ಚಿಕ್ಕಮಗಳೂರು: ನರಕ ಸದೃಶ್ಯ ಈ ರಸ್ತೇಲೂ ನಿತ್ಯ ಸಾವಿರಾರು ಪ್ರವಾಸಿಗರು! ಚುನಾವಣೆ ಬಳಿಕ ತಲೆಹಾಕದ ಜನಪ್ರತಿನಿಧಿಗಳು!

Published : Dec 03, 2024, 06:24 PM IST

ನಿತ್ಯ ಸಾವಿರಾರು ಪ್ರವಾಸಿಗರು ಬಂದೋಗೋ ಸ್ಥಳವಿದು. ಆದರೆ ಇಲ್ಲಿಗೆ ಹೋಗುವ ರಸ್ತೆ ಮಾತ್ರ ನರಕಸದೃಶ್ಯ ಎಂದರೆ ನಂಬಲೇಬೇಕು. ಅದರಲ್ಲೂ ಟೂರಿಸ್ಟ್ ಗಾಡಿ ಓಡಾಡಿ-ಓಡಾಡಿ ರಸ್ತೆ ಅಡಿಯಾಳದ ಗುಂಡಿ ಬಿದ್ದಿದೆ. ರಸ್ತೆ ಸರಿಪಡಿಸುವ ಕೆಲಸ ಆಗಿಲ್ಲ,ಚುನಾವಣೆ ಬಳಿಕ ಜನಪ್ರತಿನಿಧಿಗಳು ಇತ್ತ ತಲೆಹಾಕಿಲ್ಲ.  ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

PREV
14
ಚಿಕ್ಕಮಗಳೂರು: ನರಕ ಸದೃಶ್ಯ ಈ ರಸ್ತೇಲೂ ನಿತ್ಯ ಸಾವಿರಾರು ಪ್ರವಾಸಿಗರು! ಚುನಾವಣೆ ಬಳಿಕ ತಲೆಹಾಕದ ಜನಪ್ರತಿನಿಧಿಗಳು!

ಅದು ನೇತ್ರಾವತಿ ಪೀಕ್. ನೇತ್ರಾವತಿ ನದಿ ಹುಟ್ಟುವ ಜಾಗ. ಇಂದ್ರಲೋಕವನ್ನೂ ನಾಚಿಸುವ ಪ್ರಕೃತಿ ಸೌಂದರ್ಯ. ನಿತ್ಯ ನೂರಲ್ಲ.. ಸಾವಿರಾರು ಪ್ರವಾಸಿಗರು ಭೇಟಿ ಕೊಡ್ತಾರೆ. ಎಂಜಾಯ್ ಮಾಡಿ ಹೋಗ್ತಾರೆ. ಆದ್ರೆ, ದಕ್ಷಿಣ ಕನ್ನಡ-ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಕೊನೆ ಕುಗ್ರಾಮ. ಅಲ್ಲಿ ವಾಸವಿರೋ ಸುಮಾರು 70 ಕುಟುಂಬಗಳ ನೋವು ಯಾರಿಗೂ ಕಾಣ್ಸಿಲ್ಲ. ಕೇಳ್ಸಿಲ್ಲ. ನೆಟ್ವರ್ಕ್ ಇಲ್ಲ. ನೆಟ್ವರ್ಕ್ ಬೇಕು ಅಂದ್ರೆ 6-7 ಕಿ.ಮೀ. ಬರಬೇಕು. ಮಳೆಗಾಲ ಆರಂಭವಾಗುತ್ತಿದ್ದಂತೆ ಇವ್ರಿಗೆ ನರಕವೇ ಕಣ್ಣಮುಂದೆ ಬರುತ್ತೆ. ಓಡಾಡೋಕೆ ರಸ್ತೆ ಇರಲ್ಲ. ಇದ್ರು ಅಡಿಯಾಳದ ಗುಂಡಿಯಲ್ಲಿ ನಿತ್ಯವೂ ಸಂಚಾರ ಮಾಡುವ ದುಸ್ಥಿತಿ ಇದೆ. 
ರಸ್ತೆಯ ಸ್ಥಿತಿ ಮಾತ್ರ ಆಯೋಮಯ

24

ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಗ್ರಾಮದ ಜನರ ಕಥೆ-ವ್ಯಥೆ ಇದು. ಎರಡರಲ್ಲಿ ಯಾವುದೇ ಜಿಲ್ಲಾ ಕೇಂದ್ರ ಹೋಗಬೇಕು ಅಂದ್ರು ನೂರು ಕಿ.ಮೀ. ಗಡಿ ದಾಟಲೇ ಬೇಕು. ಕಾಡಂಚಿನ ಕುಗ್ರಾಮ. ದಟ್ಟ ಕಾಡಿನ ನಡುವೇ ಇರೋ ಗ್ರಾಮಗಳು. ಕೆಲವರು ಚಿಕ್ಕಮಗಳೂರು ಜಿಲ್ಲೆ ಅಂದ್ರೆ, ಕೆಲವರು ನಮ್ದು ದಕ್ಷಿಣ ಕನ್ನಡ ಅಂತಾರೇ. ಘಾಟಿಯ ಮಧ್ಯೆ ನಿತ್ಯ ಅಲ್ಲಿಗೆ ಹೋಗುವ ಪ್ರವಾಸಿಗರು  ನೂರಲ್ಲ... ಸಾವಿರಾರು... ನೇತ್ರಾವತಿ ಪೀಕ್ ಅಂದ್ರೆ ನೇತ್ರಾವತಿ ಉಗಮ ಸ್ಥಾನ. ನೇತ್ರಾವತಿ ಪಿಕ್ ಇರೋ ಸ್ಥಳಕ್ಕೆ ಹೋಗೋ ರಸ್ತೆಯ ಸ್ಥಿತಿ ಮಾತ್ರ ಆಯೋಮಯ.

ಈ ರಸ್ತೆ ಪ್ರವಾಸಿಗರಿಗೆನೋ ಖುಷಿ ಕೊಡಬಹುದು. ಆದರೆ, ನಿತ್ಯ ಓಡಾಡೋ ಪ್ರವಾಸಿಗರಿಗೆ ನರಕ. ಯಾಕಂದ್ರೆ, ಪ್ರವಾಸಿಗರು ಬರೋದು ಒಂದೇ ಸಲ. ಆದ್ರೆ, ಈ ರಸ್ತೆಯನ್ನೇ ನಂಬಿರೋರು 70 ಕುಟುಂಬಗಳು. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ನರಕಯಾತನೆಯನ್ನ ನೋಡ್ತಾನೆ ಇದ್ದಾರೆ. ಅನುಭವಿಸುತ್ತಿದ್ದಾರೆ. ಯಾಕಂದ್ರೆ, ಅಲ್ಲಿಗೆ ಹೋಗೋದು ಫೋರ್ ವಿಲ್ ಜೀಪ್ ಗಳು ಮಾತ್ರ. ಬೇರೆ ಯಾವುದೇ ವಾಹನಗಳು ಹೋಗೋಕೆ ಇರ್ಲಿ ಆ ರಸ್ತೆಗೆ ಎಂಟ್ರಿ ಕೊಡೋಕು ಭಯ ಬಿಳ್ತಾವೇ. ಅಂತಹ ದುರ್ಗಮ ಹಾದಿಯಲ್ಲಿ ಬದುಕು ಕಟ್ಟಿಕೊಂಡವರು 70 ಕುಟುಂಬದ ಜನ.

34

ವಿದ್ಯಾರ್ಥಿಗಳಿಗೆ ನರಕದ ದಾರಿ!

ಈ ರಸ್ತೆಯನ್ನೇ ನಂಬಿರೋ ಗ್ರಾಮಗಳು ಅಂದ್ರೆ ಚಿಕ್ಕಮಗಳೂರು ಜಿಲ್ಲೆಯ ಕಳಸ  ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರೋ ಗುತ್ಯಡ್ಕ, ಕುರೇಕಲ್, ಮಲವಂತಿ ಗ್ರಾಮ. ಇದ್ರ ನೇತ್ರಾವತಿ ಪಿಕ್ ಗೆ ಹೋಗೋ ರಸ್ತೆಯ ಗ್ರಾಮಗಳು. ಈ ರಸ್ತೆ ಇನ್ನೂ ಡಾಂಬರೀಕರಣ ಕಂಡಿಲ್ಲ. ಕೊಂಚ ದೂರ ಸಿಮೆಂಟ್ ರಸ್ತೆ ಮಾಡಲಾಗಿದೆ ಅಷ್ಟೆ. ಅಲ್ಲೊಂದು ಸೇರುವೆಯೂ ಇದೇ. ತನ್ನ ಸಾಮರ್ಥ್ಯ ಕಳ್ಕೊಂಡಿರೋ ಆ ಸೇರುವೆ ಅದ್ಯಾವಾಗ ಕುಸಿಯುತ್ತೋ ಅನ್ನೋ ಸ್ಥಿತಿಯಲ್ಲಿದೆ. ರಸ್ತೆಗಾಗಿ  ಬೆಳ್ತಂಗಡಿ ಹಾಗೂ ಮೂಡಿಗೆರೆ ಶಾಸಕಗರಿಗೂ ಮನವಿ ಮಾಡಾಯ್ತು. ರಸ್ತೆ ಸರಿಯಾಗೋ ರೀತಿ ಕಾಣ್ತಿಲ್ಲ. ಇನ್ನು ಇವ್ರೆಲ್ಲರೂ ಕಳಸ ತಾಲೂಕಿನ ಸಂಸೆಗೆ ಬಂದ್ರೆ ಮಾತ್ರ ದಕ್ಷಿಣ ಕನ್ನಡಕ್ಕೋ, ಕಳಸಕ್ಕೋ ಹೋಗೋಕೆ ಸಾಧ್ಯ. ಶಾಲಾ-ಕಾಲೇಜಿಗೆ ಹೋಗೋ ಮಕ್ಕಳಳಂತೂ ನಿತ್ಯ ಪರದಾಡ್ತಿದ್ಧಾರೆ. 

44

ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಜನರಿಗೆ ಭರವಸೆ ನೀಡುವ ಅಧಿಕಾರಿಗಳು ಹಾಗೂ ಜನನಾಯಕರ ವಿರುದ್ಧ ಹಳ್ಳಿಗರು ಆಕ್ರೋಶ ಹೊರಹಾಕಿದ್ದಾರೆ.ಒಟ್ಟಾರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಎರಡು ಜಿಲ್ಲೆಗೂ ಸೇರೋ ಈ ಕುಗ್ರಾಮದ ಸ್ಥಿತಿಯಂತೂ ಕೇಳೋರೆ ಇಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಡುವೇ ಇರೋ ಈ ಗ್ರಾಮಸ್ಥರು ಊರು ಸೇರೋದು ಅಂದ್ರೆ ನರಕದ ಹಾದಿ ಎನ್ನುವಂತಿದ್ರೂ ಅಧಿಕಾರಿಗಳು, ಜನನಾಯಕರು ಬರೋದು ವೋಟ್ ಕೇಳೋಕೆ ಮಾತ್ರ. ಅವ್ರು ಮತ್ತೇ ನೆನಪಾಗೋದು ಮುಂದಿನ ಚುನಾವಣೆ ಘೋಷಣೆಯಾದಾಗಲೇ. ಅದು ಭರವಸೆ ನೀಡೋಕೆ ಮಾತ್ರವೇ.

click me!

Recommended Stories