ತೆಂಗಿನಕಾಯಿಯಿಂದ ರಾಹು-ಕೇತುವಿನ ಸಮಸ್ಯೆಗಳು ನಿವಾರಣೆಯಾಗುತ್ತವೆ: ತೆಂಗಿನಕಾಯಿ ಪರಿಹಾರದಿಂದ, ಶನಿಯ ನೋವನ್ನು ನಿವಾರಿಸೋದು ಮಾತ್ರವಲ್ಲದೆ, ರಾಹುವಿನ ಅಡೆತಡೆ ಮತ್ತು ಕೇತುವಿನ ತೊಂದರೆಯನ್ನು ಸಹ ನಿವಾರಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಣ ತೆಂಗಿನಕಾಯಿಯಲ್ಲಿ ಸಕ್ಕರೆಯನ್ನು ತುಂಬಿಸಿ ಅದನ್ನು ಯಾರು ನೋಡದ ಸ್ಥಳದಲ್ಲಿ ನೆಲವನ್ನು ಅಗೆದು ಇಡಬೇಕು. ಆ ಮೂಲಕ, ರಾಹು-ಕೇತುವಿನ ಕಷ್ಟಗಳು ದೂರವಾಗುತ್ತವೆ. ಆ ತೆಂಗಿನಕಾಯಿಯನ್ನು ಇರುವೆ(Ant) ಮತ್ತು ಇತರ ಜೀವಿಗಳು ನಾಶಪಡಿಸಿದ ತಕ್ಷಣ, ನಿಮ್ಮ ರಾಹು-ಕೇತುವಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.