ಎಲ್ಲೀದ್ದೀರೋ ಅಲ್ಲೇ ಇರಿ ಎಂದ ಮೋದಿ: ಓಕೆ ಎಂದ ಜಯಂತಿ ಹಂಪೆಯಲ್ಲಿ!

First Published Apr 16, 2020, 7:59 PM IST

ದೇಶದಲ್ಲಿ ಲಾಕ್‌ಡೌನ್‌ನ ಕಾರಣದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸಾಧ್ಯವಾಗದೆ ಹಲವರು ಸಿಲುಕಿಕೊಂಡಿದ್ದಾರೆ. ಸಾಮಾನ್ಯ ಜನರಷ್ಷೇ ಅಲ್ಲ ಸೆಲೆಬ್ರೆಟಿಗಳೂ ಸ್ಟಕ್‌ ಆಗಿ ಪರದಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಇದೇ ರೀತಿ ಜಯಂತಿ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ಸಿಲುಕಿಕೊಂಡಿದ್ದಾರೆ. 75 ವರ್ಷದ ಅಭಿನಯ ಶಾರತೆ ತನ್ನ ಮಗ ಕೃಷ್ಣ ಕುಮಾರ್ ಅವರೊಂದಿಗೆ ಪ್ರವಾಸಕ್ಕೆ ಹೋಗಿದ್ದರು. ಲಾಕ್ ಡೌನ್ ಮುಗಿಯುವವರೆಗೂ ಇನ್ನೂ ಕೆಲವು ವಾರಗಳವರೆಗೆ ಯಾವುದೇ ಆಯ್ಕೆ ಇಲ್ಲದೆ, ಅವರು ಅಲ್ಲೇ ಹೋಟೆಲ್‌ನಲ್ಲಿ ಇರಬೇಕಾಗಿದೆ.

ಮಗ ಕೃಷ್ಣ ಕುಮಾರ್‌ ಜೊತೆ ಸುಮಾರು ಮೂರು ವಾರಗಳಿಂದಐತಿಹಾಸಿಕ ಸ್ಥಳ ಹಂಪೆಯಲ್ಲಿ ಸಿಲುಕಿಕೊಂಡಿರವ ನಟಿ ಜಯಂತಿ.
undefined
ಲಾಕ್‌ಡೌನ್‌ ಮಂಚೆ ಬಳ್ಳಾರಿ ಜಿಲ್ಲೆಯ ಹಂಪೆಗೆ ತೆರಳಿದ್ದ 75 ವರ್ಷದ ನಟಿ.
undefined
ಅಂದಿನಿಂದ ಹೋಟೆಲ್‌ನಲ್ಲಿ ತಂಗಿದ್ದಾರೆ ಅಮ್ಮ ಮಗ.ಜಯಂತಿ ಹಳೆಯ ಸಿನೆಮಾ ನೋಡುತ್ತಾ ಸಮಯಕಳೆಯುತ್ತಿದ್ದಾರೆ.
undefined
21 ದಿನಗಳ ಲಾಕ್‌ಡೌನ್ ನಂತರ ಏಪ್ರಿಲ್ 14 ರಂದುಬೆಂಗಳೂರಿಗೆ ಮರಳುವ ಆಶಯದಲ್ಲಿದ್ದರು.
undefined
ಈಗ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಣೆಯಾಗಿ ಇನ್ನೂ ಕೆಲವು ವಾರಗಳವರೆಗೆ ಅಲ್ಲೇ ಉಳಿಯುವಂತಾಗಿದೆ.
undefined
'ಜಯಂತಿಯ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವೈದ್ಯರು ಮತ್ತು ಅಧಿಕಾರಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ಸವಾಲು ಸರ್ಕಾರಕ್ಕೆ ಇದೆ. ತುರ್ತು ಪರಿಸ್ಥಿತಿ ಇದ್ದಲ್ಲಿ ನಾವು ಸಹಾಯಕ್ಕಾಗಿ ಕರೆ ಮಾಡುತ್ತೇವೆ'ಎಂದು ಅವರ ಪುತ್ರ ಕೃಷ್ಣ ಕುಮಾರ್ ಪ್ರಮುಖ ದಿನಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
undefined
ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಮರಾಠಿ ಚಿತ್ರಗಳೂ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅಭಿನಯ ಶಾರದೆ ಜಯಂತಿ.
undefined
ತಮ್ಮ ಫಾರ್ಮ್‌ಹೌಸ್‌ಗೆ ತೆರಳಿದ ಹಿಂದಿಯ ಸೂಪರ್‌ ಸ್ಟಾರ್‌ ಸಲ್ಲು ಬಾಯ್‌ ಅಲ್ಲೇ ಉಳಿದುಕೊಂಡು ಲಾಕ್‌ಡೌನ್‌ ಆದೇಶ ಪಾಲಿಸುತ್ತಿದ್ದಾರೆ.
undefined
ಬಾಲಿವುಡ್‌ ನಟ ಜಾಕಿ ಶ್ರಾಫ್‌ ಸಹ ಪುಣೆ ಮತ್ತು ಮುಂಬೈ ನಡುವೆ ಸ್ಟಕ್‌ ಆಗಿ ಸರ್ಕಾರದ ಆದೇಶವನ್ನು ಪಾಲಿಸಲು ಅಲ್ಲೇ ಉಳಿದಿರುವುದಾಗಿ ಹೇಳಿದ್ದಾರೆ ಹಾಗೂ ಫ್ಯಾನ್‌ಗಳಿಗೂ ಮನೆಯಿಂದ ಹೊರಗೆ ಹೋಗದಂತೆ ವಿಡಿಯೋ ಶೇರ್‌ ಮಾಡಿ ವಿನಂತಿಕೊಂಡಿದ್ದಾರೆ.
undefined
click me!