Kannada Book: ಕೋವಿಡ್‌ ವೇಳೆ ಜೀವದ ಹಂಗು ಬಿಟ್ಟು ಪತ್ರಕರ್ತರ ಕೆಲಸ: ಬಿಎಸ್‌ವೈ ಶ್ಲಾಘನೆ

Kannadaprabha News   | Asianet News
Published : Feb 05, 2022, 06:49 AM IST

ಬೆಂಗಳೂರು(ಫೆ.05):  ಕೊರೋನಾ(Coronavirus) ವಿರುದ್ಧದ ಹೋರಾಟದಲ್ಲಿ ಪತ್ರಕರ್ತರು(Journalists) ಕೂಡ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ್ದು, ಸೋಂಕಿನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ರಾಜ್ಯ ಸರ್ಕಾರವು(Government of Karnataka) ತನ್ನ ಜವಾಬ್ದಾರಿ ನಿಭಾಯಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದರು.  

PREV
14
Kannada Book: ಕೋವಿಡ್‌ ವೇಳೆ ಜೀವದ ಹಂಗು ಬಿಟ್ಟು ಪತ್ರಕರ್ತರ ಕೆಲಸ: ಬಿಎಸ್‌ವೈ ಶ್ಲಾಘನೆ

ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಬಹುಮುಖಿ ಪ್ರಕಾಶನದ ‘ಶಿವಾನಂದ ತಗಡೂರು(Shivanand Tagadur) ಹೇಳಿದ ಕೋವಿಡ್‌ ಕತೆಗಳು’ ಪುಸ್ತಕ ಲೋಕಾರ್ಪಣೆ(Book Launch) ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ ಬಿ.ಎಸ್‌.ಯಡಿಯೂರಪ್ಪ

24

ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಬಹುಮುಖಿ ಪ್ರಕಾಶನದ ‘ಶಿವಾನಂದ ತಗಡೂರು(Shivanand Tagadur) ಹೇಳಿದ ಕೋವಿಡ್‌ ಕತೆಗಳು’ ಪುಸ್ತಕ ಲೋಕಾರ್ಪಣೆ(Book Launch) ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ ಬಿ.ಎಸ್‌.ಯಡಿಯೂರಪ್ಪ

34

ರೋಗಿಗಳ ಆರ್ಥಿಕ ಸ್ಥಿತಿಗತಿ ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡುವ ಮನಸ್ಥಿತಿಯನ್ನು ವೈದ್ಯರು(Doctors) ಬೆಳೆಸಿಕೊಳ್ಳಬೇಕು. ರೋಗಿ ಚೇತರಿಕೆ ಕಾಣುವುದಿಲ್ಲ ಎಂದು ತಿಳಿದಿದ್ದರೂ ಆಸ್ಪತ್ರೆ ಬಿಲ್‌ ಹೆಚ್ಚಿಸಲು ಚಿಕಿತ್ಸೆ ಮುಂದುವರೆಸಬಾರದು. ಒಂದು ವೇಳೆ ರೋಗಿ ಬಡವನಾಗಿದ್ದರೆ ಸತ್ತ ರೋಗಿ ಜತೆ ಇದ್ದವರೂ ಸಾಯುತ್ತಾರೆ. ವೃತ್ತಿಯಲ್ಲಿ ಮಾನವೀಯತೆ ಅತ್ಯಂತ ಮುಖ್ಯವಾಗಿದ್ದು, 100 ಹಾಸಿಗೆಗಳಿಗಿಂತ ಹೆಚ್ಚಿರುವ ಖಾಸಗಿ ಆಸ್ಪತ್ರೆಗಳು ಶೇ.20 ರಷ್ಟುಹಾಸಿಗೆಗಳನ್ನು ಬಡ ಮತ್ತು ಮಧ್ಯಮವರ್ಗದವರ ಚಿಕಿತ್ಸೆಗೆ ಮೀಸಲಿಡುವ ನಿರ್ಧಾರ ಮಾಡಬೇಕು ಎಂದು ಸಲಹೆ ನೀಡಿದ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ 

44

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌(Kannada Prabha and Asianet Suvarna News) ಪ್ರಧಾನ ಸಂಪಾದಕ ರವಿ ಹೆಗಡೆ(Ravi Hegde), ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಚನ್ನೇಗೌಡ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್‌, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ, ವಾರ್ತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಎಚ್‌.ಬಿ. ದಿನೇಶ್‌, ಚಲನಚಿತ್ರ ನಟಿ ಸೋನು ಗೌಡ, ಬಹುರೂಪಿ ಸಂಸ್ಥೆಯ ಜಿ.ಎನ್‌. ಮೋಹನ್‌ ವೇದಿಕೆಯಲ್ಲಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories