ಕೇವಲ 124 ತಿಂಗಳಲ್ಲಿ ಹಣ ಡಬಲ್‌ ಆಗುವ ಪೋಸ್ಟ್‌ ಆಫೀಸ್‌ ಸ್ಕೀಮ್‌!

First Published Jul 26, 2020, 6:22 PM IST

ಪ್ರತಿಯೊಬ್ಬ ಮನುಷ್ಯನೂ ತನ್ನ ಉಳಿತಾಯದ ಮೇಲೆ ಗರಿಷ್ಠ ಲಾಭವನ್ನು ಬಯಸುತ್ತಾನೆ. ಇದರೊಂದಿಗೆ, ಠೇವಣಿ ಇಟ್ಟ ಹಣದ ಸುರಕ್ಷತೆಯು ಮುಖ್ಯವಾಗುತ್ತದೆ. ಖಾಸಗಿ ಬ್ಯಾಂಕುಗಳನ್ನು ಹೊರತುಪಡಿಸಿ, ದೇಶದ ಸರ್ಕಾರಿ ಬ್ಯಾಂಕುಗಳು ಠೇವಣಿ ಮಾಡಿದ ಮೊತ್ತದಲ್ಲಿ ಕೇವಲ 1 ಲಕ್ಷ ರೂಪಾಯಿಗಳ ಗ್ಯಾರಂಟಿ ತೆಗೆದುಕೊಳ್ಳುತ್ತವೆ. ಅಂದರೆ, ನಿಮ್ಮ ಠೇವಣಿ ಹಣವು 1 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಮತ್ತು ಬ್ಯಾಂಕ್ ಮುಳುಗಿದರೆ, ರಿಸರ್ವ್ ಬ್ಯಾಂಕ್ ಕೇವಲ 1 ಲಕ್ಷ ರೂಪಾಯಿಗಳನ್ನು ಖಾತರಿಪಡಿಸುತ್ತದೆ. ಇದಕ್ಕಿಂತ ಹೆಚ್ಚಿನ ಹಣವನ್ನು ನೀವು ಪಡೆಯಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಖಾಸಗಿ ಹಣಕಾಸು ಕಂಪನಿಗಳಲ್ಲಿ ಹಣ ಠೇವಣಿಗೆ ಯಾವುದೇ ಗ್ಯಾರಂಟಿ ಇಲ್ಲ. ಕಂಪನಿ ಕುಸಿದರೆ, ಠೇವಣಿ ಇಟ್ಟ ಹಣವೆಲ್ಲವೂ ಮುಳುಗುತ್ತದೆ. ಆದರೆ ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಅಂತಹ ಯಾವುದೇ  ಅಂಚೆ ರಿಸ್ಕ್‌ಗಳಿಲ್ಲ. 

ಪೋಸ್ಟ್‌ ಆಪೀಸ್‌ನಲ್ಲಿ ಠೇವಣಿ ಮೊತ್ತದ, ಸುರಕ್ಷತೆಯನ್ನು ಭಾರತ ಸರ್ಕಾರ ಖಾತರಿಪಡಿಸುತ್ತದೆ. ಆದ್ದರಿಂದ, ಭದ್ರತೆಯ ದೃಷ್ಟಿಯಿಂದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಉತ್ತಮವಾಗಿದೆ. ಅಂತಹ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಬಗ್ಗೆ ಇಲ್ಲಿದೆ. ಇದರಲ್ಲಿ ನಿಮ್ಮ ಹಣವು ತ್ವರಿತವಾಗಿ ದ್ವಿಗುಣಗೊಳ್ಳುತ್ತದೆ.
undefined
ಪೋಸ್ಟ್ ಆಫೀಸ್ ಯೋಜನೆಗಳುರಿಕರಿಂಗ್‌ ಡೆಪಾಸಿಟ್‌ನಿಂದ ಟೈಮ್‌ ಡೆಪಾಸಿಟ್‌ ವರೆಗೆ ಮತ್ತು ಸುಕನ್ಯಾ ಸಮೃದ್ಧಿಯಂತಹ ವಿಶೇಷ ಯೋಜನೆಗಳು ಅಂಚೆ ಕಚೇರಿಯ ಅನೇಕ ಉಳಿತಾಯ ಯೋಜನೆಗಳಾಗಿವೆ. ಅಂಚೆ ಕಚೇರಿಯ ಟೈಮ್‌ ಡೆಪಾಸಿಟ್‌ ಯೋಜನೆಗಳು ವಿಭಿನ್ನ ವರ್ಷಗಳ ಠೇವಣಿ ಅವಧಿಗೆ ವಿಭಿನ್ನ ಬಡ್ಡಿದರಗಳನ್ನು ಹೊಂದಿವೆ. ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆ ತೆರೆಯುವ ಮೂಲಕವೂ ಹೂಡಿಕೆ ಮಾಡಬಹುದು. ಇದಲ್ಲದೆ, ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ (ಎನ್‌ಎಸ್‌ಸಿ) ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಗಳಿಸಬಹುದು.
undefined
ಈ ಸಮಯದಲ್ಲಿ ಸರ್ಕಾರ ಸ್ಥಿರ ಠೇವಣಿ ಯೋಜನೆಗಳಲ್ಲಿನ ಬಡ್ಡಿಯನ್ನು ಕಡಿತಗೊಳಿಸಿದೆ. ಇದು ಹೂಡಿಕೆಯ ಲಾಭವನ್ನು ಕಡಿಮೆ ಮಾಡಿದೆ. ಸರ್ಕಾರವು ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಿರುವುದಲ್ಲದೆ, ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯಲ್ಲಿ ಕಂಡುಬರುವ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಅದೇನೇ ಇದ್ದರೂ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ, ಬಡ್ಡಿದರ ಬ್ಯಾಂಕುಗಳಿಗಿಂತ ಹೆಚ್ಚಾಗಿದೆ.
undefined
ಕಿಸಾನ್ ವಿಕಾಸ್ ಪತ್ರ ಅಂಚೆ ಕಚೇರಿಯ ಎಲ್ಲಾ ಉಳಿತಾಯ ಯೋಜನೆಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿವೆ, ಆದರೆ ಅಲ್ಪಾವಧಿಯಲ್ಲಿಯೇ ಹೆಚ್ಚಿನ ಲಾಭವನ್ನು ಪಡೆಯಲು, ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದರಲ್ಲಿ, ನಿಮ್ಮ ಸಂಗ್ರಹವಾದ ಹಣವು ಇತರ ಉಳಿತಾಯ ಯೋಜನೆಗಳಿಗಿಂತ ಕಡಿಮೆ ಸಮಯದಲ್ಲಿ ದ್ವಿಗುಣಗೊಳ್ಳುತ್ತದೆ.
undefined
10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ ಮೊತ್ತ ಕೇವಲ 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಏಪ್ರಿಲ್ 1, 2020 ರಿಂದ, ಕಿಸಾನ್ ವಿಕಾಸ್ ಪತ್ರದ ಮೇಲಿನ ಇಂಟರೆಸ್ಟ್‌ ಶೇಕಡಾ 6.9 ಲಭ್ಯವಿದೆ. ಈ ಮೊದಲು ಇದರ ಬಡ್ಡಿದರ ಶೇ 7.6 ರಷ್ಟಿತ್ತು. ಅದೇನೇ ಇದ್ದರೂ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ 4 ತಿಂಗಳ ನಂತರ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ. ಕಿಸಾನ್ ವಿಕಾಸ್ ಪತ್ರದಲ್ಲಿ 5 ಲಕ್ಷ ರೂ.ಗಳ ಹೂಡಿಕೆ ಮಾಡಿದರೆ, 124 ತಿಂಗಳ ನಂತರ ನಿಮಗೆ 10 ಲಕ್ಷ ರೂ.
undefined
ಹೂಡಿಕೆ ಮಾಡವುದು ಹೇಗೆ?ಕಿಸಾನ್ ವಿಕಾಸ್ ಪತ್ರದಲ್ಲಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಒಬ್ಬನು ತನಗೆ ಬೇಕಾದಷ್ಟು ಹಣವನ್ನು ಹೂಡಿಕೆ ಮಾಡಬಹುದು.
undefined
ಯಾರು ಖಾತೆ ತೆರೆಯಬಹುದು?ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಯಾವುದೇ ಖಾತೆಯನ್ನು ತೆರೆಯಬಹುದು. ಇದರಲ್ಲಿ, ಸಿಂಗಲ್‌ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು. ಮೂರು ವಯಸ್ಕರು ಒಟ್ಟಿಗೆ ಜಂಟಿ ಖಾತೆಯನ್ನು ತೆರೆಯಬಹುದು. 10 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಪ್ರಾಪ್ತ ವಯಸ್ಕನು ಸಹ ಕಿಸಾನ್ ವಿಕಾಸ್ ಪತ್ರವನ್ನು ಖರೀದಿಸಬಹುದು.
undefined
ಕಿಸಾನ್ ವಿಕಾಸ್ ಪತ್ರದಲ್ಲೂ ನಾಮೀನೆಷನ್‌ ಸೌಲಭ್ಯ ಲಭ್ಯವಿದೆ. ಕಿಸಾನ್ ವಿಕಾಸ್ ಪತ್ರವನ್ನು ಸಹ ಒಂದು ಹೆಸರಿನಿಂದ ಮತ್ತೊಂದು ಹೆಸರಿಗೆ ವರ್ಗಾಯಿಸಬಹುದು. ಅಗತ್ಯವಿದ್ದರೆ, ಕಿಸಾನ್ ವಿಕಾಸ್ ಪತ್ರವನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು.
undefined
ನೀವು ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ್ದರೆ, ನಿಮಗೆ ಹಣದ ಅಗತ್ಯವಿದ್ದರೆ ಕಿಸಾನ್ ವಿಕಾಸ್ ಪತ್ರವನ್ನು ವಿತರಿಸಿದ ದಿನಾಂಕದಿಂದ ಎರಡೂವರೆ ವರ್ಷಗಳ ನಂತರವೂ ನೀವು ಹಣವನ್ನು ಹಿಂಪಡೆಯಬಹುದು. ಇದರಲ್ಲಿ, ಶೇಕಡಾ 6.9 ದರದಲ್ಲಿ ಬಡ್ಡಿಯನ್ನು ಸೇರಿಸುವ ಮೂಲಕ ನಿಮಗೆ ಹಣವನ್ನು ನೀಡಲಾಗುವುದು.
undefined
click me!