ಇಲ್ಲಿ ನೀವು ನೋಡುತ್ತಿರುವ ಸೀಲ್ ಹಾಕಿ ಬಂದ್ ಮಾಡಿರುವ ಬಾಗಿಲು, ಜಪ್ತಿಯಾದ ಮನೆಯ ಮುಂದೆ ವಾಸ, ಸಹಾಯಕ್ಕಾಗಿ ಹಾತೊರೆಯುತ್ತಿರೊ ಕಂಗಳು, ಅಸಾಯಕವಾಗಿ ಕುಳಿತಿರೊ ವೃದ್ಧ ದಂಪತಿ ಎಲ್ಲಾ ದೃಶ್ಯಗಳನ್ನು ಗಡಿ ನಾಡು ಚಾಮರಾಜನಗರದಲ್ಲಿ ನೋಡುತ್ತಿದ್ದೀರಿ. ಚಾಮರಾಜನಗರ ತಾಲೂಕಿನ ಬೂದಿತಿಟ್ಟು ಗ್ರಾಮದ ನಂಜಶೆಟ್ಟಿಯವರ ದುರಂತ ಕಥೆಯಿದು.
ಅಡಿಕೆ ವ್ಯಪಾರಕ್ಕಾಗಿ ನಂಜಶೆಟ್ಟಿ ಇಕ್ವಿಟಿ ಫೈನಾನ್ಸ್ ಕಂಪನಿಯಿಂದ 6 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು 16 ಸಾವಿರ ಕಂತಿನ ಹಣವನ್ನ ಸರಿಯಾಗಿಯೆ ಕಟ್ಟುತ್ತಿದ್ದರು. ಆದರೆ, ಕೋವಿಡ್ ಬಂದ ಕಾರಣ ಲಾಕ್ ಡೌನ್ ಆಗಿ ತಮ್ಮ ವ್ಯಪಾರ ಸಂಪೂರ್ಣ ನಷ್ಟವಾಗಿದೆ. ಇದರ ಪರಿಣಾಮ ಸಾಲ ಮರು ಪಾವತಿ ಮಾಡದ ಕಾರಣ ಮನೆಯನ್ನ ಜಪ್ತಿ ಮಾಡಲಾಗಿದ್ದು, ಈಗ ಮನೆ ಕಳೆದುಕೊಂಡು ಅಂಗಳದಲ್ಲಿ ವಾಸ ಮಾಡುತ್ತಿದ್ದಾರೆ.