ಸ್ಯಾಂಡಲ್‌ವುಡ್ ಒಗ್ಗಟ್ಟಾಗಿ ಇರಬೇಕು ಅಂತ ಬಯಸೋನು ನಾನು: ಮ್ಯಾಕ್ಸ್‌ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದ ಸುದೀಪ್‌

Published : Dec 25, 2024, 09:28 AM ISTUpdated : Dec 25, 2024, 09:40 AM IST

ಕಿಚ್ಚ ಸುದೀಪ್ ನಟನೆಯ, ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್‌’ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ ಡಿ.27ರಂದು ಉಳಿದ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ.  

PREV
18
ಸ್ಯಾಂಡಲ್‌ವುಡ್ ಒಗ್ಗಟ್ಟಾಗಿ ಇರಬೇಕು ಅಂತ ಬಯಸೋನು ನಾನು: ಮ್ಯಾಕ್ಸ್‌ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದ ಸುದೀಪ್‌

ಕಿಚ್ಚ ಸುದೀಪ್ ನಟನೆಯ, ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್‌’ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ ಡಿ.27ರಂದು ಉಳಿದ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

28

ಈ ಸಿನಿಮಾ ಕುರಿತು ಕಿಚ್ಚ ಸುದೀಪ್, ‘ಎರಡೂವರೆ ವರ್ಷ ಕಾಯಿಸಿದ್ದಕ್ಕಾಗಿ ಕ್ಷಮೆ ಇರಲಿ. ಮುಂದೆ ಹೀಗಾಗುವುದಿಲ್ಲ. ಈ ಸಿನಿಮಾ ತುಂಬಾ ಚೆನ್ನಾಗಿದೆ. ಮೂರು ತಿಂಗಳು ಪ್ರತೀ ರಾತ್ರಿ ಶೂಟಿಂಗ್ ಮಾಡಿ ಸಿನಿಮಾ ಸಿದ್ಧಗೊಳಿಸಿದ್ದೇವೆ. 

38

ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಇರಬೇಕು ಅಂತ ಬಯಸೋನು ನಾನು. ಬೇರೆ ರಾಜ್ಯದ ಸಿನಿಮಾಗಳಿಗೆ ಸಪೋರ್ಟ್ ಮಾಡಿದ ಹಾಗೆ ನಮ್ಮ ಸಿನಿಮಾಗಳಿಗೂ ಸಪೋರ್ಟ್ ಮಾಡಿ’ ಎಂದು ಹೇಳಿದ್ದಾರೆ. ಕಲೈಪುಲಿ ಧನು ನಿರ್ಮಾಣದ ಸಿನಿಮಾದಲ್ಲಿ ಉಗ್ರಂ ಮಂಜು, ಸಂಯುಕ್ತಾ ಹೊರನಾಡು ನಟಿಸಿದ್ದಾರೆ.

48

‘ಹೆಣ್ಣುಮಕ್ಕಳನ್ನು ಗೌರವಿಸಬೇಕು. ಹೀರೋಯಿನ್‌ ನೆಪ ಮಾತ್ರಕ್ಕೆ ಸಿನಿಮಾದಲ್ಲಿರಬಾರದು. ಈ ಕಾರಣಕ್ಕೇ ಮ್ಯಾಕ್ಸ್‌ ಸಿನಿಮಾದಲ್ಲಿ ಹೀರೋಯಿನ್‌ ಪಾತ್ರ ಇದ್ದರೂ ನಾನದನ್ನು ತೆಗೆಯಲು ಹೇಳಿದೆ’ ಎಂದು ಸುದೀಪ್‌ ಹೇಳಿದ್ದಾರೆ.

58

‘ಬೆಳಗ್ಗೆ ಎದ್ದರೆ ನಾನು ಸ್ಕ್ರಿಪ್ಟ್‌ ಹುಡುಕುತ್ತಿರುತ್ತೀನಿ, ಹೀರೋಯಿನ್‌ನಲ್ಲ ಎಂದೂ ಹೇಳಿದ್ದಾರೆ.ನನಗೆ ಉಪೇಂದ್ರ ಅವರ ಸ್ಟಾರ್‌ಡಮ್‌ ಬಗ್ಗೆ ಅನುಮಾನ ಇಲ್ಲ. ಚಿತ್ರರಂಗಕ್ಕೆ ಉಪೇಂದ್ರ ಕೊಡುಗೆ ದೊಡ್ಡದು. ನಾವೆಲ್ಲ ಅವರಿಂದ ಕಲಿತುಕೊಂಡು ಬೆಳೆದವರು. ನಮ್ಮಿಬ್ಬರ ಸಿನಿಮಾ ರಿಲೀಸ್‌ ಬಗ್ಗೆ ಅವರಿಗೇ ಇಲ್ಲದ ತಲೆನೋವು, ನನಗ್ಯಾಕೆ ನಿಮಗ್ಯಾಕೆ. 
 

68

ಅವರೇ ಎಲ್ಲೂ ಮಾತಾಡ್ತಿಲ್ಲ. ಅವರಿಗೆ ಗೊತ್ತು ನಾವ್ಯಾಕೆ ಆ ದಿನಾಂಕಕ್ಕೇ ಸಿನಿಮಾ ಬಿಡುಗಡೆ ಮಾಡ್ತಿದ್ದೀವಿ ಅಂತ. ಅಷ್ಟೊಂದು ರಜೆಗಳಿರುವಾಗ ನಮ್ಮ ಸಿನಿಮಾ ಬರದಿದ್ದರೆ ಬೇರೆ ಭಾಷೆ ಸಿನಿಮಾ ಬರ್ತವೆ ಅಷ್ಟೇ. ದಯವಿಟ್ಟು ಉಪೇಂದ್ರ ಸಿನಿಮಾವನ್ನು ನಂಬಿ. ಗುರು ಮೊದಲು ಬರ್ತಿದ್ದಾರೆ. ಸ್ವಲ್ಪ ದಿನದ ನಂತರ ಶಿಷ್ಯ ಬರ್ತಿದ್ದಾನೆ ಅಷ್ಟೇ ಎಂದು ಸುದೀಪ್‌ ಹೇಳಿದ್ದಾರೆ.
 

78

‘ಮ್ಯಾಕ್ಸ್‌ ಹೈ ವೋಲ್ಟೇಜ್‌ ಸಿನಿಮಾ. ನಿಷ್ಠಾವಂತ ಪೊಲೀಸ್‍ ಅಧಿಕಾರಿ ಅರ್ಜುನ್ ಮಹಾಕ್ಷಯ್‍ ಆಗಿ ಕಾಣಿಸಿಕೊಂಡಿದ್ದೇನೆ. ಆತನನ್ನ ಎಲ್ಲರೂ ಮ್ಯಾಕ್ಸ್ ಅಂತ ಕರೆಯುತ್ತಾರೆ. ನಿರ್ದೇಶಕ ವಿಜಯ್‌ ಅವರ ಸ್ಕ್ರಿಪ್ಟ್‌ನಲ್ಲಿನ ಪ್ರಾಮಾಣಿಕತೆ ಇಷ್ಟ ಆಯ್ತು. ಅವರ ವಿಷನ್‌ ಚೆನ್ನಾಗಿತ್ತು, ಹೀಗಾಗಿ ಸಿನಿಮಾ ಒಪ್ಪಿಕೊಂಡಿದ್ದೆ. ಟ್ರೇಲರ್‌ ನೋಡಿದಾಗ ಆ್ಯಕ್ಷನ್‌, ರಕ್ತ ಕಾಣಬಹುದು, ಆದರೆ ಅದೇ ಸಿನಿಮಾ ಅಲ್ಲ. 

88

ಈ ಸಿನಿಮಾದ ಸ್ಪೀಡ್‌ ಸಖತ್ತಾಗಿದೆ. ಪ್ರತೀ ಸೀನ್‌ ಕೂಡ ಒಂದು ಕಥೆ ಹೇಳುತ್ತೆ. ಈ ಸಿನಿಮಾದ ನೈಟ್‌ ಸೀನ್‌ಗಳನ್ನು ಹಗಲು ಧೂಳು, ಬೆಂಕಿ ನಡುವೆ ಶೂಟ್‌ ಮಾಡ್ತಾ ಇದ್ವಿ. ಅದು ಚಾಲೆಂಜಿಂಗ್ ಆಗಿತ್ತು. ಕಾರಣಾಂತರಗಳಿಂದ ಸಿನಿಮಾ ವಿಳಂಬವಾಗಿದೆ. ನನ್ನ ತಾಯಿಗೆ ಈ ಸಿನಿಮಾ ನೋಡೋದಕ್ಕಾಗಿಲ್ಲ ಎಂಬ ನೋವಿದೆ’ ಎಂದು ಸುದೀಪ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories