ಏಕಾಂತತೆ: ನಿವೇದಿತಾ ಗೌಡ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಅಥವಾ ಬೆಂಗಳೂರಿನ ಹೊರ ವಲಯದ ಹಳೆಯ ಕಾಲದ ದೇವಾಲಯದಲ್ಲಿ ಸಂಜೆ ಸೂರ್ಯಾಸ್ತಮಾನದ ವೇಳೆ ಫೋಟೋ ಶೂಟ್ ಮಾಡಿಸಿದ್ದಾರೆ. ಇದಕ್ಕೆ ಸಂಜೆಯ ಹೊತ್ತಿಗಾಗಿ, ಸೂರ್ಯನ ಕೊನೆಯ ಬೆಳಕಿನ ಕಿರಣಗಳು, ಗೋಧೂಳಿ ಸಮಯಕ್ಕಾಗಿ ಕಾದು ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಅವಧಿಯಲ್ಲಿ ದೇವಸ್ಥಾನವೊಂದರ ಜಗುಲಿ, ಮಂಟಪವೊಂದರ ನೆಲಹಾಸಿನ ಮೇಲೆ ಏಕಾಂತವಾಗಿ ಕುಳಿತು ಪೋಸ್ ಕೊಟ್ಟಿದ್ದಾರೆ. ಅವರ ಈ ಏಕಾಂತ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.