ಪುರಾಣದ ಕಥೆಯ ಪ್ರಕಾರ ಒಮ್ಮೆ ಪಾಂಡವರ ವಂಶಸ್ಥನಾದ ರಾಜ ಜನ್ಮೇಜಯನು ನಾಗ ಯಜ್ಞವನ್ನು ಮಾಡಿದನು, ಇದರಲ್ಲಿ ಅನೇಕ ಜಾತಿಯ ಸರ್ಪಗಳು ಭಸ್ಮವಾಯಿತು ಎಂದು ಭವಿಷ್ಯ ಪುರಾಣದ ಕಥೆಯಲ್ಲಿ ಹೇಳಲಾಗಿದೆ. ಆದರೆ ತಕ್ಷಕ್ ನಾಗ ದೇವರಾಜ ಇಂದ್ರನ ಆಸನಕ್ಕೆ ಸುತ್ತಿದ್ದರಿಂದ, ಇಂದ್ರನ ಸಮೇತ, ಆಸನ ಮತ್ತು ತಕ್ಷಕ್ ನಾಗ (Takshaka Naga) ಅಗ್ನಿಗೆ ಆಹುತಿಯಾಗುವವರಿದ್ದರು, ಆದರೆ ಅಷ್ಟರಲ್ಲೇ ಯಜ್ಞವನ್ನು ನಿಲ್ಲಿಸಲಾಯಿತು. ಇದರಿಂದ ನಾಗ ವಂಶ ಸಂಪೂರ್ಣವಾಗಿ ನಾಶವಾಗೋದು ತಪ್ಪಿತು.