ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ನಗರದ ಹಲೆವೆಡೆ ಕಾಗೆಗಳು ಸತ್ತು ಬಿದ್ದಿದೆ. ಇದು ಆಪತ್ತಿನ ಸೂಚನೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರೆ, ಪರೀಕ್ಷೆಯಲ್ಲಿ ಆಘಾತಕಾರಿ ಆಂಶ ಬಯಲಾಗಿದೆ.
ಕಳೆದ 11ರಂದು ಬಿಹಾರ ರಾಜ್ಯದ ಭಾಗಲ್ಪುರ್ ಜಿಲ್ಲೆಯ ನೌಗಾಚಿಯಾದಲ್ಲಿ ನೂರಕ್ಕೂ ಹೆಚ್ಚು ಕಾಗೆಗಳು ಒಟ್ಟೊಟ್ಟಿಗೆ ಸಾವನ್ನಪ್ಪಿದ ಘಟನೆ ತೀವ್ರ ಆಘಾತವನ್ನುಂಟು ಮಾಡಿತ್ತು. ಬಳಿಕ, ಸತ್ತ ಕಾಗೆಗಳ ದೇಹಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಈ ಆಘಾತ ಮಾಸುವ ಮುನ್ನವೇ ತಮಿಳುನಾಡಿನಲ್ಲೂ ಕಾಗೆಗಳು ಸಾವನ್ನಪ್ಪಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
24
ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ
ಚೆನ್ನೈನ ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಚೇರಿ, ತಿರುವನ್ಮಿಯೂರ್, ಈಸ್ಟ್ ಕೋಸ್ಟ್ ರೋಡ್ (ECR) ಮತ್ತು ಓಎಂಆರ್ ರಸ್ತೆಯಂತಹ ಸ್ಥಳಗಳಲ್ಲಿ ಕಾಗೆಗಳು ಒಂದರ ಹಿಂದೆ ಒಂದರಂತೆ ಸತ್ತು ಬಿದ್ದಿದೆ. ಕಳೆದ ತಿಂಗಳು, ಕಾಂಚೀಪುರಂನ ಪಶು ರೋಗ ತಡೆಗಟ್ಟುವಿಕೆ ಮತ್ತು ತನಿಖಾ ತಂಡದ ಅಧಿಕಾರಿಗಳ ಸತ್ತ ಕಾಗೆಗಳ ಮಾದರಿಗಳನ್ನು ಸಂಗ್ರಹಿಸಿದ್ದರು. ನಂತರ, ಈ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್ನಲ್ಲಿರುವ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಸಂಸ್ಥೆಗೆ ಕಳುಹಿಸಲಾಯಿತು. ಈಗ ಬಂದಿರುವ ಪರೀಕ್ಷಾ ವರದಿಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿವೆ.
34
ಹಕ್ಕಿ ಜ್ವರದ ಸೋಂಕು ದೃಢ
ತಮಿಳುನಾಡು ಸರ್ಕಾರವು ಜನವರಿ 21 ರಂದು ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿ ಸತ್ತ ಕಾಗೆಗಳ ಮಾದರಿಗಳನ್ನು ಕೇಂದ್ರಕ್ಕೆ ಕಳುಹಿಸಿ, ಪರೀಕ್ಷೆಗೆ ಸೂಚಿಸಿತ್ತು. ಈ ಸತ್ತು ಬಿದ್ದಿದ್ದ ಕಾಗೆಗಳಲ್ಲಿ H5N1 ಏವಿಯನ್ ಇನ್ಫ್ಲುಯೆಂಜಾ ಎಂಬ ಹಕ್ಕಿ ಜ್ವರದ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕು ಕೋಳಿಗಳು, ಇತರ ಪಕ್ಷಿಗಳು ಮತ್ತು ಮನುಷ್ಯರಿಗೂ ಹರಡುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಪಂಚಾಯಿತಿಗಳು ಮತ್ತು ನಗರ ಪ್ರದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸುವುದು ಅತ್ಯಗತ್ಯ. ಹಕ್ಕಿ ಜ್ವರ ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ, ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸುವಂತೆ ಕೇಂದ್ರ ಪಶುಸಂಗೋಪನಾ ಸಂಶೋಧನಾ ಸಂಸ್ಥೆಯು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
ನಿಮ್ಮ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಪಕ್ಷಿಗಳು ಸತ್ತರೆ, ಜನರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು. * ಇದ್ದಕ್ಕಿದ್ದಂತೆ ಸತ್ತು ಬಿದ್ದಿರುವ ಪಕ್ಷಿಗಳು ಅಥವಾ ಪ್ರಾಣಿಗಳನ್ನು ಬರಿಗೈಯಲ್ಲಿ ಮುಟ್ಟಬೇಡಿ.
ಪಕ್ಷಿಗಳು ಸತ್ತರೆ, ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಆಳವಾದ ಗುಂಡಿ ತೋಡಿ ಹೂಳಬೇಕು. * ಕೋಳಿ ಫಾರಂಗಳಿಗೆ ಹೊರಗಿನವರನ್ನು ಪ್ರವೇಶಿಸಲು ಬಿಡಬಾರದು.
ಒಬ್ಬ ವ್ಯಕ್ತಿ ಒಂದು ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಬೇರೆ ಬೇರೆ ಫಾರಂಗಳಿಗೆ ಹೋಗುವುದನ್ನು ತಪ್ಪಿಸಬೇಕು.
ಬೇರೆ ರಾಜ್ಯಗಳಿಂದ ಕೋಳಿ ಅಥವಾ ಕೋಳಿ ಮಾಂಸವನ್ನು ತರಬಾರದು.
ತಮಿಳುನಾಡು ಗಡಿ ಪ್ರದೇಶಗಳಲ್ಲಿ ಕಣ್ಗಾವಲು ತೀವ್ರಗೊಳಿಸುವಂತೆ ತಮಿಳುನಾಡು ಸರ್ಕಾರ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ