ಮದುವೆ ಮಂಟಪದ ವೇದಿಕೆಯಲ್ಲಿ ನಿಂತಿದ್ದ ಕಾರ್ತಿಕ್ಗೆ ಮಂಟಪದಲ್ಲೇ ಸಾರ್ವಜನಿಕವಾಗಿ ಚಪ್ಪಲಿ ಏಟು ಕೊಟ್ಟಿದ್ದಾರೆ. ಆ ವೇಳೆ ಅಲ್ಲಿ ಇದ್ದ ಎಲ್ಲಾ ಅತಿಥಿಗಳು ಹಾಗೂ 2ನೇ ವಧುವಿನ ಕಡೆಯವರು ಕಂಗಾಲಾಗಿದ್ದಾರೆ.
ತನುಜಾ ಅವರು ಈ ಕೃತ್ಯವನ್ನು ಮಹಿಳೆಯ ಹಕ್ಕಿಗಾಗಿ ನಡೆಸಿದ ಧೈರ್ಯಶಾಲಿ ಕ್ರಮವೆಂದು ಹಲವು ಜನರು ಶ್ಲಾಘಿಸಿದ್ದಾರೆ. ತನ್ನ ವೈವಾಹಿಕ ಹಕ್ಕುಗಳನ್ನು ಉಳಿಸಿಕೊಳ್ಳಲು, ಹಾಗೂ ಸಾಮಾಜಿಕ ಅನ್ಯಾಯವನ್ನು ತಡೆಗಟ್ಟಲು ತನುಜಾ ತೋರಿದ ತೀವ್ರ ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.