ವಿಮಾನ ಪ್ರವಾಸ ಹೊರಟ ಕುಗ್ರಾಮದ ಸರ್ಕಾರಿ ಶಾಲೆ ಮಕ್ಕಳು! ನಿಮ್ಮ ಶಾಲೆ ಮಕ್ಕಳು ಹೋಗಬೇಕೇ? ಹೀಗೆ ಮಾಡಿ

Published : Dec 06, 2024, 05:04 PM ISTUpdated : Dec 06, 2024, 05:07 PM IST

ಅವರೆಲ್ಲ ಕುಗ್ರಾಮವೊಂದರ  ಸರಕಾರಿ ಶಾಲೆಯ ಮಕ್ಕಳು. ವಿಮಾನದ ಸದ್ದು ಬಂದ್ರೆ ಶಾಲೆಯಿಂದ ಹೊರಬಂದು ಆಕಾಶದಲ್ಲಿ ಹಾರಡ್ತಿದ್ದ ವಿಮಾನವನ್ನು ಬೆರಗುಕಣ್ಣಿನಿಂದ ನೋಡ್ತಿದ್ದರು.  ತಾವು ಕೂಡಾ ಒಮ್ಮೆಯಾದ್ರು ವಿಮಾನದಲ್ಲಿ ಹಾರಾಡಬೇಕು ಅನ್ನೋ ಆಸೆಯಿದ್ದರು ಕೂಡಾ ಆರ್ಥಿಕ ಸಂಕಷ್ಟ ಮಕ್ಕಳ ಆಸೆಗೆ ಅಡ್ಡಿಯಾಗಿತ್ತು. ಆದ್ರೆ ಮಕ್ಕಳ ಆಸೆಯನ್ನು ಶಿಕ್ಷಕರು, ಗ್ರಾಮಸ್ಥರು ಈಡೇರಿಸಿದ್ದಾರೆ.

PREV
17
ವಿಮಾನ ಪ್ರವಾಸ ಹೊರಟ ಕುಗ್ರಾಮದ ಸರ್ಕಾರಿ ಶಾಲೆ ಮಕ್ಕಳು! ನಿಮ್ಮ ಶಾಲೆ ಮಕ್ಕಳು ಹೋಗಬೇಕೇ? ಹೀಗೆ ಮಾಡಿ

ಹೌದು ಸರ್ಕಾರಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ವಿಮಾನದಲ್ಲಿ ಪ್ರಯಾಣ ನಡೆಸಿದ್ದಾರೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲು ಅನ್ನೋದು ಹೆಮ್ಮೆಯ ವಿಷಯವಾಗಿದೆ. 
 

27

ಆ ಮಕ್ಕಳ ಸಂಭ್ರಮ ಇಂದು ನೂರ್ಮಡಿಯಾಗಿತ್ತು.ಯಾವಾಗ ವಿಮಾನ ಹತ್ತುತ್ತೇವೋ, ಯಾವಾಗ ಲೋಹದ ಹಕ್ಕಿಯಲ್ಲಿ ಆಕಾಶದಲ್ಲಿ ತೇಲಾಡುವ ಆನಂದವನ್ನು ಸವಿಯುತ್ತೇವೋ ಅನ್ನೋ ದಾವಂತವಿತ್ತು.  ಹೀಗಾಗಿ ಬೇಗನೆ ಬಸ್ ಗೆ ತಮ್ಮ ಬ್ಯಾಗ್ ಗಳನ್ನು ಇಟ್ಟು ಬಸ್ ಹತ್ತುವ ದಾವಂತದಲ್ಲಿದ್ದರು. 

37

ಇನ್ನೊಂದಡೆ ಅವರಿಗೆ ಶುಭ ಹಾರೈಸಲು ಸ್ವತ ಕ್ಷೇತ್ರದ ಶಾಸಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅನೇಕ ಸುತ್ತಮುತ್ತಲಿನ ಶಾಲೆಯ ಶಿಕ್ಷಕರು, ಗ್ರಾಮದ ನೂರಾರು ಜನರು ಆಗಮಿಸಿದ್ದರು.ಹೀಗಾಗಿ ಆ ಸರ್ಕಾರಿ ಶಾಲೆಯಲ್ಲಿ ಇಂದು ಸಂಭ್ರಮ ಮನೆ ಮಾಡಿತ್ತು. ಹೌದು ಮಕ್ಕಳ ಸಂಭ್ರಮ ಹೆಚ್ಚಿಸಿದ್ದು, ಇಂದು ವಿಮಾನ ಪ್ರಯಾಣ ಮಾಡಿದ್ದು. 
 

47

ಕೊಪ್ಪಳ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮೂವತ್ತೆರಡು ಮಕ್ಕಳು ಇಂದು ಶೈಕ್ಷಣಿಕ ಪ್ರವಾಸಕ್ಕೆ ಹೈದ್ರಾಬಾದ್ ಗೆ ಹೋಗಿದ್ದಾರೆ. ಆದ್ರೆ ಅವರು ಎಲ್ಲರಂತೆ ಬಸ್, ರೈಲಿನಲ್ಲಿ ಹೋಗಿಲ್ಲಾ. ಬದಲಾಗಿ ವಿಮಾನದಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ಹೌದು ಮೂವತ್ತೆರಡು ಮಕ್ಕಳು, ಶಾಲೆಯ ಶಿಕ್ಷಕರು, ಎಸ್ ಡಿ ಎಂ ಸಿ ಸಧಸ್ಯರು ಸೇರಿದಂತೆ ಒಟ್ಟು ನಲವತ್ತೈದು ಜನರು, ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ, ಹೈದ್ರಾಬಾದ್ ಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ವಿಶೇಷವೆಂದ್ರೆ ಇವರಿಗೆಲ್ಲಾ ಇದು ಮೊದಲ ವಿಮಾನಯಾನವಾಗಿದೆ.

57

ಮುಂಜಾನೆ ಲಿಂದಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಆಗಮಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ  ಹಸಿರು ಬಾವುಟ ತೋರಿಸಿ, ಶುಭ ಹಾರೈಸಿದ್ರು. ಜೊತೆಗೆ ವಿಮಾನದ ಮೂಲಕ‌ ಪ್ರವಾಸಕ್ಕೆ ಹೋರಟ ಮಕ್ಕಳ‌ ಪಾಲಕರು, ಗ್ರಾಮಸ್ಥರು ಸಹ ಶಾಲೆಗೆ ಆಗಮಿಸಿ‌ ಮಕ್ಕಳ ವಿಮಾನ ಪ್ರಯಾಣಕ್ಕೆ ಶುಭ ಹಾರೈಸಿದರು.

ಮುಂಜಾನೆ ಲಿಂದಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಆಗಮಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ  ಹಸಿರು ಬಾವುಟ ತೋರಿಸಿ, ಶುಭ ಹಾರೈಸಿದ್ರು. ಜೊತೆಗೆ ವಿಮಾನದ ಮೂಲಕ‌ ಪ್ರವಾಸಕ್ಕೆ ಹೋರಟ ಮಕ್ಕಳ‌ ಪಾಲಕರು, ಗ್ರಾಮಸ್ಥರು ಸಹ ಶಾಲೆಗೆ ಆಗಮಿಸಿ‌ ಮಕ್ಕಳ ವಿಮಾನ ಪ್ರಯಾಣಕ್ಕೆ ಶುಭ ಹಾರೈಸಿದರು.

67

ವಿಮಾನ ಏರಿ ಸಂಭ್ರಮಿಸಿದ ಮಕ್ಕಳು

ಲಿಂಗದಹಳ್ಳಿ ಗ್ರಾಮದಿಂದ ಜಿಂದಾಲ್ ಏರಪೋರ್ಟ್ ವರೆಗೆ ಬಸ್ ನಲ್ಲಿ ಪ್ರಯಾಣ ಮಾಡಿದ ಮಕ್ಕಳು, ಜಿಂದಾಲ್ ಏರ್ಪೋಟ್ ಗೆ ಹೋಗುತ್ತಿದ್ದಂತೆ ಪುಳಕಿತರಾಗಿದ್ದರು. ನಂತರ ಸ್ವತ ತಾವೇ ಬೋರ್ಡಿಂಗ್ ಪಾಸ್ ನ್ನು ಪಡೆದು, ವಿಮಾನ ಬರ್ತಿದ್ದಂತೆ ವಿಮಾನದಲ್ಲಿ ಸಂತಸದಿಂದ ಹತ್ತಿದ್ದರು. ವಿಮಾನ ಹತ್ತಿದ್ದು, ವಿಮಾನ ಟೈಕ್ ಆಪ್ ಆದಾಗ ಮಕ್ಕಳು ಜೀವನದ ಕನಸೊಂದು ನನಸಾದ ಸಂತಸದಲ್ಲಿದ್ದರು. 

ಮಕ್ಕಳಿಗೆ ಸಾರಿಗೆ ವಿಭಾಗಗಳ ಪರಿಚಯ

ಇನ್ನು ಪ್ರತಿನಿತ್ಯ ಮಕ್ಕಳಿಗೆ ಮೂರು ವಿಧದ ಸಾರಿಗೆ ಬಗ್ಗೆ ಪಾಠ ಮಾಡ್ತಿದ್ದ ಶಿಕ್ಷಕರು, ಮಕ್ಕಳಿಗೆ ಮೂರು ವಿಧದ ಸಾರಿಗೆಯಲ್ಲಿ ಪ್ರಯಾಣ ಮಾಡಿದ್ರೆ ಅದರ ಅನುಭವ ಗೊತ್ತಾಗುತ್ತದೆ ಅಂತ ತಿಳಿದು ವಿಮಾನದಲ್ಲಿ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ್ದರು.

77

ಮಕ್ಕಳ ವಿಮಾನ ಪ್ರವಾಸಕ್ಕೆ ಶಿಕ್ಷಕರ,ದಾನಿಗಳ ಸಾಥ್

ಮಕ್ಕಳಿಗೆ ವಿಮಾನದ ಪ್ರಯಾಧ ಖರ್ಚುವೆಚ್ಚ ಬರಿಸೋದು ಕಷ್ಟವಾಗಿತ್ತು. ಹೀಗಾಗಿ ಮೊದಲು ಯಾರೆಲ್ಲಾ ಪ್ರವಾಸಕ್ಕೆ ಬರ್ತಾರೆ ಅನ್ನೋದನ್ನು ಲಿಸ್ಟ್ ಮಾಡಿದ ಶಿಕ್ಷಕರು, ಪ್ರತಿಯೊಬ್ಬ ವಿದ್ಯಾರ್ಥಿಗೆ ಕೇವಲ ಎರಡುವರೆ ಸಾವಿರ ರೂಪಾಯಿ ಹಣವನ್ನು  ಪ್ರವಾಸಕ್ಕೆ ನೀಡಬೇಕು ಅಂತ ಹೇಳಿದ್ದರು. ಹೀಗಾಗಿ ಮೂವತ್ತೆರಡು ಮಕ್ಕಳು ಹಣ ನೀಡಿದ್ದರು. ಆದ್ರೆ ನಾಲ್ಕು ದಿನದ ಪ್ರವಾಸಕ್ಕೆ ಪ್ರತಿಯೊಬ್ಬರಿಗೂ ತಲಾ ಹತ್ತು ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಆ ಹಣವನ್ನು ಸ್ವತ ತಾವೇ ತಮ್ಮ ಜೇಬಿನಿಂದ ಒಂದಿಷ್ಟು ಹಣವನ್ನು ಹಾಕಿದ್ರೆ,  ಗ್ರಾಮಸ್ಥರು ಒಂದಿಷ್ಟು ಹಣ ಹೊಂದಿಸಿ ನೀಡಿದ್ದಾರೆ.ಶಿಕ್ಷಕರು, ಗ್ರಾಮಸ್ಥರ ಸಹಕಾರದಿಂದ ಮಕ್ಕಳು ನಾಲ್ಕು ದಿನದ ಪ್ರವಾಸಕ್ಕೆ ಹೋಗಿದ್ದಾರೆ.

ಕೊಪ್ಪಳದ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದೇ ರೀತಿ ಎಲ್ಲರು ತಮ್ಮ ಶಾಲೆಯ ಮಕ್ಕಳಿಗೆ ಅವಕಾಶ ಕಲ್ಪಿಸಿದ್ರೆ, ಬಡವರ ಮಕ್ಕಳು, ಸರ್ಕಾರಿ ಶಾಲೆಯ ಮಕ್ಕಳು ಕೂಡಾ ವಿಮಾನದಲ್ಲಿ ಹಾರಾಡಲಿಕ್ಕೆ ಸಾಧ್ಯವಾಗುತ್ತದೆ.

ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories