ಅನ್ನದಾತನ ಸ್ಮರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು

First Published Dec 23, 2020, 9:02 PM IST

ಬೆಂಗಳೂರು(ಡಿ.  23)ರಾಷ್ಟ್ರೀಯ ರೈತರ ದಿನದ ಅಂಗವಾಗಿ ಎಲ್ಲರೂ ಅನ್ನದಾತನಿಗೆ ಶುಭಾಶಯ ಕೋರಿದ್ದಾರೆ.  ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು  ರೈತನ ಕೊಡುಗೆಯನ್ನು ಸ್ಮರಿಸಿದ್ದಾರೆ.

ರೈತರು ನಿಜವಾದ ವೀರರು. ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾದಿಸುವ ಭುಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಮರಿಸಿಕೊಂಡಿದ್ದಾರೆ.
undefined
ಅನ್ನದಾತ ಸುಖೀಭವ ಎಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ರೈತ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ.
undefined
ಕುವೆಂಪು ವಿರಚಿತ ರೈತ ಗೀತೆಯ ಸಾಲುಗಳನ್ನು ಹಂಚಿಕೊಂಡಿರುವ ನಟ ಧನಂಜಯ ರೈತರ ದಿನದ ಶುಭಾಶಯ ಕೋರಿದ್ದಾರೆ.
undefined
ರೈತ ದೇಶದ ಬೆನ್ನೆಲುಬು, ನಮ್ಮೆಲ್ಲರ ಹಸಿವು ನೀಗಿಸಲು ತನ್ನ ಬೆನ್ನೆಲುಬು ಸವೆಯುವ ಹಾಗೇ ಹಗಲಿರುಳೆನ್ನದೇ ದುಡಿಯುವ ಸಮಸ್ತ ರೈತಾಪಿ ಬಂಧುಗಳಿಗೆ ಸುಖ, ಶಾಂತಿ, ಸಂಪತ್ತು, ಸಮೃದ್ಧ ಬೆಳೆ, ಆ ಬೆಳೆಗೆ ಒಳ್ಳೆಯ ಬೆಲೆ ಕೊಟ್ಟು ಕಾಪಾಡಲಿ ಭಗವಂತ. ಅನ್ನದಾತೋ ಸುಖೀ ಭವ. ಸಮಸ್ತ ಅನ್ನದಾತರಿಗೆ ವಿಶ್ವ ರೈತ ದಿನಾಚರಣೆಯ ಶುಭಾಶಯಗಳು ಎಂದು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಶುಭಾಶಯ ಕೋರಿದ್ದಾರೆ.
undefined
click me!