“ಆರ್ಸಿಬಿ ಪರೈಡ್ ಇತ್ತು ಅಂತ ನಮಗೆ ಗೊತ್ತಾಗಿತ್ತು. ನಾನು, ನನ್ನ ಹೆಂಡ್ತಿ ಇಬ್ಬರೂ ಹೋಗೋಣ ಅಂತ ಜೆರ್ಸಿ ಖರೀದಿ ಮಾಡಿ, ಆಫೀಸ್ಗೆ ರಜೆ ಹಾಕಿ ಇಬ್ಬರೂ ಪ್ಲ್ಯಾನ್ ಮಾಡಿ ಹೊರಟಿದ್ದೆವು. ಪರೈಡ್ ಇರಲಿಲ್ಲ, ಫ್ರೀ ಎಂಟ್ರೆನ್ಸ್ ಇದೆ ಅಂದರು. ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಟ್ 17 ಒಪನ್ ಇತ್ತು. ಸ್ಟೇಡಿಯಂ ತುಂಬ ಜನರು ಬಂದರು, ನೂಕು ನುಗ್ಗುಲು ಇತ್ತು. ನಾನು ಬ್ಯಾರೀಕೇಡ್ ಸೈಡ್ನಲ್ಲಿದ್ದೆ, ನನ್ನ ಪಕ್ಕದಲ್ಲಿ ಹೆಂಡ್ತಿ ಇದ್ದಳು, ನನ್ನ ಹೆಂಡ್ತಿ ನನ್ನ ಕೈ ಹಿಡಿದುಕೊಂಡು ಇದ್ದಳು. ನಮ್ಮನ್ನು ನೂಕಿದಾಗ ಹೆಂಡ್ತಿ, ಕೈತಪ್ಪಿ ಹೋದಳು. ನನ್ನ ಮುಂದೆಯೇ ಓರ್ವನ ಜೀವನ ಹೋಗಿತ್ತು. ಅಲ್ಲಿದ್ದವರ ಬಳಿ ನನ್ನ ಹೆಂಡ್ತಿ ಬಗ್ಗೆ ಕೇಳಿದಳು” ಎಂದು ಅಕ್ಷತಾ ಪತಿ ಆಶಯ್ ಹೇಳಿದ್ದಾರೆ.