ರಾಜಕೀಯ ಪ್ರಭಾವ ಬಳಕೆಯ ಅನುಮಾನ
ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಪ್ರಶ್ನೆಯೂ ಉದ್ಭವಿಸಿದೆ. ಅರಣ್ಯದ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ಪಡೆಯಲು ಕೆಲವರು ರಾಜಕೀಯ ಅಥವಾ ಇತರೆ ಪ್ರಭಾವ ಬಳಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ನಿಜಾಂಶ ಹೊರಬರಲು ತನಿಖೆಯ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕಾಡಾನೆಗಳು ಸಾಮಾನ್ಯವಾಗಿ ತಮ್ಮ ವ್ಯಾಪ್ತಿಯಲ್ಲಿ ಅಪಾಯ ಕಂಡುಬಂದರೆ ಅಥವಾ ಪ್ರಚೋದನೆಗೆ ಒಳಗಾದರೆ ದಾಳಿ ನಡೆಸುವ ಸಾಧ್ಯತೆ ಇರುತ್ತದೆ.
ಈ ಘಟನೆಯಲ್ಲಿ ಕಾಡಾನೆಯೊಂದು ಜೀಪಿನತ್ತ ಅಟ್ಟಿಸಿಕೊಂಡು ಬಂದಿರುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇಂತಹ ಘಟನೆಗಳು ಕೇವಲ ಮಾನವರ ಜೀವಕ್ಕೆ ಮಾತ್ರವಲ್ಲ, ವನ್ಯಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ. ನಿರಂತರ ಕಾಟ, ಶಬ್ದ ಮತ್ತು ಕಿರುಕುಳದಿಂದ ಪ್ರಾಣಿಗಳ ಸಹಜ ವರ್ತನೆ ಬದಲಾಗುವ ಸಾಧ್ಯತೆ ಇದ್ದು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುವ ಅಪಾಯವೂ ಇದೆ.
ಈ ಘಟನೆಯ ಬಳಿಕ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಭದ್ರತಾ ವ್ಯವಸ್ಥೆ, ಗಸ್ತು ಕಾರ್ಯಾಚರಣೆ, ಪ್ರವೇಶ ನಿಯಂತ್ರಣ ಹಾಗೂ ನಿಗಾವ್ಯವಸ್ಥೆ ಕುರಿತು ಮತ್ತೆ ಪ್ರಶ್ನೆಗಳು ಕೇಳಿಬರುತ್ತಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್