ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಹನುಮನ ನಾಡಿನಲ್ಲಿ ಸಂಭ್ರಮ

First Published Aug 5, 2020, 6:12 PM IST

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಅಂಜನಾದ್ರಿ ಬೆಟ್ಟದ ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿದ್ದರೆ ಜೈಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುತ್ತಾ ರಾಮನ ನಾಡಿಗೆ ಸಂದೇಶ ತಲುಪಿಸುತ್ತಿದ್ದವು. ಒಂದಷ್ಟು ಚಿತ್ರಗಳು ಇಲ್ಲಿವೆ ನೋಡಿ.

ರಾಮಜನ್ಮಭೂಮಿಯಲ್ಲಿ ಮೋದಿಯವರು ಭೂಮಿಪೂಜನ ನೆರವೇರಿಸುವಾಗಲೇ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನಿಗೆ ಪೂಜೆ ನೆರವೇರಿಸಲಾಯಿತು.
undefined
ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿತ್ತು
undefined
ಶ್ರೀ ಆಂಜನೇಯಸ್ವಾಮಿಗೆ ಪಂಚಾಮೃತಾಭಿಷೇಕ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪವಮಾನಹೋಮ ಮಂತ್ರಪಠಣ ಹಾಗೂ ಶ್ರೀರಾಮ ಹನುಮ‌ ಭಜನೆ ನಡೆಸಲಾಯಿತು.
undefined
ಜೈ ಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುದವು
undefined
ಮಂಗಳೂರಿನಿಂದ ಒಂದು ತಂಡ ಹಂಪಿ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ ರಾಮತಾರಕ ಜಪ, ಹೋಮ ಮಾಡಿತು.
undefined
ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳ ನಡೆದವು
undefined
ಶಾಸಕ ಪರಣ್ಣ ಮುನವಳ್ಳಿ, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ, ಪತಂಜಲಿ ಯೋಗ ಸಮತಿ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ, ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ,ಸಂತೋಷ ಕೆಲೋಜಿ,ಗ್ರಾಮೀಣ ಪಿಎಸ್ ಐ ಜೆ.ದೊಡ್ಡಪ್ಪ ಸೇರಿ ದೇಗುಲ ಸಮಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿದ್ದರು.
undefined
click me!