ಕೊಟ್ಟೂರು ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮೈಸೂರು-ಅಜ್ಮೀರ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸುವ ಘೋಷಣೆ ಪ್ರಕಟವಾಗಿದೆ. ಮೈಸೂರಿನಿಂದ ಹೊರಡುವ ರೈಲು ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ತಲುಪಿ ಅಜ್ಮೀರ್ನತ್ತ ಸಂಚರಿಸಲಿದೆ.
ಕೊಟ್ಟೂರು (ಸೆ.04): ಕೊಟ್ಟೂರು ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮೈಸೂರ ಅಜ್ಮೀರ್ ನಡುವಿನ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸುವ ಘೋಷಣೆ ಪ್ರಕಟಿಸಿದ್ದರಿಂದ ಜನರಲ್ಲಿ ಸಂತಸ ಮೂಡಿದೆ.
24
ಕೊಟ್ಟೂರು ರೈಲ್ವೆ ನಿಲ್ದಾಣ
ಮೈಸೂರಿನಿಂದ ಸೆ.5ರ ಶನಿವಾರ ಬೆಳಗ್ಗೆ 8 ಗಂಟೆಗೆ ಬಿಟ್ಟು ಕೊಟ್ಟೂರು ರೈಲ್ವೆ ನಿಲ್ದಾಣವನ್ನು 3.15ಕ್ಕೆ ತಲುಪಿ 3.17ಕ್ಕೆ ಅಜ್ಮೀರ್ನತ್ತ ತುಂಗಭದ್ರ ಡ್ಯಾಂ, ಕೊಪ್ಪಳ, ಹುಬ್ಬಳ್ಳಿ ಮತ್ತಿತರ ಸೀಮಿತ ಮಾರ್ಗಗಳ ಮೂಲಕ ತೆರಳಲಿದೆ.
34
ಈ ನಿಲ್ದಾಣಗಳ ಮೂಲಕ ಮೈಸೂರು
ಈ ರೈಲು ವಾರದಲ್ಲಿ ಒಮ್ಮೆ ಮಾತ್ರ ಸಂಚರಿಸಲಿದೆ. ಅಜ್ಮೀರನ್ನು ಬೆಳಗ್ಗೆ 7 ಗಂಟೆಗೆ ಬಿಟ್ಟು ಕೊಟ್ಟೂರನ್ನು ಮಧ್ಯಾಹ್ನ 12.30ಕ್ಕೆ ತಲುಪಿ, ದಾವಣಗೆರೆ, ಚಿಕ್ಕಜಾಜೂರು, ಅರಸಿಕೆರೆ, ಕಡೂರು, ಹಾಸನ, ಹೊಳೆನರಸಿಪುರ ಮತ್ತಿತರ ನಿಲ್ದಾಣಗಳ ಮೂಲಕ ಮೈಸೂರು ತಲುಪಲಿದೆ.
ಈ ಹಿಂದೆ ವಾರದಲ್ಲಿ ಒಂದು ದಿನ ಸಂಚರಿಸುವ ಮೈಸೂರು ಅಜ್ಮೀರ ಕೊಟ್ಟೂರು ಮೂಲಕ ಸಂಚರಿಸುವ ಘೋಷಣೆ ಮಾಡಿತ್ತು. ಆದರೆ ಕೊಟ್ಟೂರು ಮತ್ತಿತರ ಮಾರ್ಗದಲ್ಲಿ ವಿದ್ಯುತ್ ಲೈನ್ ಕಾಮಗಾರಿ ಸಾಗಿದ್ದರಿಂದ ಘೋಷಿತ ರೈಲು ಇದುವರೆಗೆ ಚಾಲನೆ ಪಡೆದಿರಲಿಲ್ಲ.