ರಾಜ್ಯಪಾಲರಿಗೆ ಜೋಗದ ಜಲಪಾತದ ನಿಜವೈಭವವನ್ನು ಸ್ವಲ್ಪಮಟ್ಟಿಗಾದರೂ ತೋರಿಸಬೇಕೆಂದು ಯೋಜಿಸಿದ ಅಧಿಕಾರಿಗಳು ಲಿಂಗನಮಕ್ಕಿ ಜಲಾಶಯದಿಂದ(Linganamakki Dam) ಗೇಟು ತೆಗೆದು 200 ಕ್ಯುಸೆಕ್ ನೀರು(Water) ಬಿಟ್ಟರು. ಈ ನೀರು ಶರಾವತಿ ನದಿ(Sharavati River) ಮೂಲಕ ಜೋಗ ಜಲಪಾತಕ್ಕೆ ಬಂದು ಧುಮ್ಮಿಕ್ಕಬೇಕು. ರಾಜ್ಯಪಾಲರು ಈ ಜಲಧಾರೆ ವೈಭವ ನೋಡಿ ಆನಂದಿಸಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದ ಅಧಿಕಾರಿಗೂ, ಅದನ್ನು ಕಾರ್ಯಗತಗೊಳಿಸಿದ ಅಧಿಕಾರಿಗಳ ಲೆಕ್ಕಾಚಾರಕ್ಕೂ ತಾಳಮೇಳವೇ ಇರಲಿಲ್ಲ.