ಶೀತ, ಕೆಮ್ಮು ನಿವಾರಿಸುತ್ತೆ ವೀಳ್ಯದೆಲೆ... ಬಳಸೋದ್ಹೇಗೆ?

First Published Apr 30, 2021, 1:37 PM IST

ಪ್ರತಿಯೊಬ್ಬರೂ ವೀಳ್ಯದ ಎಲೆ ಅಥವಾ ಪಾನ್ ಬಗ್ಗೆ ತಿಳಿದಿರುತ್ತಾರೆ. ಹೆಚ್ಚಾಗಿ ಅದನ್ನು ಸೇವಿಸುತ್ತಾರೆ. ಇನ್ನು ಪೂಜಾ ಸಮಯದಲ್ಲಿ ಇದನ್ನು ದೇವರ ಪಾದದಲ್ಲಿ ಅರ್ಪಿಸುತ್ತಾರೆ. ಆದರೆ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಎಂದಾದರೂ ವೀಳ್ಯದೆಲೆಗಳನ್ನು ಬಳಸಿದ್ದೀರಾ? ವೀಳ್ಯದ ಎಲೆಯನ್ನು ಅಗಿಯುವುದನ್ನು ಮತ್ತು ದೇವರಿಗೆ ಅರ್ಪಿಸುವುದನ್ನು ಹೊರತುಪಡಿಸಿ, ಆರೋಗ್ಯವನ್ನು ಸುಧಾರಿಸಲು ಸಹ ಇದನ್ನು ಬಳಸಲಾಗುತ್ತದೆ. 
 

ವೀಳ್ಯದೆಲೆಗಳುಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇವುಗಳ ಬಳಕೆ ಮತ್ತು ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ?
undefined
ಶೀತಕ್ಕೆ ಮದ್ದುವೀಳ್ಯದೆಲೆಗಳ ಬಳಕೆ ಶೀತದಿಂದ ಪರಿಹಾರ ನೀಡುತ್ತದೆ. ಇದಕ್ಕಾಗಿ, ಕಾಂಡವನ್ನು ವೀಳ್ಯದೆಲೆಗಳಿಂದ ಬೇರ್ಪಡಿಸಿ. ನಂತರ ಈ ಕಾಂಡಗಳನ್ನು ಕಲ್ಲಿನ ಮೇಲೆ ಪುಡಿಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ. ಇದು ಶೀತ ಮತ್ತು ಶೀತದೊಂದಿಗೆ ಕಫದಿಂದ ಪರಿಹಾರ ನೀಡುತ್ತದೆ.
undefined
ಸ್ತನಊತವನ್ನು ನಿವಾರಿಸುತ್ತದೆಹೆರಿಗೆ ಬಳಿಕ ನವಜಾತ ಶಿಶುವಿಗೆ ಹಾಲನ್ನು ನೀಡಲು ಸಾಧ್ಯವಾಗದೇ ಅದರಿಂದ ಊತ ಕಾಣಿಸಿಕೊಳ್ಳುತ್ತದೆ. ಊತ ಸಮಸ್ಯೆ ನಿವಾರಿಸಲುವೀಳ್ಯದ ಎಲೆಗಳನ್ನು ಬಿಸಿ ಮಾಡಿ ಸ್ತನದ ಮೇಲೆ ಕಟ್ಟಬಹುದು. ಇದರಿಂದ ಊತ ಸಮಸ್ಯೆ ನಿವಾರಣೆ ಮಾಡಬಹುದು.
undefined
ಗಾಯಕ್ಕೆ ಮದ್ದುಗಾಯಗಳನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಸಹ ಬಳಸಬಹುದು. ಗಾಯದ ಸಂದರ್ಭದಲ್ಲಿ, ಗಾಯದ ಮೇಲೆ ವೀಳ್ಯದ ಎಲೆಗಳನ್ನು ಹಾಕಿ ಮತ್ತು ಬಟ್ಟೆಯ ಸಹಾಯದಿಂದ ಅದನ್ನು ಲಘುವಾಗಿ ಕಟ್ಟಿಕೊಳ್ಳಿ. ಗಾಯವನ್ನು ತ್ವರಿತವಾಗಿ ಗುಣಪಡಿಸಲು ಇದು ಸಹಾಯ ಮಾಡುತ್ತದೆ.
undefined
ತಲೆನೋವು ನಿವಾರಿಸಿತಲೆನೋವು ನಿವಾರಿಸಲು ವೀಳ್ಯದ ಎಲೆಗಳನ್ನು ಸಹ ಬಳಸಲಾಗುತ್ತದೆ. ನೋವಿನಿಂದ ಪರಿಹಾರ ಪಡೆಯಲು, ಬಟ್ಟೆಯ ಸಹಾಯದಿಂದ ಕೆಲವು ಸಮಯದವರೆಗೆ ಕೆಲವು ವೀಳ್ಯದ ಎಲೆಗಳನ್ನು ಕಿವಿಯ ಸುತ್ತಲೂ ಕಟ್ಟಬೇಕು. ಇದು ತಲೆನೋವಿನಲ್ಲಿ ಪರಿಹಾರ ನೀಡುತ್ತದೆ.
undefined
ಮಕ್ಕಳ ಶೀತಮಕ್ಕಳಲ್ಲಿ ಉಂಟಾಗುವ ಶೀತವನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಬಳಸಬಹುದು. ಚಿಕಿತ್ಸೆಗಾಗಿ, ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಅದಕ್ಕೆ ಕ್ಯಾಸ್ಟರ್ ಆಯಿಲ್ ಹಚ್ಚಿ, ನಂತರ ಈ ಎಲೆಗಳನ್ನು ಮಗುವಿನ ಎದೆಯ ಮೇಲೆ ಕಟ್ಟಿಕೊಳ್ಳಿ. ಇದು ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
undefined
ಕೆಮ್ಮಿಗೂ ಮದ್ದುಒಣ ಕೆಮ್ಮನ್ನು ಗುಣಪಡಿಸಲು ವೀಳ್ಯದೆಲೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಕೆಲವು ವೀಳ್ಯದ ಎಲೆಗಳನ್ನು ಪುಡಿಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ. ಈ ರಸದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.
undefined
click me!