ಕೊರೋನಾ ವೈರಸ್ಸಿನಿಂದ ರಾಜ್ಯವೇ ಲಾಕ್ಡೌನ್ ಆದೇಶ ಪಾಲಿಸುತ್ತಿದೆ.
undefined
ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ.
undefined
ಶ್ರೀಯುತ ವಿಜಯ್ ಕುಮಾರ್ ಸಿಂಹ, ರೂಪಿಕ, ದೀಪಕ್, ಮೈತ್ರೇಯಿ, ಸೋನು ಗೌಡ, ಗಟ್ಟಿಮೇಳ ಖ್ಯಾತಿಯ ರಕ್ಷ್ ಹಾಗೂ ಗಜೇಂದ್ರ ಸಾಥ್ ನೀಡಿದ್ದಾರೆ.
undefined
ವೀರೇಶ್ ಚಿತ್ರಮಂದಿರ ಹಾಗೂ ಮಾಗಡಿ ಮುಖ್ಯ ರಸ್ತೆಯಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಿದ್ದಾರೆ.
undefined
ಡಾ. ರಾಜ್ಕುಮಾರ್ ವಾರ್ಡ್ನಲ್ಲಿ ಬೆಳಗ್ಗೆ 8 ಗಂಟೆಗೆ ಮೂಕ ಪ್ರಾಣಿಗಳಿಗೆ ಆಹಾರ ನೀಡಲು ಶುರು ಮಾಡಿದ್ದಾರೆ.
undefined
ಈ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡಲು ಇಚ್ಛಿಸಿದ್ದಾರೆ.
undefined
ನಿರ್ಮಾಪಕರು ಭಾ ಮಾ ಹರೀಶ್ ಹಾಗೂ ವಿಜಯ್ ಕುಮಾರ್ ಸಿಂಹ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.
undefined
ಅನೇಕ ವಾರ್ಡ್ಗಳಲ್ಲಿ ರಾಜಕಾರಣಿಗಳು ಹಾಗೂ ಸೋಷಿಯಲ್ ವರ್ಕರ್ಸ್ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.
undefined
ಈ ಹಿಂದೆ ಥರ್ಡ್ ಕ್ಲಾಸ್ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ.
undefined
ನಟಿ ಸಂಯುಕ್ತ ಹೊರನಾಡ ಮೂಕಪ್ರಾಣಿಗಳಿಗೆ ದಿನಾ ಆಹಾರ ವ್ಯವಸ್ಥೆ ಮಾಡಿದ್ದಾರೆ.
undefined