ಭಾರತೀಯ ಊಟದ ಬಗ್ಗೆ ಮಾತನಾಡುತ್ತಾ ನಾನು ಧೋಕ್ಲಾ, ಆಮ್ರಾಸ್ ಪೂರಿ, ತುಪ್ಪದ ರೊಟ್ಟಿ, ಮಾವಿನ ಲಸ್ಸಿ ಇತ್ಯಾದಿ ಹಲವಾರು ಗುಜರಾತಿ ತಿನಿಸುಗಳನ್ನು ತಿಂದಿರುವೆ ಆದರೆ ಬಿರಿಯಾನಿ ನನ್ನ ಮನಸ್ಸಿಗೆ ತುಂಬಾ ಹಿಡಿಸಿತು. ನಾನು ಎಲ್ಲಿಗೆ ಹೋದರೂ ಇದನ್ನು ಸೇವಿಸುತ್ತೇನೆ. ನಾನು ಭಾರತದಾದ್ಯಂತ ಹಾಡುಗಳನ್ನು ರೆಕಾರ್ಡ್ ಮಾಡಲು, ಸಂಗೀತ ಪ್ರವಾಸ ಕೈಗೊಳ್ಳಲು ಇಚ್ಛಿಸುತ್ತೇನೆ. ಇಲ್ಲಿ ವಿವಿಧತೆ ತುಂಬಾ ಇದೆ. ಸಂಸ್ಕೃತಿ, ಭಾಷೆ, ಜನರ ಭಾವನೆಗಳು. ನಾನು ಈ ನಾಡಿನಲ್ಲಿ ಜನರನ್ನು ಮನರಂಜಿಸಲು ನಿರಂತರ ಪ್ರಯತ್ನಿಸುತ್ತೇನೆ ಎಂದಿದ್ದರು. ಇದರ ಭಾಗವಾಗಿ ಈಗ ಕೇರಳಕ್ಕೆ ಬಂದಿದ್ದಾರೆ.