ನಡತೆ ತಪ್ಪಿದವರನ್ನು ತಿದ್ದುವ, ದುಶ್ಚಟಗಳಿಗೆ ದಾಸರಾದವರನ್ನು ಅದರಿಂದ ಮುಕ್ತಿಗೊಳಿಸುವ, ಧೂಮಪಾನ- ಮದ್ಯಪಾನದಂತಹ ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ಇಡುವ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವನ್ನು ಒಳ್ಳೆಯ ಮನಸ್ಸುಗಳಿಂದ ನಿರ್ಮಿಸುವ, ಆತ್ಮ ಶುದ್ಧೀಕರಿಸುವ ಮಹಾಸಂಕಲ್ಪ ಹರಜಾತ್ರೆ ಹಿಂದಿದೆ. ಅದಕ್ಕಾಗಿ ಯುವ ಮನಸ್ಸುಗಳು 21 ದಿನ, 15 ದಿನ, 9 ದಿನ, 5 ದಿನ, 3 ದಿನ ಕಾಲ ಅತ್ಯಂತ ಕಟ್ಟುನಿಟ್ಟಾಗಿ ಹರಮಾಲೆ ವ್ರತವನ್ನು ಕೈಗೊಳ್ಳಬೇಕು. ಹರನಿಗೆ ಭಕ್ತಿ ನಿಷ್ಟೆಯಿಂದ ಕಾಯಾ ವಾಚಾ ಮನಸಾ ನಡೆದುಕೊಳ್ಳಬೇಕು. ಆಗಮಾತ್ರ ಸಂಕಲ್ಪ ಪ್ರಾಪ್ತಿಯಾಗುತ್ತದೆ ಎಂದು ಕರೆ ನೀಡಿದ ವಚನಾನಂದ ಸ್ವಾಮೀಜಿ