16 ಕೆಜಿ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರು ಜಪ್ತಿ! ಅರಣ್ಯ ಇಲಾಖೆ ಭರ್ಜರಿ ಬೇಟೆ

Published : Sep 09, 2026, 09:39 AM IST

ಉತ್ತರ ಕನ್ನಡದ ಯಲ್ಲಾಪುರದಲ್ಲಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ, ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲವನ್ನು ಭೇದಿಸಿದ್ದಾರೆ. ಈ ವೇಳೆ ಕೋಟ್ಯಂತರ ಮೌಲ್ಯದ ಚಿಪ್ಪುಹಂದಿ ಚಿಪ್ಪುಗಳು, ಹುಲಿ-ಚಿರತೆ ಉಗುರುಗಳು ಹಾಗೂ ಹಲ್ಲುಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ.

PREV
13

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಭಾರಿ ಪ್ರಮಾಣದ ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಭೇದಿಸಿದ್ದಾರೆ. ಯಲ್ಲಾಪುರದ ಉಪ್ಪಳೇಶ್ವರ ಸಮೀಪ ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಮೌಲ್ಯದ ವನ್ಯಜೀವಿ ಅಂಗಾಂಗಗಳನ್ನು ಜಪ್ತಿ ಮಾಡಿದ್ದು, ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

23

ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳ ವಿವರ:

ಖದೀಮರಿಂದ ಅಪಾರ ಪ್ರಮಾಣದ ನಿಷೇಧಿತ ವನ್ಯಜೀವಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ:

16 ಕೆ.ಜಿ. ತೂಕದ ಪ್ಯಾಂಗೋಲಿನ್ (ಚಿಪ್ಪುಹಂದಿ) ಚಿಪ್ಪುಗಳು

8 ಹುಲಿಯ ಉಗುರುಗಳು

12 ಚಿರತೆಯ ಉಗುರುಗಳು

ಹುಲಿ ಮತ್ತು ಚಿರತೆಯ ಹಲ್ಲುಗಳು

ಕಾಡುಕೋಣದ ಕೊಂಬುಗಳು

ಕಳ್ಳಸಾಗಣೆಗೆ ಬಳಸಲಾಗಿದ್ದ ಒಂದು ದ್ವಿಚಕ್ರ ವಾಹನ (ಬೈಕ್)

33

ಉಳಿದ ಆರೋಪಿಗಳಿಗಾಗಿ ಶೋಧ ತೀವ್ರ:

ಬಂಧಿತ ಆರೋಪಿಗಳು ಈ ವನ್ಯಜೀವಿ ಉತ್ಪನ್ನಗಳನ್ನು ಎಲ್ಲಿಂದ ತಂದಿದ್ದರು? ಯಾರಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದರು? ಹಾಗೂ ಈ ಕಳ್ಳಬೇಟೆ ಮತ್ತು ಸಾಗಾಟ ಜಾಲದ ಹಿಂದೆ ಅಂತರರಾಜ್ಯ ಅಥವಾ ಅಂತರರಾಷ್ಟ್ರೀಯ ಜಾಲಗಳು ಕೈಜೋಡಿಸಿವೆಯೇ ಎಂಬ ಆಯಾಮದಲ್ಲಿ ಅರಣ್ಯ ಇಲಾಖೆ ತನಿಖೆಯನ್ನು ಚುರುಕುಗೊಳಿಸಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

Read more Photos on
click me!

Recommended Stories