ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ

Published : Jun 16, 2026, 08:47 PM IST

ಮುಂಗಾರು ವಿಳಂಬವಾಗಿ ಕೇರಳಕ್ಕೆ ಅಪ್ಪಳಿಸಿದರೂ ದೇಶದ ಹಲವು ಭಾಗಕ್ಕೆ ಇನ್ನೂ ತಲುಪಿಲ್ಲ. ಇದೀಗ ಸ್ಯಾಟಲೈಟ್ ಚಿತ್ರ ಹಾಗೂ ವರದಿ ಗಂಡಾಂತರದ ಸೂಚನೆ ನೀಡಿದೆ. ಭಾರಿ ಮಳೆಗಾಲದಲ್ಲೂ ಭಾರತದಲ್ಲೆಡೆ ಬಿಸಿಲು ತೀವ್ರಗೊಂಡಿದೆ.

PREV
16
ಭಾರತದೆಲ್ಲೆಡೆ ಬಿಸಿಲು ತೀವ್ರ

ಭಾರತದಲ್ಲಿ ಮುಂಗಾರು ವಿಳಂಬವಾಗಿ ಮಳೆ ಆರಂಭಗೊಂಡಿತ್ತು. ಈ ಬಾರಿ ಮಳೆ ಕೊರತೆ ಎಲ್ ನಿನೋ ಭೀತಿ ನೀಡುವೆ ಮುಂಗಾರು ಚಟುವಟಿಕೆಗಳು ಚುರುಕುಗೊಂಡಿತ್ತು. ಜೂನ್ 15ರ ವೇಳೆಗೆ ಮಳೆ ಮಾಯವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಲು ಹೆಚ್ಚಾಗಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಮಳೆಯೇ ಇಲ್ಲದಾಗಿದೆ. ಇದು ಹಲವು ಮುನ್ಸೂಚನೆ ನೀಡುತ್ತಿದೆ.

26
ಜೂನ್ ಮಧ್ಯಭಾಗದ ಭಾರಿ ಮಳೆ ಇಲ್ಲ

ಸಾಮಾನ್ಯವಾಗಿ ಮುಂಗಾರು ವಿಳಂಭವಾದರೂ ಜೂನ್ ಮಧ್ಯಭಾಗದ ವೇಳೆ ಮುಂಗಾರು ಅಪ್ಪಳಿಸಿ ಉತ್ತಮ ಮಳೆಯಾಗುತ್ತದೆ. ದೇಶದೆಲ್ಲೆಡೆ ಮಳೆ ತೀವ್ರಗೊಳ್ಳುತ್ತದೆ. ನದಿಗಳು,ಜಲಾಶಗಳು ಭರ್ತಿಯಾಗುತ್ತದೆ. ಆದರೆ ಈ ಬಾರಿ ಹಲವು ರಾಜ್ಯಗಳು ಇನ್ನು ಮಳೆಗಾಗಿ ಕಾಯುತ್ತಿದೆ. ಭಾರಿ ಮಳೆ ಬರಬೇಕಾದ ಕಾಲದಲ್ಲೇ ಬಿಸಿಲು ತೀವ್ರಗೊಳ್ಳುತ್ತಿದೆ.

36
ಸ್ಯಾಟಲೈಟ್ ಚಿತ್ರದಿಂದ ಆತಂಕ ಹೆಚ್ಚಳ

ಯೂರೋಪ್ ಹಾಗೂ ಅಮೆರಿಕದ ಹವಾಮಾನ ಇಲಾಖೆ ಸ್ಯಾಟಲೈಟ್ ಚಿತ್ರವನ್ನು ಪ್ರಕಟಿಸಿದೆ. ಆತಂಕ ಎಂದರೆ ಸದ್ಯ ಭಾರತದ ಮೇಲೆ ಮಳೆ ಮೋಡವೇ ಇಲ್ಲ. ಸಂಪೂರ್ಣ ಭಾರತದಲ್ಲಿ ಬಿಸಿಲು ಸ್ಪಷ್ಟವಾಗಿದೆ. ಭಾರತದಲ್ಲಿ ಇಡಿ ವಾತಾವರಣವೇ ಬದಲಾಗಿದೆ. ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆ ಆರಂಭದಲ್ಲೇ ಭಾರತವನ್ನು ಸಂಕಷ್ಟಕ್ಕೆ ದೂಡಿದೆ.

46
ಸ್ಯಾಟಲೈನ್‌ನಲ್ಲಿ ಮುಂಗಾರು ಕ್ಷೀಣ ಸ್ಪಷ್ಟ

ಸ್ಯಾಟಲೈಟ್ ಚಿತ್ರದಲ್ಲಿ ಮುಂಗಾರು ಕ್ಷೀಣಗೊಂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಇಡೀ ದೇಶ ಡ್ರೈ ಆಗಿ ಕಾಣಿಸುತ್ತಿದೆ. ಮಳೆ ಮೋಡ ಇಲ್ಲ, ಎಲ್ಲೂ ಮಳೆ ಇಲ್ಲ. ಭಾರತದ ಪರಿಸ್ಥಿತಿ ಬಹುತೇಕ ಬದಲಾಗಿದೆ. ಮಳೆಗಾಲದಲ್ಲಿ ಇರಬೇಕಾದ ತೇವಾಶಂವೂ ವಾತಾವರಣದಲ್ಲಿ ಕಾಣುತ್ತಿಲ್ಲ. ಇದು ಭಾರಿ ಗಂಡಾಂತರಕ್ಕೆ ಕಾರಣವಾಗು ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.

56
ಮಳೆ ಇಲ್ಲ ಆತಂಕ ಹೆಚ್ಚಳ

ಕೇರಳಕ್ಕೆ ಮುಂಗಾರು ಅಪ್ಪಳಿಸಿದ ಬಳಿಕ ದಕ್ಷಿಣ ಭಾರತದಲ್ಲಿ ಉತ್ತಮ ಮಳೆ ಆರಂಭಗೊಳ್ಳಲಿದೆ. ಬಳಿಕ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗಲಿದೆ. ಭಾರಿ ಮಳೆಯಾಗಬೇಕಿದ್ದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಇಲ್ಲದಾಗಿದೆ. ಆತಂಕ ಹೆಚ್ಚಾಗಿದೆ.

66
ಎಲ್ ನಿನೋ ಭೀತಿ

ಹವಾಮಾನ ಇಲಾಖೆ ಆರಂಭದಲ್ಲೇ ಎಲ್ ನಿನೋ ಎಚ್ಚರಿಕೆ ನೀಡಿತ್ತು. ಇದರಿಂದ ದೇಶದ ಹಲವು ಭಾಗದಲ್ಲಿ ಬರಗಾಲ ಸೃಷ್ಟಿಯಾಗಲಿದೆ ಎಂದಿತ್ತು. ಇನ್ನು ಕೆಲೆವೆಡೆ ವಿಪರೀತ ಮಳೆಯಿಂದ ಪ್ರವಾಹ ಪರಿಸ್ಥಿತಿಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸಲಿದೆ ಎಂದಿತ್ತು. ಇದೀಗ ಭಾರತದ ಹಲವು ಭಾಗದಲ್ಲಿ ನೀರಿನ ಬರ ಎದುರಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories