ಯಾವಾಗಲೂ ಸಿಂಪಲ್ ಆಗಿರುವ ರಾಜ್ ಬಿ ಶೆಟ್ಟಿ (Raj B Shetty) ಬಿಳಿ ಶರ್ಟ್, ಕುತ್ತಿಗೆಯಲ್ಲಿ ರುದ್ರಾಕ್ಷಿ ಹಾರ ಧರಿಸಿ, ಹಣೆ ಮೇಲೆ ಗಂಧವನ್ನು ಹಚ್ಚಿ ಅದರ ಮೇಲೆ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಶೇಷತೆ ಅಂದ್ರೆ, ರಾಜ್ ಬಿ ಶೆಟ್ಟಿ ಮಹಾಕುಂಭಕ್ಕೆ ಒಬ್ಬರೇ ತೆರಳಿಲ್ಲ, ಇವರಿಗೆ ಕರ್ನಾಟಕದ ಜನಪ್ರಿಯ ನಟಿ ನಿರ್ದೇಶಕಿ ಅನುಶ್ರೀಯವರು ಹಾಗೂ ಚಾರ್ಲಿ 777 ನಿರ್ದೇಶಕರಾಗಿರುವ ಕಿರಣ್ ರಾಜ್ ಕೂಡ ಸಾಥ್ ನೀಡಿದ್ದಾರೆ. ಜೊತೆಗೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ಕಾಂತಾರಾ ಸಿನಿಮಾ ಖ್ಯಾತಿಯ ರಂಜನ್ ಎಸ್ ಹಾಗೂ ಮತ್ತಿತರರು ಕೂಡ ಭಾಗಿಯಾಗಿದ್ದಾರೆ.