಿ ಬರ್ತಿದೆ. ಆದರೆ ಇಲ್ಲಿವರೆಗೂ ಯಾರೆಲ್ಲಾ ಹೋಗ್ತಿದ್ದಾರೆ ಅನ್ನೋದು ಮಾತ್ರ ಸರಿಯಾಗಿ ತಿಳಿದು ಬಂದಿಲ್ಲ. 

47

ಇದೆಲ್ಲದರ ಮಧ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬೇರೊಂದು ವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೂ ಬಿಗ್ ಬಾಸ್ ಆರಂಭವಾಗಿಲ್ಲ, ಯಾವಾಗ ಆರಂಭ ಆಗೋದು ಅಂತಾನೂ ಗೊತ್ತಿಲ್ಲ. ಇದರ ಮಧ್ಯೆ ಜನರು ಸೋಶಿಯಲ್ ಮೀಡಿಯಾದಲ್ಲಿ ಯಾರು ಗೆಲ್ಲಬೇಕು ಅನ್ನೋ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. 

57

ನಾವು ಬಡವರ ಮಕ್ಕಳು ಎಂದು ಹೇಳುತ್ತಾ, ಸಿಂಪಥಿ ಕಾರ್ಡ್ ಮೂಲಕ ಜನಪ್ರಿಯತೆ ಗಳಿಸೋರಿಗೆ ವೋಟ್ ನೀಡಿ ಗೆಲ್ಲೋ ಹಾಗೆ ಮಾಡಬೇಡಿ. ಯಾರಿಗೆ ಸರಿಯಾದ ಅರ್ಹತೆ ಇರುತ್ತೋ, ಚೆನ್ನಾಗಿ ಸ್ಪರ್ಧೆಯಲ್ಲಿ ಭಾಗವಹಿಸ್ತಾರೋ ಅಂತವರಿಗೆ ವೋಟ್ ನೀಡಿ ಗೆಲ್ಲಿಸಿ ಎನ್ನುವ ಮಾತು ಕೇಳಿ ಬರುತ್ತಿದೆ. 

67

ಇದಕ್ಕೆಲ್ಲಾ ಮುಖ್ಯ ಕಾರಣ ಸಂಗೀತ ಶೃಂಗೇರಿ (Sangeetha Sringeri) ಅಭಿಮಾನಿಗಳು ಅಂತಾನೆ ಹೇಳಬಹುದು. ಬಿಗ್ ಬಾಸ್ ಸೀಸನ್ 10ರಲ್ಲಿ ಸಂಗೀತ ಶೃಂಗೇರಿ ಉತ್ತಮವಾಗಿ ಸ್ಪರ್ಧೆ ನೀಡಿ, ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಈ ಸೀಸನ್ ಸಂಗೀತ ಖಂಡಿತವಾಗಿಯೂ ವಿನ್ನರ್ ಆಗ್ತಾರೆ ಅಂತಾನೆ ಜನ ಅಂದುಕೊಂಡಿದ್ದರು, ಆದರೆ ಸಂಗೀತ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂದಿತ್ತು. ಅದಕ್ಕೆ ಕಾರ್ತಿಕ್ ಮಹೇಶ್ ಸಿಂಪಥಿ ಪಡ್ಕೊಂಡು ವಿನ್ನರ್ ಆದ್ರೂ ಅಂತ, ಸಂಗೀತಾ ಫ್ಯಾನ್ಸ್ ಧೂಳೆಬ್ಬಿಸಿದ್ದರು. 

77

ಅದಕ್ಕೂ ಮುನ್ನ ಬಿಗ್ ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆಪಿ (Aravind KP) ವಿನ್ನರ್ ಆಗುತ್ತಾರೆ ಎನ್ನುವ ಭರವಸೆ ಎಲ್ಲರಿಗೂ ಇತ್ತು, ಆದ್ರೆ ಕೊನೆ ಕ್ಷಣದಲ್ಲಿ ಮಂಜು ಪಾವಗಡ ವಿನ್ನರ್ ಎಂದು ಸುದೀಪ್ ಹೇಳಿದಾಗ, ಒಂದು ಕ್ಷಣ ಎಲ್ಲರಿಗೂ ಶಾಕ್ ಆಗಿತ್ತು. ಹಾಗಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಂಪಥಿ ತೋರಿಸಿ ಓಟ್ ಮಾಡ್ಬೇಡಿ, ಅರ್ಹರನ್ನ ಆಯ್ಕೆ ಮಾಡಿ ಗೆಲ್ಲಿಸಿ ಅಂತಿದ್ದಾರೆ. 
 

Read more Photos on
click me!

Recommended Stories