'ಬೆಳದಿಂಗಳ ಬಾಲೆ...' ಎಂದರೆ ನೆನಪಾಗೋ ನಟಿ ಇವರು..

First Published Feb 22, 2020, 2:34 PM IST

'ಕಲ್ಯಾಣ ಮಂಟಪ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಮನ್ ನಗರ್‌ಕರ್ ಫೇಮಸ್ ಆಗಿದ್ದು ನಮ್ಮೂರ ಮಂದಾರ ಹೂವೇ ಹಾಗೂ ಬೆಳದಿಂಗಳ ಬಾಲೆ ಚಿತ್ರದ ಮೂಲಕ. ಬೆಳದಿಂಗಳ ಬಾಲೆಯಲ್ಲಂತೂ ಮುಖ ತೋರಿಸದೇ ಹೋದರೂ, ಧ್ವನಿಯ ಮೂಲಕವೇ ಕನ್ನಡ ಚಿತ್ರರಸಿಕರ ಹೃದಯ ಕದಿಯುವಲ್ಲಿ ಯಶಸ್ವಿಯಾದ ಪ್ರತಿಭಾನ್ವಿತ ನಟಿ. ಪ್ರೀತ್ಸು ತಪ್ಪೇನಿಲ್ಲ ಚಿತ್ರದ ನಂತರ ಕಣ್ಮರೆಯಾಗಿದ್ದ ಇವರು ಬಬ್ರೂ ಚಿತ್ರದ ಮೂಲಕ ಮತ್ತೆ ಮರಳಿದರು. ಈ ಕನ್ನಡತಿ ಬಗ್ಗೆ ಮತ್ತೊಂದಿಷ್ಟು...

ಸಾಕಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಪಕ್ವ ನಟಿ ಸುಮನ್ ನಗರ್‌ಕರ್ ಅವರು ನೆನಪಾಗುವುದು ಬೆಳದಿಂಗಳ ಬಾಲೆ ಚಿತ್ರದ ಮೂಲಕವೇ.
undefined
ತೆಲುಗು ಲೇಖಕ ಯುಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ ಆಧಾರಿತ, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ ಬೆಳದಿಂಗಳ ಬಾಲೆ.
undefined
ಬ್ಯಾಂಕ್ ದರೋಡೆಯ ಕಥೆಯುಳ್ಳ ಡಾ.ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಟಿಸಿದ್ದಾರೆ. ಬ್ಯಾಂಕ್ ದರೋಡೆಯ ಕಥೆಯುಳ್ಳ ಡಾ.ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಟಿಸಿದ್ದಾರೆ. ಬ್ಯಾಂಕ್ ದರೋಡೆಯ ಕಥೆಯುಳ್ಳ ಡಾ.ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಟಿಸಿದ್ದಾರೆ.
undefined
ಮದುವೆಯಾಗಿ ಹಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದ ಸುಮನ್, ತಮ್ಮ ಬ್ಯಾನರ್ ಅಡಿ ನಿರ್ಮಿಸಿದ ಬಬ್ರೂ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದರು.
undefined
ಫ್ಯಾಮಿಲಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದ ಸುಮನ್ ಅಲ್ಲಿಯೇ ಮಕ್ಕಳಿಗೆ ಹಿಂದೂಸ್ಥಾನಿ ಸಂಗೀತ ತರಗತಿ ನಡೆಸುತ್ತಿದ್ದರು.
undefined
'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಹಾಗೂ 'ಅಶ್ವಿನಿ ನಕ್ಷತ್ರ' ಫೇಮ್ ಮಯೂರಿ ನಟನೆಯ 'ಇಷ್ಟಕಾಮ್ಯ' ಚಿತ್ರದಲ್ಲಿಯೂ ನಟಿಸಿದ್ದಾರೆ.
undefined
ಸಂಗೀತ ಕೇಳುವುದು, ಅಡುಗೆ ಕಲಿಯುವುದು ಹಾಗೂ ಗಾರ್ಡನಿಂಗ್ ಇವರ ಫೇವರೇಟ್ ಹಾಬಿಯಂತೆ.
undefined
ಮೊದಲ ಕನ್ನಡ ಆನ್‌ಲೈನ್ ರೇಡಿಯೋ ಸ್ಟೇಷನ್‌ ನಮ್ಮ ರೇಡಿಯೋದಲ್ಲಿ ವಾರದ ಶೋವೊಂದನ್ನು ನಡೆಯಿಸಿಕೊಡುತ್ತಿದ್ದರು.
undefined
ಹೂಮಳೆ, ದೋಣಿ ಸಾಗಲಿ, ...ರೇ, ಜಿರ್ಜೀಂಬೆ...ಮುಂತಾದ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
undefined
ಕಿರುಚಿತ್ರ ಗ್ರೇನಲ್ಲಿಯೂ ತಮ್ಮ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
undefined
click me!