ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು 'ಗುರುವಾರ ಬಂತಮ್ಮ' ಹಾಡಿದ ಅಪ್ಪು!

First Published Mar 3, 2020, 11:09 AM IST

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಳು ದಿನಗಳಿಂದ ನಡೆಯುತ್ತಿರುವ ಶ್ರೀಗುರುವೈಭವೋತ್ಸವದ ಕೊನೇ ದಿನ 425ನೇ ವರ್ಧಂತ್ಯುತ್ಸವ ನಡೆಯಿತು. ಈ ವೇಳೆ ಪುನೀತ್‌ ರಾಜ್‌ಕುಮಾರ್ ರಾಯರು ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.

ರಾಯಚೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ವೈಭವೋತ್ಸವ.
undefined
ನಟ ದರ್ಶನ್ ಹಾಗೂ ಪುನೀತ್‌ ರಾಜ್‌ಕುಮಾರ್ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.
undefined
ಈ ವೇಳೆ ಪುನೀತ್‌ ರಾಜ್‌ಕುಮಾರ್‌ 'ಗುರುವಾರ ಬಂತಮ್ಮ' ಹಾಡು ಹಾಡಿದ್ದಾರೆ.
undefined
425ನೇ ವರ್ಧಂತ್ಯುತ್ಸವ 7 ದಿನಗಳ ಕಾರ್ಯಕ್ರಮವಾಯಿತು.
undefined
ಡಾ.ರಾಜ್‌ಕುಮಾರ್‌ ಅವರೂ ಗುರು ರಾಘವೇಂದ್ರ ಅವರ ಭಕ್ತರಾಗಿದ್ದರು.
undefined
ಸಾಮಾನ್ಯವಾಗಿ ತಮ್ಮ ನಿರ್ಮಾಣದ ಚಿತ್ರಗಳನ್ನು ಗುರುವಾರವೇ ರಿಲೀಸ್‌ ಮಾಡುತ್ತೆ ಡಾ.ರಾಜ್ ಕುಟುಂಬ.
undefined
ಕೊನೇ ದಿನ ರಾಯರ ವರ್ಧಂತಿ ಉತ್ಸವದಲ್ಲಿ ಶ್ರೀಮಠ ಪ್ರಕಾರದಲ್ಲಿ ಬೆಂಗಳೂರಿನ ಡಾ. ಎಚ್‌.ಕೆ. ಸುರೇಶಾಚಾರ್ಯರಿಂದ ಜ್ಞಾನಯಜ್ಞ ಪ್ರವಚನ ನಡೆಯಿತು.
undefined
ತಿರುಪತಿ ದೇವಸ್ಥಾನದಿಂದ ತರಲಾದ ಶ್ರೀನಿವಾಸ ಶೇಷವಸ್ತ್ರವನ್ನು ಸುಕ್ಷೇತ್ರದಲ್ಲಿ ಮೆರವಣಿಗೆ ಮಾಡಲಾಯಿತು.
undefined
ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನು ಸ್ವೀಕರಿಸಿ ತಲೆ ಮೇಲೆ ಇಟ್ಟುಕೊಂಡು ಪ್ರಕಾರದಲ್ಲಿ ಪ್ರದಕ್ಷಿಣೆ ಹಾಕಿ ಶ್ರೀ ಗುರು ರಾಯರ ಮೂಲ ಬೃಂದಾವನದ ಮುಂದೆ ಇಟ್ಟು, ರಾಯರಿಗೆ ಸಮರ್ಪಿಸಲಾಯಿತು.
undefined
ನವರಸ ನಾಯಕ ಜಗ್ಗೇಶ್‌ ಕೂಡ ಗುರುರಾಯರ ಭಕ್ತರು.
undefined
click me!