ಇಂದಿನಿಂದ 9 ದಿನಗಳ ಕಾಲ ದತ್ತಜಯಂತಿ ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್!

Published : Dec 06, 2024, 10:03 PM ISTUpdated : Dec 06, 2024, 10:08 PM IST

ಇಂದಿನಿಂದ 9 ದಿನ ಕಾಫಿ ನಾಡಿನಲ್ಲಿ ಕೇಸರಿ ಕಲರವ.ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯಲಿರೋ ದತ್ತಜಯಂತಿಗೆ ಇಂದು ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ.ಮಾಲಾಧಾರಣೆ ಮಾಡೋ ಮೂಲಕ ಪ್ರಾರಂಭವಾಗಿದ್ದು ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ ಮಾಲಾಧಾರಣೆ ನಡೆಸಿದ್ರು ಹಿಂದೂ ಕಾರ್ಯಕರ್ತರು. ಇನ್ನೂ ಮಾಲಾಧಾರಣೆಯಾಗ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.  ವರದಿ : ಆಲ್ದೂರು ಕಿರಣ್   

PREV
15
ಇಂದಿನಿಂದ 9 ದಿನಗಳ ಕಾಲ ದತ್ತಜಯಂತಿ ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್!

ಕೇಸರಿ ಶಲ್ಯ ಪಂಚೆ ತೊಟ್ಟು ಭಜನೆಯಲ್ಲಿರೋ ಹಿಂದೂ ಸಂಘಟನೆಯ ಕಾರ್ಯಕರ್ತರು.ದತ್ತಾತ್ರೇಯ ವಿಗ್ರಹಕ್ಕೆ ವಿಶೇಷ. ಅಧುನಿಕ ಶಸಾಸ್ತ್ರ ಹೊತ್ತು ಚಿಕ್ಕಮಗಳೂರು ನಗರದಲ್ಲಿ ರೌಂಡ್ಸ್ ಹಾಕಿದ ಪೊಲೀಸ್ರು ಹಾಗೂ ರ್ಯಾಪಿಡ್ ಆ್ಯಕ್ಷನ್ ಪೋರ್ಸ್..ಹೌದು ಕಾಫಿ ನಾಡು ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಡಿಸೆಂಬರ್ 12,13,14 ದತ್ತಜಯಂತಿ ನಡೆಯಲಿದೆ.

25

ಈ ದತ್ತಜಯಂತಿಗೆ ಇಂದು ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ನಗರ ಕಾಮಧೇನು ಮಹಾಗಣಪತಿ ದೇವಸ್ಥಾನದಲ್ಲಿ ದತ್ತಾತ್ರೇಯ ದೇವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಂತ್ರ ಮಾಲಾಧಾರಣೆ ನಡೆಸಲಾಯ್ತು..ಎಂಎಲ್ಸಿ ಸಿ.ಟಿ.ರವಿ, ವಿಶ್ವಹಿಂದೂ ಪರಿಷತ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಘು ಸಕಲೇಶಪುರ ಸೇರಿ ನೂರಾರು ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ರು.
 

35

ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್ : 

ಇನ್ನು ಈಗಾಗಲೇ ಹಿಂದೂ ಅರ್ಚಕರ ನೇತೃತ್ವದಲ್ಲಿಯೇ ದತ್ತಜಯಂತಿ ನಡೆಯುತ್ತಿದೆ.ಹಿಂದೂಗಳಿಗೆ ಪೀಠ ಒಪ್ಪಿಸಬೇಕು ಎಂಬ ಅಗ್ರಹ ಈ ಬಾರಿಯೂ ಕೇಳಿಬಂದಿದೆ. ಇದ್ರ ನಡುವೇ ವಕ್ಫ್ ವಿವಾದ ದತ್ತಜಯಂತಿಯಲ್ಲಿ ಮತ್ತೆ ಸದ್ದು ಮಾಡಿದ್ದು ವಕ್ಪ್ ನ ಮೊದಲ ಬಲಿಯೇ ಐ.ಡಿ.ಪೀಠ, ಮೂಲದಾಖಲೆಯನ್ನ ಪರಿಶೀಲನೆ ನಡೆಸದೇ ವಕ್ಪ್ ಬೋರ್ಡ್ ಗೆಜೆಟ್ ನೋಟಿಫೀಕೆಷನ್ ಮಾಡಿದ್ರು. ಉಳಿಸಿಕೊಳ್ಳಲು ಜನಾದೊಂಲನ, ನ್ಯಾಯಲಯದಲ್ಲಿ ಹೋರಾಟ ಮಾಡಬೇಕಾಯಿತು ಎಂದು ಎಂಎಲ್ಸಿ ಸಿ.ಟಿ.ರವಿ ಹೇಳಿದ್ರು.

45

ಈ ವರ್ಷ 25 ನೇ ವರ್ಷದ ವಿಎಚ್ ಪಿ,ಬಜರಂಗದಳದ ನೇತೃತ್ವದಲ್ಲಿ ನಡೆಯೋ ದತ್ತಜಯಂತಿಯನ್ನ ಅದ್ದೂರಿಯಾಗಿ ಅಚರಿಸೋಕೆ ಪ್ಲಾನ್ ಮಾಡಲಾಗಿದೆ.ಇನ್ನೂ ಮಾಲಾಧಾರಣೆಯಾಗ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ.ಫುಲ್ ಅಲರ್ಟ್ ಆಗಿದೆ

55

ನಗರದಲ್ಲಿ ತೆಲಗಾಂಣದಿಂದ ಬಂದಿರೋ ರ್ಯಾಪಿಡ್ ಆಕ್ಷನ್ ಪೋರ್ಸ್ ಹಾಗೂ ಸ್ಥಳೀಯರ ಪೊಲೀಸರ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಿದ್ರು.ಅಧುನಿಕ ಶಸಾಸ್ತ್ರಗಳನ್ನ ಹೊತ್ತು ಪಥಸಂಚನೆ ನಡೆಸಿ ಜನರಲ್ಲಿ ಧೈರ್ಯ ತುಂಬಿದ್ರು ಪೊಲೀಸ್ರು 

Read more Photos on
click me!

Recommended Stories