ಧನ್ವೀರ್ ನಾಯಕನಾಗಿ ನಟಿಸಿರುವ, ಶಂಕರ್ ರಾಮನ್ ಎಸ್ ನಿರ್ದೇಶನದ ‘ವಾಮನ’ ಚಿತ್ರದ ತಾಯಿ- ಮಗನ ಬಾಂಧವ್ಯದ ಹಾಡು ಬಿಡುಗಡೆಯಾಗಿದೆ. ಈ ಸಿನಿಮಾ ಏ.10ರಂದು ರಿಲೀಸ್ ಆಗುತ್ತಿದೆ.
25
ಈ ಕುರಿತು ನಿರ್ದೇಶಕ ಶಂಕರ್ ರಾಮನ್, ‘ಕಂದ ಕನಸ ರೂಪ ಎಂಬ ಈ ಹಾಡನ್ನು ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ. ‘ಕೈ ತುತ್ತು ಕೊಟ್ಟವಳೇ ಐ ಲವ್ ಯು ಮದರ್ ಇಂಡಿಯಾ’, ‘ಬೇಡುವೆನು ವರವನು ಕೊಡೆ ತಾಯಿ ಜನುಮವನು’ ಎಂಬ ಹಾಡುಗಳು ನನಗಿಷ್ಟ. ಅದಕ್ಕೆ ಅಂಥದ್ದೇ ಒಂದು ಹಾಡು ಮಾಡಿಸಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
35
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಪ್ರಮೋದ್ ಮರವಂತೆ ಗೀತ ರಚನೆ ಮಾಡಿದ್ದಾರೆ. ಚೇತನ್ ಗೌಡ ಹಾಗೂ ರೂಪಾ ಚೇತನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
45
ಧನ್ವೀರ್, ‘ಇದು ನನ್ನ ನಾಲ್ಕನೇ ಸಿನಿಮಾ. ನನ್ನ ಮೊದಲ ಚಿತ್ರದಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ. ವಾಮನ ಚಿತ್ರಕ್ಕೂ ಪ್ರೋತ್ಸಾಹವಿರಲಿ’ ಎಂದರು.
55
ರೀಷ್ಮಾ ನಾಣಯ್ಯ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಗಾಯಕ ವೆಂಕಟೇಶ್ ಡಿ.ಸಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕಾಕ್ರೋಚ್ ಸುಧಿ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.