ಹೆಚ್ಚುತ್ತಿರುವ ಸೊಳ್ಳೆ ಸಮಸ್ಯೆಯನ್ನು ನಿಯಂತ್ರಿಸಲು, ಮಹಾನಗರ ಪಾಲಿಕೆಯು ಚರಂಡಿ ಮ್ಯಾನ್ಹೋಲ್ಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸುತ್ತಿದೆ. ಈ ಕ್ರಮವು ವಿಪಕ್ಷ ಎಐಎಡಿಎಂಕೆ ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗಿದೆ.
ಚೆನ್ನೈನ ಮಹಾನಗರ ಪಾಲಿಕೆಯು ಸೊಳ್ಳೆ ಸಮಸ್ಯೆಯನ್ನು ಹತ್ತಿಕ್ಕುವ ಸಲುವಾಗಿ ಮಳೆ ನೀರು ಚರಂಡಿಗೆ ಅಲ್ಲಲ್ಲಿ ಅಳವಡಿಸಿರುವ ಮ್ಯಾನ್ಹೋಲ್ ರೀತಿಯ ಬಾಕ್ಸ್ಗಳಿಗೆ ಸೊಳ್ಳೆ ಪರದೆ ಅಳವಡಿಸುವ ಕೆಲಸಕ್ಕೆ ಮುಂದಾಗಿದೆ.
25
ಮಹಾನಗರ ಪಾಲಿಕೆ ಟ್ರೋಲ್
ಚೆನ್ನೈನ ಮಹಾನಗರ ಪಾಲಿಕೆಯ ಈ ಕೆಲಸಕ್ಕೆ ವಿಪಕ್ಷ ಎಐಎಡಿಎಂಕೆ ಮತ್ತು ಜನರಿಂದ ಭಾರಿ ನಗೆಪಾಟಲಿ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ನಿವಾಸಿಗಳು ಮಹಾನಗರ ಪಾಲಿಕೆಯನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.
35
ಡಿಎಂಕೆಯ ಮೇಯರ್ ಪ್ರಿಯಾ ರಾಜನ್
ಈ ಕುರಿತು ಎಐಎಡಿಎಂಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕರು ಚರಂಡಿಗೆ ಪರದೆ ಅಳವಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡು ಡಿಎಂಕೆಯ ಮೇಯರ್ ಪ್ರಿಯಾ ರಾಜನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಚೆನ್ನೈನಲ್ಲಿ ಸೊಳ್ಳೆ ಹಾವಳಿ ಹೆಚ್ಚುತ್ತಿದ್ದು, ಡಂಘೀ ಪ್ರಕರಣಗಳು ಜಾಸ್ತಿಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದು, ಇದರ ಬೆನ್ನಲ್ಲೇ ಎಐಎಡಿಎಂಕೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸರ್ಕಾರವನ್ನು ಭಾರಿ ಮುಜುಗರಕ್ಕೆ ಈಡುಮಾಡಿದೆ.
ಚೆನ್ನೈಯನ್ನು ಸೊಳ್ಳೆ ಮುಕ್ತ ನಗರವನ್ನಾಗಿ ಮಾಡಲು ಯೋಚಿಸಲಾಗಿದೆ. ಫಾಗಿಂಗ್ ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಜಿಸಿಸಿ ಮುಖ್ಯ ವಾಹಕ ನಿಯಂತ್ರಣ ಅಧಿಕಾರಿ ಡಾ. ಎಸ್. ಸೆಲ್ವಕುಮಾರ್ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ